Monday, April 16, 2007

ಬಿಡು ಗೆಳೆಯ

ಬಿಡು ಗೆಳೆಯ ನನ್ನನ್ನು
ಬಾಂದಳದ ಬಿಳಿ ಮೋಡದಂತೆ
ಒಂಟಿಯಾಗಲು ಬಿಡು ನನ್ನ
ನಿಂತೆ ನಿಂತಿರುವ ಬಾಹುಬಲಿಯಂತೆ

ಮಾನಸವೆ ಹೆಪ್ಪುಗಟ್ಟಿದೆ
ನಿಂತ ಜೀವದ ತುಂಬ
ನಕ್ಷತ್ರ ನಿಂತು ಬಿಟ್ಟಿದೆ
ಕಡಲ ನಾಭಿಯ ತುಂಬ

ಏನು ಮಾಡಲಿ ಹೇಳು ಗೆಳೆಯ
ಚಿಲ್ಲರೆಯಾಡುವ ಮಾತಿಗೆ
ಕಾಯುತಿದೆ ಇರುಳು ಅರಳುವ ಗ್ರಹಣ
ಬೆಂಕಿ ನೀಲಿಯ ಹೂವಿಗೆ

ನಂಬುವುದು ಹೇಗೆ
ಕಿತ್ತು ತಿನ್ನುವ ಮಾಗಿಗೆ
ನಂಬದಿರುವುದು ಹೇಗೆ
ಮರದ ಮೇಲಿನ ಕಾಯಿಗೆ

1999ನೇ ಸಾಲಿನಲ್ಲಿ ನಡೆದ "ಅಂತರ ಕಾಲೇಜ್ ಕವನ ಸ್ಪರ್ದೆ"ಯಲ್ಲಿ ಪ್ರಶಸ್ತಿ ಗಳಿಸಿದ ಕವನ

No comments: