Thursday, May 22, 2008

ಧರ್ಮಭಾರತೀ

ಧರ್ಮಭಾರತೀ’ಶಾಶ್ವತಮೌಲ್ಯಗಳನ್ನು ಸಕಾಲಿಕವಾಗಿ ಸಾರುವ ಮಾಸಿಕ. ಸನಾತನಧರ್ಮದ ಲೋಕಹಿತಕರವಾದ ಮೌಲ್ಯಗಳನ್ನು ಬಿತ್ತರಿಸುವ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂಕಲ್ಪವೇ ಪತ್ರಿಕೆಯ ಹುಟ್ಟಿಗೆ ಕಾರಣ. ಏಳು ವರ್ಷಗಳ ಈ ಪಯಣದಲ್ಲಿ ಅಸಂಖ್ಯ ವಿಷಯಗಳನ್ನು ಪತ್ರಿಕೆ ಸ್ಪರ್ಶಿಸಿದೆ. ಸನಾತನಧರ್ಮ ಬಗೆದಷ್ಟೂ ಬರಿದಾಗದ ಅನರ್ಘ್ಯ ಗಣಿ. ಆದರೂ ಈ ಗಣಿಯ ಉದ್ದಗಲಗಳ ಹೊರನೋಟ ಪತ್ರಿಕೆಯಿಂದ ಸಾಧ್ಯವಾಗಿದೆ
ದಿನಾಂಕ 14 ಮೇ 2008 ರಂದು ಧರ್ಮಭಾರತೀ ಮಾಸಪತ್ರಿಕೆಯು ಒಂದು ಮಹತ್ತರವಾದ ಹೆಜ್ಜೆಯನ್ನಿಟ್ಟಿತು. ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರಿಂದ ಧರ್ಮಭಾರತೀ ಅಂತರಜಾಲದಲ್ಲಿ ಅನಾವರಣಗೊಂಡಿತು.

ಇದು ನನ್ನ ಕನ್ನಡದಲ್ಲಿ ಮಾಡಿದ ಮೊದಲ ವೆಬ್ ಸೈಟ್ . ಇಲ್ಲಿ ನೀವು ಧರ್ಮಭಾರತೀ ಮಾಸಪತಿಕೆಯನ್ನು ಓದಬಹುದು.
ಅಂತರಜಾಲ ತಾಣ : http://dharmabharathi.org/

Monday, May 19, 2008

ಎಲ್ಲಿಗೇ ಪಯಣ.... ಯಾವುದೋ ದಾರೀ.... ಏಕಾಂಗಿ ಸಂಚಾರಿ

ಎಲ್ಲಿಗೇ ಪಯಣ.... ಯಾವುದೋ ದಾರೀ.... ಏಕಾಂಗಿ ಸಂಚಾರಿ

ಇದು ನನಗೆ ಬಹಳ ಇಷ್ಟವಾದ ಸಾಲುಗಳು. ಗೊತ್ತು ಗುರಿಯಿಲ್ಲದೇ ಜೀವನ ಸಾಗಿಸುವವರಿಗೆ ಇದು ಅನ್ವಯವಾಗುವಂತಹ ಸಾಲುಗಳು ಎನ್ನಬಹುದು. ಬೆಳಗ್ಗೆ ಎಫ್. ಎಮ್. ರೈನ್ಬೋ ನ ನೆನಪಿನ ದೋಣಿಯಲ್ಲಿ ಈ ಹಾಡನ್ನು ಕೇಳ್ದೆ. ಇದರ ರಚನೆಗಾರ ಆರ್ ಎನ್ ಜಯಗೋಪಾಲ್ ವಿಧಿವಶರಾದರು. ಅವರ ಆತ್ಮಕ್ಕೆ ಶಾಂತಿ ದೊರಕಲಿ.

ಚಿತ್ರ: 'ಸಿಪಾಯಿ ರಾಮು'

ಕಥೆ ಮುಗಿಯಿತೇ ಆರಂಭದ ಮುನ್ನ
ಲತೆ ಬಾಡಿ ಹೋಯಿತೆ ಹೂವಾಗುವ ಮುನ್ನ

ಎಲ್ಲಿಗೇ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ ಏಕಾಂಗಿ ಸಂಚಾರಿ
ಮಡದಿ ಮಕ್ಕಳು ಸ್ನೇಹಿತರನ್ನು ಮಣ್ಣಿನ ವಶ ಮಾಡಿ
ನಡೆದಿಹೆ ಇಂದು ಅಂಧನ ರೀತಿ ಶೋಕದೇ ಏನೋ ನಿನ್ನ ಗುರಿ ಎಲ್ಲಿಗೇ ಪಯಣ

ಸೋಲು ಗೆಲುವು ಸಾವು ನೋವು ಜೀವನದುಯ್ಯಾಲೆ
ಸಾಯುವ ಮುನ್ನ ಜನಿಸಿದ ಮಣ್ಣಾ ದರುಶನ ನೀ ಪಡೆದು
ತಾಯಿಯ ಮಡಿಲ ಧೂಳಲಿ ಬೆರೆತು ಶೂನ್ಯದೇ ಮುಗಿಸು ನಿನ್ನ ಕಥೆ
ಎಲ್ಲಿಗೇ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ ಏಕಾಂಗಿ ಸಂಚಾರಿ.