Thursday, March 13, 2008

comfortzone

ಘಟನೆ 1
ಮೊನ್ನೆ ಆತ ಮತ್ತೆ ಬಸ್ಸಲ್ಲಿ ಬಂದ. ಬಸ್ ನಲ್ಲಿ ಇದ್ದ ಎಲ್ಲರ ಹುಬ್ಬು ಒಮ್ಮೆ ಮೇಲೆ ಹೋಯ್ತು. ಕೆಲವರು ಅವನ ಬಸ್ಸು ಮಿಸ್ಸಾಗಿ ಇಲ್ಲಿಗೆ ಬಂದ ಅಂದ್ಕೊಂಡ್ರು. ಇನ್ನು ಕೆಲವರು ಮಿಸ್ಸಾಗಿ ಈ ಬಸ್ಸಿಗೆ ಬಂದ ಅಂದ್ಕೊಂಡ್ರು. ಎಲ್ಲರಿಗೂ ಆಶ್ಚರ್ಯ!!!. ಒಂದು ರೀತಿ ಪೆಕರನ ಹಾಗೆ ನಗ್ತಾ ಒಳಗೆ ಬಂದ. ಎಲ್ಲ ಯಾವ ರೀತಿ ಸ್ವಾಗತಿಸಬಹುದು ಅನ್ನೋ ಭಯ ಅವನಲ್ಲಿತ್ತು. ಬಂದು ಹಿಂದೆ ನಾವು ಕೂರುವ ಜಾಗಕ್ಕೆ ಬಂದ. ಒಬ್ಬ ಕೇಳೇಬಿಟ್ಟ "ಯಾಕೆ ಆ ಬಸ್ಸು ಮಿಸ್ಸಾಯ್ತಾ?" ಇವನು ಸುಮ್ಮನೆ ನಕ್ಕ. ಕಳೆದ ತಿಂಗಳಷ್ಟೇ ತಾನು ಕಂಪನಿ ಬಿಡ್ತಾಯಿದೀನಿ, ಒಳ್ಳೆ ಕೆಲ್ಸ ಸಿಗ್ತು. ಟಾ ಟಾ ಅಂದೆಲ್ಲಾ ಬೊಗಳೇ ಬಿಟ್ಟು ಹೋದವ ಒಂದು ತಿಂಗಳೊಳಗೆ ವಾಪಾಸು ಬಂದಿದ್ದ.

ಘಟನೆ 2
ನಾನು ಅವ್ನಿಗೆ ಬಹಳಷ್ಟು ಸಲ ಫೋನ್ ಮಾಡಿದ್ದೆ. ನೀನು ಈಗ ಇರೋ ಕಂಪನಿ ಚೆನ್ನಾಗಿ ನಡಿತಾಯಿಲ್ಲ. ನಿನಗೆ ಸಂಸಾರವಿದೆ. ಕಂಪನಿ ಯಾವಾಗ ಮುಚ್ಚತ್ತೆ ಅಂತ ಹೇಳೊಕಾಗೊಲ್ಲ, ಬೇರೆ ಕಡೆ ಹುಡ್ಕೋ ಅಂತ. ಅದ್ಕೆ ಆತ ಹೌದು ಕಂಪನಿ ಚೆನ್ನಾಗಿ ನಡಿತಾಯಿಲ್ಲ ಅಂತ ನನಗೂ ಗೊತ್ತು. ಕಂಪನಿ ಚೈಂಜ್ ಮಾಡ್ತೀನಿ ಅಂದಿದ್ದ. ಆರು ತಿಂಗಳಾದ್ರೂ ಎನೂ ಸುದ್ದಿಯಿಲ್ಲ. ಸುಮ್ಮನೆ ಫೋನ್ ಮಾಡಿ ಕೇಳ್ದೆ ಎಲ್ಲಿದೀಯಾ ಅಂತ. ಆತ ಅಲ್ಲೇ ಇದ್ದ !!!

ಘಟನೆ 3
ಅವನನ್ನು ಅದೇ ಮೊದ್ಲು ನಾನು ನೋಡಿದ್ದು. ಆತನಿಗೆ ಸುಮಾರು 35-45 ವರ್ಷವಾಗಿರಬಹುದು. ಅಲ್ಲಿಗೆ ಬಂದವರೆಲ್ಲಾ ನನಗೆ ಪರಿಚಯಸ್ತರು. ಆತ ಮಾತ್ರ ನನಗೆ ಹೊಸಬ. ಉಳಿದವರಿಗೆ ಆತ ಪರಿಚಯ. ನಾನು ಬೆಂಗಳೂರಿಗೆ ಬಂದು ಬಹಳ ವರ್ಷವಾಗಿತ್ತು. ಬಹುಶಃ ಮನೆಯಾಳತನಕ್ಕೆ ಬಂದಿರಬಹುದೆಂದುಕೊಂಡೆ. ಆದ್ರೆ ಅಲ್ಲಿ ಯಾರ ಮನೆಯಲ್ಲೂ ಬರೀ ಹೆಣ್ಣು ಮಕ್ಕಳಿರಲಿಲ್ಲ. ಮನಸ್ಸಲ್ಲೀ ಒಂದು ರೀತಿ ಗೊಂದಲವಾಯ್ತು. ಸಂಜೆ ಮನೆಗೆ ಹೋದಾಗ ಅಮ್ಮನ ಹತ್ರ ಕೇಳ್ದೆ. ಆತ ಯಾರೂ ಅಂತ. ಅಮ್ಮ ಹೇಳಿದ್ಲು ಅಂವ ಶಂಕ್ರಣ್ಣನ ಮಗ!. ಶಂಕ್ರಣ್ಣಂಗೆ ಒಬ್ಬನೇ ಮಗ ಅಂದ್ಕೊಂಡಿದ್ದೆ. ಕೊನೆಗೆ ಗೊತ್ತಾಯ್ತು ಈತ ಅವನ ಹಿರೇ ಮಗನಾಗಿದ್ದ. ಯಾವಾಗಲು ಅವನಾಯಿತು, ಅವನ ಮನೆಯಾಯಿತು. ಊರ ಯಾರ ಮನೆಗೂ ಆತ ಹೋಗ್ತಾಯಿರಲಿಲ್ಲ.

ಘಟನೆ 4
ಹೌದು ಅದೇ ಹಳೆಯ ಡ್ರೈವರ್ ರಾಜ. ಮುಖ ಸುಕ್ಕುಗಟ್ಟಿತ್ತು. ತಲೆ ಕೂದಲು ಉದಿರಿತ್ತು. ಮಾತಲ್ಲಿ ಮೊದಲಿನ ರೀತಿಯ ಗಡಸು ಇರಲಿಲ್ಲ. ನಿದಾನವಾಗಿ ಡ್ರೈವಿಂಗ್ ಮಾಡ್ತಾಯಿದ್ದ. ಕಣ್ಣಲ್ಲಿ ಹೊಳಪಿರಲಿಲ್ಲ. ಮೊದಲಿನ ಹಾಗೆ ಹುಡುಗಿಯರು/ಹೆಂಗಸರನ್ನು ಕಂಡಾಗ ಹಾರ್ನ್ ಮಾಡ್ತಾಯಿರಲಿಲ್ಲ. ಮೊನ್ನೆ ನನ್ನ ನೋಡಿ ನಕ್ಕಿದ್ದ. ಮಾತಾಡಲು ಆಸಕ್ತಿಯಿದ್ದ ಹಾಗೆ ಕಾಣ್ಲಿಲ್ಲ.
~~~~~~~~~~~~~~~
ಈ ಮೇಲ್ಕಂಡ ಘಟನೆ ನೋಡಿದಾಗ ನಮಗೆ ಗೊತ್ತಾಗತ್ತೆ ಇವ್ರು comfortzone ನಲ್ಲಿ ಇದಾರೆ ಅಂತ. ತಾವು ಬದ್ಲಾಗಬೇಕು ಅನ್ಸಿದ್ರು ಯಾರೂ ರಿಸ್ಕ್ ತಗೊಳ್ಳೋಕೆ ತಯಾರಿರಲಿಲ್ಲ. ಅನಿವಾರ್ಯ ಅನ್ನಿಸ್ಸೋ ತನಕ ಇವ್ರೂ ಹಾಗೆ ಇರ್ತಾರೆ. ಅನಿವಾರ್ಯವಾದ್ರೆ ಮಾತ್ರ ಬದ್ಲಾಯಿಸ್ತಾರೆ. ಈ ರೀತಿ ಜನ ಎಲ್ಲ ಕಡೆ ಕಾಣಿಸ್ತಾರೆ. ಕೆಲವು ಗುಣಗಳು ನಮ್ಮಲ್ಲೂ ಇರ್ತವೆ. ಹೆಚ್ಚಿನ ಜನ ಜೀವನದಲ್ಲಿ ರಿಸ್ಕ್ ತಗೋಳ್ಳೋಕೆ ಹೋಗೊಲ್ಲ. ಯಾಕೆ ತಗೋಬೇಕು ಅಂತ ಇರ್ತಾರೆ. ಯಾರಾದ್ರು ತಗೊಂಡು ಜೀವನದಲ್ಲಿ ಯಶಸ್ವಿಯಾದ್ರೆ ಅದನ್ನು ಕೇಳಿ ಖುಷಿ ಪಡ್ತಾರೆ ವಿನಹಃ ತಾವು ತೆಗೆದುಕೊಳ್ಳೋಲ್ಲ. ತಮ್ಮ ಮಕ್ಕಳಲ್ಲಿ ತಾವು ಕಂಡ ಕನಸ್ಸನ್ನು ನನಸ್ಸು ಮಾಡೋಕೆ ನೋಡ್ತಾರೆ. ಮಕ್ಕಳು ದೊಡ್ಡವರಾದಾಗ ಹೆಚ್ಚಿನ ಜನ ತನ್ನ ಅಪ್ಪ ಮಾಡಿದ ಹಾಗೆ ಮಾಡ್ತಾರೆ. ಅವರು ತಮ್ಮ ಮಕ್ಕಳಲ್ಲಿ ತಾವು ಕಂಡ ಕನಸ್ಸನ್ನು ನನಸ್ಸು ಮಾಡೋಕೆ ನೋಡ್ತಾರೆ.
ಇದು ಪುನರಾವರ್ತನೆಯಾಗ್ತಾಯಿರತ್ತೆ. ಒಂದು ದಿನ ಗಂಟು ಮೂಟೆ ಕಟ್ಟೋ ಹೊತ್ತಿಗೆ ಕೆಲವರಿಗೆ ಅರಿವಾಗಿರತ್ತೆ. ಇನ್ನು ಕೆಲವರಿಗೆ ಅರಿವಾಗೋದೇಯಿಲ್ಲ

3 comments:

Anonymous said...

ಘಟನೆ ೧ ಬಹುಷ್ಯ ಈಗಿನ ಪರಿಸ್ತಿತಿಲಿ ಎಲ್ಲರಿಗೂ ಅನ್ವಯಿಸುತ್ತೆ

Anonymous said...

"comfortzone" ಲೇಖನ ತುಂಬ ಚೆನ್ನಾಗಿದೆ ...ಎರಡನೇ ಘಟನೆ ನನ್ನ ಜೀವನದಲ್ಲೂ ನಡೆದಿದೆ

Devaiah A M said...

Good one & so very true