Thursday, May 3, 2007

ವಿಶ್ವ ಗೋ ಸಮ್ಮೇಳನ

ಏತ್ತ ನೋಡಿದರತ್ತ ಜನ ಸಾಗರ, ಏಲ್ಲವೂ ಶಿಸ್ತುಮಯ, ಗಲಾಟೆ, ಗೌಜುಗಳಿರಲಿಲ್ಲ, ಏಲ್ಲರಲ್ಲೂ ಮುಂದೆ ಏನಿರಬಹುದೆಂಬ ಕುತೂಹಲ, ಬಾಯಾರಿಕೆಯ ತಣಿಯಲು ಮದ್ಯ ಮದ್ಯ ಇದ್ದ ಪಾನೀಯ ಕೌಂಟರ್ ಗಳು, ಅಮೃತಧಾರ ಗೋಲೋಕ, ಕಾಮಧೇನು ತುಲಾಭಾರ, ಮರುಜನ್ಮಪಡೆದ ಏಷ್ಟೋ ಹಸುಗಳು (ಕಸಾಯಿಖಾನೆಗೆ ಹೋಗ್ತಾಯಿದ್ದ ಹಸುಗಳು ಕಟುಕರಿಂದ ಪಾರಾಗಿ ಬಂದವು), ಸತತ ೨೪ ಘಂಟೆ ನಡೆಯುತ್ತಿದ್ದ ಭಜನೆ ಮತ್ತು ವೇಣು ನಿನಾದ, ಹರಿದು ಬರುತ್ತಿರುವ ಭಕ್ತರ ಕಾಣಿಕೆಗಳನ್ನು ಜೋಡಿಸಿಟ್ಟ ಸುವಸ್ತು ಸಂಗ್ರಹಾಲಯ...ಒಂದೇ.. ಎರಡೇ.... ಇದು "ವಿಶ್ವ ಗೋ ಸಮ್ಮೇಳನದ" ಕೆಲವು ಅನುಭವಗಳು...

9 ದಿನಗಳಲ್ಲಿ ಸುಮಾರು 12-13 ಲಕ್ಷಕ್ಕೂ ಜನ ಪ್ರವಾಹದಂತೆ ಹರಿದು ಬಂದಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿಯೇ ಇಷ್ಟು ಜನ ಸೇರಿದ್ದು ಬಹುಶಃ ಇದೇ ಮೊದಲು ಅನ್ಸತ್ತೆ. ಶಿಸ್ತು ಬದ್ದ ಕಾರ್ಯಕರ್ತರುಗಳ ದೊಡ್ಡ ದಂಡೇ ಅಲ್ಲಿತ್ತು.ಏಲ್ಲರಲ್ಲೂ ಒಂದು ರೀತಿಯ ಉತ್ಸಾಹ ಮನೆ ಮಾಡಿತ್ತು.

ಹಿಂದೊಂದು ಕಾಲವಿತ್ತು. ಪ್ರತೀವರ್ಷ ರಾಮನವಮಿಗೆ ರಥೆ ಎಳೆಯಲ್ಲಿಕ್ಕೆ ಜನರನ್ನು ಕರೆಸ್ತಾಯಿದ್ರು. ಯಾಕೆಂದ್ರೆ ಮಠ ಅಧೋಗತಿಯಲ್ಲಿತ್ತು ಅಂತ ಹೇಳ್ತಾರೆ. ಆದರೆ ಈಗ ಮಠದ ಚಿತ್ರಣವೇ ಬದಲಾಗಿದೆ. ಮೊದಲು ಬರೀ ಹವ್ಯಕರ ಶ್ರದ್ಧಾಕೇಂದ್ರವಾಗಿದ್ದ ಶ್ರೀ ಮಠ ಇಂದು ಜಾತಿಬೇದವಿಲ್ಲದೆ ಜನರನ್ನು ಸೆಳಿತಾಯಿದೆ. ಇದರ ಕೇಂದ್ರಬಿಂದು ಶೀ ರಾಘವೇಶ್ವರ ಭಾರತೀ ಮಹಸ್ವಾಮಿಗಳು. ತಮ್ಮ 19 ನೇ ವಯಸ್ಸಿನಲ್ಲಿ ಅಂದರೆ ಏಪ್ರಿಲ್ 94 ರಂದು ಸಂನ್ಯಾಸ ತೆಗೆದುಕೊಂಡ ಶ್ರೀಗಳವರು ಮಠದ ಅಧಿಕಾರ ವಹಿಸಿಕೊಂಡಿದ್ದು ಕೆಲವೇ ವರ್ಷಗಳ ಹಿಂದೆ.

ಈ ದೊಡ್ಡ ಕಾರ್ಯಕ್ರಮಕ್ಕೆ ನಾನೊಂದು ಚಿಕ್ಕ ಅಳಿಲು ಸೇವೆಯಾಗಿ http://vishwagou.org ವೆಬ್ ಸೈಟ್ ಡಿಸೈನ್ ಮಾಡಿದೆ.

1 comment:

Sushrutha Dodderi said...

ಗೋಸಮ್ಮೇಳನದ ಬಗ್ಗೆ ನನ್ನ ವರದಿ ಇಲ್ಲಿದೆ.