Showing posts with label ಕವನ. Show all posts
Showing posts with label ಕವನ. Show all posts

Thursday, September 25, 2008

ಇಲ್ಲ... ಇಲ್ಲ.. ಇಲ್ಲ

ಯಾಕೋ ಮೊದಲಿನಂತೆ
ಬರೆಯಬೇಕಿನಿಸುವುದಿಲ್ಲ,
ಬರೆಯಲೇ ಬೇಕೆಂದು ಕುಳಿತಾಗ
ಮನಸು ಓಡುವುದಿಲ್ಲ,
ಬರೆಯಲು ಮನಸು ಬಂದಾಗ
ಸಮಯ ನನ್ನಲ್ಲಿರುವುದಿಲ್ಲ.

ನಾಲ್ಕು ಚೌಕದ ಒಳಗಿದ್ದಾಗ
ಹೊರ ಪ್ರಪಂಚದರಿವಿರುವುದಿಲ್ಲ,
ಹೊರಗೆ ಹೋಗಲೆಂದರೆ
ಕೆಲಸ ಬಿಡುವುದಿಲ್ಲ,
ಹೊರಗೆ ಕಾಲಿಟ್ಟಾಗ
ಸಮಯ ನನ್ನಲ್ಲಿರುವುದಿಲ್ಲ.

ದಿನದ ಕೆಲಸದ ನಡುವೆ
ಸಮಯದ ಅರಿವಿರುವುದಿಲ್ಲ,
ಮಳೆ ಗಾಳಿ ಚಳಿ ಬಿಸಿಲು
ಎನಗೆ ತಿಳಿಯುವುದಿಲ್ಲ,
ತಿಳಿಯುವ ಮನಸ್ಸಿದ್ದರೂ
ಸಮಯ ನನ್ನಲ್ಲಿರುವುದಿಲ್ಲ.

Monday, June 30, 2008

ಆ ಬೆಟ್ಟದ ತುದಿಯಲ್ಲಿ

ಮನದಲ್ಲಿ ನಲಿವಿತ್ತು,
ಮುಖದಲ್ಲಿ ನಗುವಿತ್ತು,
ಜೊತೆಗೆ ಚುಮು ಚುಮು ಚಳಿಯಿತ್ತು,
ಆ ಬೆಟ್ಟದ ತುದಿಯಲ್ಲಿ

ಯಾರ ಹಂಗಿರಲಿಲ್ಲ,
ಯಾರ ಕೊಂಗಿರಲಿಲ್ಲ,
ಯಾರ ನೆನಪೂ ಇರಲಿಲ್ಲ,
ಆ ಬೆಟ್ಟದ ತುದಿಯಲ್ಲಿ

ಅಲ್ಲಿ ಮೌನವಿತ್ತು,
ಅಲ್ಲಿ ಶೂನ್ಯವಿತ್ತು,
ಅಲ್ಲಿ ಧ್ಯಾನವಿತ್ತು,
ಆ ಬೆಟ್ಟದ ತುದಿಯಲ್ಲಿ

ದಿನದ ಜಂಜಾಟವಿರಲಿಲ್ಲ,
ದಿನದ ಕೆಲಸವಿರಲಿಲ್ಲ,
ದಿನದ ಒತ್ತಡವಿರಲಿಲ್ಲ
ಆ ಬೆಟ್ಟದ ತುದಿಯಲ್ಲಿ

- ಕೆಲವು ದಿನಗಳ ಹಿಂದೆ ಮುನ್ನಾರಿಗೆ ಹೋದಾಗ ನನಗನಿಸಿದ್ದು. ಮೇಲಿನ ಚಿತ್ರ ಮುನ್ನಾರಿನ ಟಾಪ್ ಸ್ಟೇಷನ್ ದು

Monday, April 16, 2007

ಬಿಡು ಗೆಳೆಯ

ಬಿಡು ಗೆಳೆಯ ನನ್ನನ್ನು
ಬಾಂದಳದ ಬಿಳಿ ಮೋಡದಂತೆ
ಒಂಟಿಯಾಗಲು ಬಿಡು ನನ್ನ
ನಿಂತೆ ನಿಂತಿರುವ ಬಾಹುಬಲಿಯಂತೆ

ಮಾನಸವೆ ಹೆಪ್ಪುಗಟ್ಟಿದೆ
ನಿಂತ ಜೀವದ ತುಂಬ
ನಕ್ಷತ್ರ ನಿಂತು ಬಿಟ್ಟಿದೆ
ಕಡಲ ನಾಭಿಯ ತುಂಬ

ಏನು ಮಾಡಲಿ ಹೇಳು ಗೆಳೆಯ
ಚಿಲ್ಲರೆಯಾಡುವ ಮಾತಿಗೆ
ಕಾಯುತಿದೆ ಇರುಳು ಅರಳುವ ಗ್ರಹಣ
ಬೆಂಕಿ ನೀಲಿಯ ಹೂವಿಗೆ

ನಂಬುವುದು ಹೇಗೆ
ಕಿತ್ತು ತಿನ್ನುವ ಮಾಗಿಗೆ
ನಂಬದಿರುವುದು ಹೇಗೆ
ಮರದ ಮೇಲಿನ ಕಾಯಿಗೆ

1999ನೇ ಸಾಲಿನಲ್ಲಿ ನಡೆದ "ಅಂತರ ಕಾಲೇಜ್ ಕವನ ಸ್ಪರ್ದೆ"ಯಲ್ಲಿ ಪ್ರಶಸ್ತಿ ಗಳಿಸಿದ ಕವನ