Monday, August 13, 2007

ಕ್ರಿಷ್ಣ ಮತ್ತು ದೆವ್ವ

ಅಮವಾಸ್ಯೆಯ ರಾತ್ರಿ 11:30, ಕ್ರಿಷ್ಣ ಮತ್ತು ಜುಟ್ಟು ಸೈಕಲ್ ಮೇಲೇರಿ ಮನೆಗೆ ಹೊಂಟಿದ್ದ. ಆ ಸೈಕಲ್ ಅವನ ಅಪ್ಪ ಶೀನಣ್ಣ ಸಣ್ಣಕಿದ್ದಾಗ ತಗಂಡಿದ್ದಾಗಿತು. ಅಪರೂಪಕ್ಕೊಮ್ಮೆ ಕೆಲಸ ನಿರ್ವಹಿಸುವ ಬ್ರೇಕು ಟೈರ್, ಪೆಡಲ್ ಬಿಟ್ಟರೆ ಉಳಿದುದಕ್ಕೆಲ್ಲ ಕ್ರಿಷ್ಣನ ಅಪ್ಪಂಗೆ ಆದಷ್ಟೇ ವಯಸ್ಸಾಗಿತ್ತು. ಮನೇಲಿ ಅಪ್ಪ ಅಮ್ಮ ಫಿಲ್ಮು ನೋಡಕೆ ಬಿಡ್ತ್ವಲ್ಲೆ ಹೇಳಿ ಕ್ರಿಷ್ಣ ಸುಬ್ಬಣ್ಣನ ಮನೆಗೆ ಹೋಗ್ತಿದ್ದ. ಅವತ್ತು ಬ್ಯಾಟರಿ ತಗಂಡು ಹೋಗಕೆ ಮರ್ತೇ ಹೋಗಿತ್ತು. ಫಿಲ್ಮ್ ಮುಗಿದ್ ತಕ್ಷಣ ಸುಬ್ಬಣ್ಣ ಲಾಟೀನು ಕೊಡ್ತಿ ಅಂದ್ರು ತಗಳದೇ ಕಪ್ಪಲ್ಲೇ ಇಬ್ರು ಹೊಂಟಿದ್ದ. ದಿನಾ ಒಡಾಡೋ ದಾರಿಯಾಗಿದ್ರಿಂದ ಸುಬ್ಬಣ್ಣನೂ ಸುಮ್ನಾನಾದ. ಸುಬ್ಬಣ್ಣನ ಮನೆ ಹತ್ರ ರಸ್ತೆ ಸ್ವಲ್ಪ ಏರು ಇದ್ದಿದ್ರಿಂದ ಸೈಕಲ್ ತಳ್ಕಿಂಡೇ ಹೋದ. ಚೂರು ಮುಂದೆ ಹೋದ ತಕ್ಷಣ ಇಳಿ ಇತ್ತು.ಶುರುನಲ್ಲೇ ಸಣ್ಣ ಮುರಿ. ಅದು ಬೇರೆ ಕಗ್ಗತ್ತಲು. ಕ್ರಿಷ್ಣಂಗೆ ಸುಬ್ಬಣ್ಣ ಹೊರಡಕಿದ್ರೆ "ಇವತ್ತು ಅಮವಾಸ್ಯೆ, ನಿಧಾನ ಹೋಗಿ" ಅಂತ ಹೇಳಿದ್ದು ನೆನಪಾತು. ಸ್ವಲ್ಪ ಹೆದ್ರಿಕೆ ಆತು. ಜೊತೆಗೆ ಜುಟ್ಟು ಇದ್ದಿದ್ರಿಂದ ಧೈರ್ಯ ತಗಂಡ. ಮುರಿ ಹತ್ರ ಇಬ್ರೂ ಸೈಕಲ್ ಹತ್ತಿ ಹೊಂಟ. ಕ್ರಿಷ್ಣ ಸೈಕಲ್ ಹೊಡಿತಾಯಿದ್ದ. ಹಿಂದೆ ಜುಟ್ಟು. ಮುರಿನಲ್ಲಿ ಇಳಿತಾಯಿದ್ದ ಹಂಗೆ ಸೈಕಲ್ ಬುಡ್ ಅಂತ ಎಂತಕೋ ಹೊಡತ್ತು. ಎಂತೋ ಒಡಿಹೋದ ಹಂಗೆ ಆತು. ಕ್ರಿಷ್ಣ "ಅಪ್ಪಯ್ಯಾ...ಅಪ್ಪಯ್ಯಾ" ಅಂತ ಸೈಕಲ ಬಿಟ್ಟು ಮನೆ ಕಡೆ ಓಡಕೆ ಶುರು ಮಾಡ್ದ. ಜುಟ್ಟು ಅವನ ಮನೆ ಕಡೆ ಓಡಿಹೋದ.

ಅಪ್ಪಯ್ಯಾ.. ಅಪ್ಪಯ್ಯಾ.. ಕೂಗಿದ್ದು ಇಡೀ ಊರಿಗೇ ಕೇಳ್ತು. ಮಲಗಿದ್ದ ಶೀನಣ್ಣ ಕನಸ್ಸಲ್ಲಿ ಯಾರೋ ಕೂಗಿದ ಅಂತ ಮಾಡ್ಕಿಂಡ. ಆದ್ರೆ ಕೂಗದು ಇನ್ನು ಜೋರಾಗಿ ಕೇಳ್ತಾಯಿತ್ತು. ಕ್ರಿಷ್ಣ ಮನೇ ಕಡೆ ಓಡಿ ಬರ್ತಾಯಿದ್ದಿದ್ದ. ಇದು ತನ್ನ ಮಗಂದೇ ದ್ವನಿ ಅಂತ ಶೀನಣ್ಣಂಗೆ ಗೊತ್ತಾಗಿ ಬ್ಯಾಟರಿನೂ ತಗಳದೇ ಎದ್ದು ರಸ್ತೆಕಡೆ ಓಡಿದ. ಕಪ್ಪು ಬೇರೆ. ಕ್ರಿಷ್ಣಂಗೆ ಯಾವುದರ ಪರಿವೇ ಇಲ್ಲೆ. ಓಡಿ ಬರ್ತಾಯಿದ್ದ ಅಪ್ಪಂಗೆ ಡಿಕ್ಕಿ ಹೊಡೆದು ಮತ್ತೆ ದೆವ್ವಕ್ಕೆ ಡಿಕ್ಕಿ ಹೊಡಿದಿ ಅಂತ ಇನ್ನೊಂದು ಕಡೆ ಓಡಕೆ ಶುರು ಮಾಡಿದ. ಬಿದ್ದು ಸುದಾರಿಸ್ಕಿಂಡು ಮತ್ತೆ ಶೀನಣ್ಣ ಕ್ರಿಷ್ಣನ ಹಿಂದೆ ಓಡಿ ಹೋಗಿ ಅಂತೂ ಅವನ ಹಿಡಿದು ಏಂತಾತು ಅಂತ ಕೇಳ್ದ. ಮುರಿ ಹತ್ರ ದೇವ್ವ ತಂಗೆ ಡಿಕ್ಕಿ ಹೊಡತ್ತು ಅಂತ ಕ್ರಿಷ್ಣ ಹೇಳಕಿದ್ರೆ ಸುಮಾರು ಹೊತ್ತಾತು.

ಶೀನಣ್ಣಂಗೆ ಅಲ್ಲಿಗೆ ಹೋಗಿ ಸೈಕಲ್ ತರಕೆ ಹೆದ್ರಿಕೆ. ಕ್ರಿಷ್ಣನ್ನ ಮನೆಗೆ ಕರ್ಕಂಡು ಹೋದ.ಜುಟ್ಟು ಅಲ್ಲಿಂದ ಕಾಲು ಕಿತ್ತವ ಮನೆ ತನಕ ಒಂದೇ ಉಸಿರಲ್ಲಿ ಓಡಿ ಹೋಗಿ ಮುಚ್ಚಿಹಾಕ್ಕಿಂಡು ಮಲಗಿದ್ದ. ಇತ್ಲಗೆ ಶೀನಣ್ಣಂಗೆ ಎಂತ ಮಾಡದು ಅಂತ ಗೊತ್ತಾಗಲ್ಲೆ. ಅಷ್ಟು ಹೊತ್ತಿಗೆ ಊರಗಿದ್ದವೆಲ್ಲ ಎದ್ದು ಶೀನಣ್ಣನ ಮನೆ ಕಡೆ ಓಡಿ ಬಂದ. ಬರ್ತಾ ಗಣಪತಣ್ಣ ರಸ್ತೆ ಮದ್ಯೆ ಇದ್ದ ಸೈಕಲ್ ತಗಂಡು ಬಂದ. ಅವ್ರಿಗೆ ದೆವ್ವ ಕಾಣದೇ ಇದ್ದಿದ್ದು ಕ್ರಿಷ್ಣಂಗೆ ಆಶ್ಚರ್ಯ ಆತು. ಬಂದವೆಲ್ಲ ಎಂತಾತು ಅಂತ ಕೇಳ್ದ. ಶೀನಣ್ಣ ಅವಕ್ಕೆ ಕ್ರಿಷ್ಣನ ಪುರಾಣ ಎಲ್ಲ ಹೇಳ್ದ. ಸೈಕಲ್ ಗೆ ದೆವ್ವ ಬಂದು ಹೊಡದ್ದು, ಕ್ರಿಷ್ಣ ಓಡಿ ಬಂದಿದ್ದು ಏಲ್ಲ ಕೇಳಿ ಬಂದವಕ್ಕೆಲ್ಲ ಸ್ವಲ್ಪ ಹೆದ್ರಿಕೆ ಆತು. ಆದ್ರೆ ಗಣಪತಣ್ಣ ಮಾತ್ರ ಜೋರಾಗಿ ನಗಾಡಕೆ ಶುರು ಮಾಡಿದ. ಎಂತಕೆ ಅಂತ ಎಲ್ಲ ಕೇಳ್ದ. "ಅದು ದೆವ್ವನೂ ಅಲ್ಲ ಎಂತೂ ಅಲ್ಲ, ನಮ್ಮನೆ ದನಗಳು. ಮೇಯಕ್ಕೆ ಹೋಗಿದ್ದ ದನಗಳು ಈಗ ಬಂದ. ಕೊಟ್ಟಿಗೆಲಿ ಕಟ್ಟ್ ಹಾಕಿಕ್ಕೆ ಬೈಂದಿ. ಒಂದು ದನದ ಕೋಡಗೆ ಸೈಕಲ್ ಸೀಟು ಸಿಗ್ತು. ಬರ್ತಾಯಿರಕಿದ್ರೆ ನಿಮ್ಮನೆ ಸೈಕಲ್ ಸಿಗ್ತು. ತಗಂಡ್ ಬಂದಿ" ಅಂದ. ಎಲ್ಲ ಕ್ರಿಷ್ಣಂಗೆ ಬೈತಾ ಮನೆಗೆ ಹೊಂಟ

No comments: