Wednesday, April 18, 2007

ನಿವೃತ್ತಿ

ಎಂ.ಪಿ. ಪ್ರಕಾಶ್ ನಿವೃತ್ತಿ ವಿಷಯ ಕೇಳಿ ಒಂದು ರೀತಿ ಬೇಸರ ಹಾಗು ಆನಂದವಾಯ್ತು.
ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಅಂದ್ರೆ ಜನರಿಗೆ ಅಸಹ್ಯ ಭಾವನೆ ಬಂದಿದೆ. ಸಂಸತ್ತು,ವಿಧಾನಸಭೆಗಳಲ್ಲಿ ನಡೆಯುವ ಚರ್ಚೆ ನೋಡಿದರೇ ಅಥವಾ ಕೇಳಿದರೆ ಗೊತ್ತಾಗತ್ತೆ ಅವರ ಬಗ್ಗೆ, ಅವರ ಯೋಗ್ಯತೆ ಬಗ್ಗೆ. ಆಡಳಿತ ಪಕ್ಷದ ಹುಳುಕನ್ನು ಕಂಡು ಹಿಡಿಯಲು ವಿರೋದ ಪಕ್ಷದವರು ಹಗಲಿರುಳು ಪ್ರಯತ್ನಿಸಿದರೇ, ಅದನ್ನು ತೇಪೆ ಹಾಕಲು ಆಡಳಿತ ಪಕ್ಷ ಒದ್ದಾಡುತ್ತಿರುತ್ತದೆ. ಯಾವ ಪಕ್ಷ ಅಧಿಕಾರಕ್ಕೆ ಬಂದ್ರು ಇದೇ ಗತಿ. ಹೀಗೆ ಅಗ್ತಾ ಇದ್ರೆ ನಮ್ಮ ದೇಶ ಏಲ್ಲಿ ಮುಂದುವರಿಯತ್ತೆ. ತಮಗಿಷ್ಟ ಬಂದ ಹಾಗೆ ಸಾರ್ವಜನಿಕರ ದುಡ್ದು ಪೋಲು ಮಾಡೋದು, ಜಾತಿ ರಾಜಕಾರಣ ಮಾಡೋದು...ಅಬ್ಬ..ಒಂದೇ... ಏರಡೇ.. ಯಾರದ್ದೋ ದುಡ್ಡು... ಏಲ್ಲಮ್ಮನ ಜಾತ್ರೆ


ಇಲ್ಲಿ ವ್ಯಕ್ತಿತ್ವದ ಆದಾರದ ಮೇಲೆ ಸಚಿವ ಸ್ಥಾನವಿಲ್ಲ, ಜಾತಿವಾರು ಆಧಾರದ ಮೇಲಿದೆ.ಇಷ್ಟೆಲ್ಲಾ ಆದ್ರೂ ಜನ ಅವರನ್ನ ಕೇಳೋಲ್ಲ. ಯಾಕೆ ಅವರ ಉಸಾಬರಿ ಅಂತ ಸುಮ್ನೆ ಇರ್ತಾರೆ. ತಾವಾಯ್ತು, ತಮ್ಮ ಕೆಲಸವಾಯ್ತು. ಇದರ ನಡುವೆ ಅಲ್ಲೋ ಇಲ್ಲೋ ಒಂದೆರಡು ರಾಜಕಾರಣಿಗಳು ಸಮರ್ಥರಿರುತ್ತಾರೆ. ಅಂತಹರಲ್ಲಿ ಏಂ.ಪಿ.ಪ್ರಕಾಶ್ ಕೂಡ ಒಬ್ಬರು. ನಾನೇನು ರಾಜಕೀಯ ವಿಶ್ಲೇಕನಲ್ಲ. ಪತ್ರಿಕೆಗಳಿಂದ, ಹಾಗು ಅವರ ನಡ ನುಡಿಯಿಂದ ನನಗನಿಸಿದ್ದು. ಅದಕ್ಕೆ ಹೇಳಿದ್ದು ಅವರು ರಾಜಕಾರಣದಿಂದ ನಿವೃತ್ತರಾಗೋದು ಬೇಸರದ ವಿಷಯ.

ಇನ್ನು ಸಂತೋಷ ಯಾಕೇ ಅಂತ ಕೇಳಬಹುದು. ಅವರು ಬರೀ ರಾಜಕಾರಣಿ ಆಗಿರಲಿಲ್ಲ. ಅವರೊಲ್ಲೊಬ್ಬ ಕವಿಯಿದ್ದ. ಅವರಿಗೆ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಒಲವಿತ್ತು. ನಿವೃತ್ತಿಯ ನಂತರ ಅವರು ಹೆಚ್ಚಾಗಿ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಅದರಿಂದ ನಮ್ಮ ಸಾಹಿತ್ಯ ಲೋಕಕ್ಕೆ ಒಳಿತಲ್ಲವೇ.

ಇವೆರಡನ್ನು ತುಲನೆ ಮಾಡಿದರೆ, ಅವರು ರಾಜಕೀಯದಲ್ಲಿದ್ದರೆ ಒಳ್ಳೇದು ಅನ್ಸತ್ತೆ ಅಲ್ವೇ? ಹೊಲಸೆದ್ದ ರಾಜಕಾರಣಕ್ಕೆ ಏಂ.ಪಿ.ಪ್ರಕಾಶ್ ಅಂತವರು ಬೇಕು.

No comments: