Thursday, September 20, 2007

ಮತ್ತಿನ ಗಮ್ಮತ್ತು

Friend ಕಳಿಸಿದ್ದು. ತುಂಬಾ ಚೆನ್ನಾಗಿದೆ.

ಒಮ್ಮೆ ಓದಿದ್ರೆ ಅರ್ಥ ಆಗೊಲ್ಲ, ಮತ್ತೆ ಮತ್ತೆ ಓದಿ, ಆಗ ಅರ್ಥವಾಗಬಹುದು (?)

This one is really good...... The way he presented the mail impressed me.

Peg after Peg

I never take risk while drinking

When I come from office in the evening, wife is cooking
I can hear the noise of utensils in the kitchen
I stealthily enter the house
Take out the bottle from my black cupboard
Shivaji Maharaj is looking at me from the photo frame
But still no one is aware of it
Becoz I never take a risk

I take out the glass from the rack above the old sink
Quickly enjoy one peg
Wash the glass and again keep it on the rack
Of course I also keep the bottle inside my cupboard
Shivaji Maharaj is giving a smile

I peep into the kitchen
Wife is cutting potatoes
No one is aware of what I did
Becoz I never take a risk

I: Any news on Iyer's daughter's marriage
Wife: Nope, she doesn't seem to be that lucky. Still they are looking out for her

I again come out; there is a small noise of the black cupboard
But I don't make any sound while taking out the bottle
I take out the glass from the old rack above sink
Quickly enjoy one peg

Wash the bottle and keep it in the sink
Also keep the Black Glass in the cupboard
But still no one is aware of what I did
Becoz I never take a risk

I: But still I think Iyer's daughter's age is not that much
Wife: What are you saying? She is 28 yrs old... like an aged horse
I: (I forgot her age is 28) Oh Oh...

I again take out potatoes out from my black cupboard
But the cupboard's place has automatically changed
I take out the bottle from the rack and quickly enjoy one peg in the sink

Shivaji Maharaj laughs loudly
I keep the rack in the potatoes & wash Shivaji Maharaj's photo & keep it in the black cupboard

Wife is keeping the sink on the stove
But still no one is aware of what I did
Becoz I never take a risk

I: (getting angry) you call Mr. Iyer a horse? If you say that again, I will cut your tongue...!
Wife: Don't just blabber something, go out and sit quietly...

I take out the bottle from the potatoes
Go in the black cupboard and enjoy a peg
Wash the sink and keep it over the rack
Wife is giving a smile

Shivaji Maharaj is still cooking
But still no one is aware of what I did
Becoz I never take a risk

I: (laughing) So Iyer is marrying a horse!!
Wife: Hey go and sprinkle some water on your face...

I again go to the kitchen, and quietly sit on the rack
Stove is also on the rack
There is a small noise of bottles from the room outside

I peep and see that wife is enjoying a peg in the sink
But none of the horses are aware of what I did
Becoz Shivaji Maharaj never takes a risk

Iyer is still cooking
And I am looking at my wife from the photo and laughing
Becoz I never take what???

Sunday, September 9, 2007

ಕೊಡೈಕೆನಾಲ್ ಪ್ರವಾಸ

ಬದುಕಿನ ಜಂಜಾಟದಿಂದ ಬೇಸತ್ತಿದ್ದ ಮನಕ್ಕೆ ತಂಪೆರೆಯಬೇಕೆಂಬ ಹಂಬಲದಿಂದ ನಾನು ಜಯಶ್ರೀ ಬಹಳದಿನಗಳಿಂದ ಎಲ್ಲಾದರು ಹೊರಗೆ ಹೋಗಬೇಕೆಂದು ಪ್ಲಾನ್ ಮಾಡ್ತಾಬಂದು ಕೊನೆಗೆ ಅದಕ್ಕೆ ಮುಹೂರ್ತವಿಟ್ಟು ಆಗಸ್ಟ್ 31 ರಂದು ಕೊಡೈಕೆನಾಲ್ ಗೆ ಹೋಗೋದು ಅಂತ ತೀರ್ಮಾನ ಮಾಡಿದ್ವಿ. ಆಗಸ್ಟ್ 31 ರ ರಾತ್ರಿ ಬಸ್ಸಿನಲ್ಲಿ ಹೊರಟ ನಮ್ಮ ಪ್ರಯಾಣ ಕೊಡೈ ತಲುಪಿದ್ದು ಮರುದಿನ ಬೆಳೆಗ್ಗೆ 10:30ಕ್ಕೆ. ಮೊದಲೇ ಕಾಟೇಜ್ ಬುಕ್ ಮಾಡಿದ್ದರಿಂದ, ಅವರು ಕಾರ್ ನಲ್ಲಿ ನಮ್ಮನ್ನು ಕಾಟೇಜಿಗೇ ಕರ್ಕೊಂಡು ಹೋದ್ರು. "ಸ್ವಜ" ಇದು ಕಾಟೇಜ್ ಹೆಸ್ರು, ಕೊಡೈಕೆನಾಲ್ ನಿಂ 6 ಕಿ.ಮಿ ದೂರದಲ್ಲಿದೆ. ಒಮ್ಮೆ ಅಲ್ಲಿಂದ ಸಿಟಿಗೆ ಹೋಗಲು Rs. 150 ಚಾರ್ಜ್ ಕೊಡಬೇಕು. ಕಾಟೇಜ್ ಬಹಳ ಚೆನ್ನಾಗಿದೆ. ಕಾಡಿನ ಮದ್ಯೆ ಕಾಟೇಜ್ . ಅಕ್ಕಪಕ್ಕ ಯಾರೂ ಇಲ್ಲ. ಎದುರಿಗೆ ಸುಂದರ ಕೊಡೈ ಗುಡ್ಡಗಳು, ಅದನ್ನು ಬಾಚಿತಬ್ಬಿದ ಮಂಜು, ಅಲ್ಲಿ ಇಲ್ಲಿ ಒಮ್ಮೋಮ್ಮೆಮಂಜನ್ನು ಸರಿಸಿ ನಮಗೆ ದರ್ಶನವೀಯುವ ರಮಣೀಯ ದೃಶ್ಯಗಳು ನಮ್ಮ ಕಣ್ ತಣಿಸಿದವು. ಕಾಟೇಜಿನ ಒಳಗೆ/ಹೊರಗೆ ಇದ್ದ ಸಣ್ಣ ಸಣ್ಣ ಕ್ಯಾಕ್ಟಸ್ ಗಿಡಗಳು ಸೌಂದರ್ಯಕ್ಕೆ ಮೆರಗನ್ನು ನೀಡಿದ್ದವು.


ಮದ್ಯಾನದ ತನಕ ಅಲ್ಲೇ ಇದ್ದು ದಣಿವಾರಿಸಿಕೊಂಡ ಊಟ ಮಾಡಿ ಕೊಡೈ ಲೇಕ್ ನತ್ತ ನಮ್ಮ ಪ್ರಯಾಣ ಮುಂದುವರೆಯಿತು. ಅಲ್ಲಿ ಬೋಟಿನಲ್ಲಿ ಇಡೀ ಕೊಡೈ ಸರೋವರವನ್ನು ಸುತ್ತು ಹೊಡೆದಿದ್ದು ಆಯ್ತು. ಬೋಟಿನ ಡ್ರೈವರ್ ನಮ್ಮನ್ನು ಫಿಲ್ಮಿನಲ್ಲಿ ತೋರಿಸೋ ಹಾಗೆ ನಿಲ್ಲಿಸಿ ಫೋಟೋಗಳನ್ನು ತೆಗೆದ. ದಡದ ಹತ್ತಿರ ನಿಲ್ಲಿಸಿದ್ದ ಬೋಟನ್ನು ನಾನು ಡ್ರೈವ್ ಮಾಡುತ್ತಿದ್ದ ಫೋಟೋವು ಅದರರಲ್ಲಿ ಇತ್ತು. ಕೊಡೈಲೇಕ್ ನೋಡಿದ ನಂತರ ನಾವು ಹೋಗಿದ್ದು ಬ್ರ್ಯಾಂಟ್ ಪಾರ್ಕಿಗೆ. ಅಲ್ಲಿದ್ದ ಸುಂದರಪುಷ್ಪಗಳನ್ನು ನೋಡಿ ಒಮ್ಮೆ ಲೇಕ್ ನ ಸುತ್ತು ಹಾಕೋಣ ಅಂತ ಪಾದಯಾತ್ರೆ ಶುರುಮಾಡಿದ್ವಿ. ಎಷ್ಟು ದೂರ ಹೋದ್ರು ಅಲ್ಲಿ ಮತ್ತೆ ತಿರುವು ಮತ್ತೆ ನಡೆಯೋದು. ಸುಮಾರು 3 ಕಿ.ಮಿ ನಡೆದು ಜಯಶ್ರೀ ಹತ್ರ ಬೈಸ್ಕೊಂಡು ಟ್ಯಾಕ್ಸಿಗೆ ಫೋನಾಯಿಸಿದೆ. ಮತ್ತೆ ಕಾಟೇಜ್ ತಲುಪಿದ್ದು ಸಂಜೆ 6ಕ್ಕೆ. ಕಾಟೇಜಿನಲ್ಲಿ ಬರಿಗಾಲಲ್ಲಿ ಒಡಾಡೋಕೆ ಆಗ್ತಾಯಿರಲಿಲ್ಲ. ಅಷ್ಟು ತಣ್ಣಗಿತ್ತು. ಅಲ್ಲೇ ಇದ್ದ ಫೈರ್ ಡ್ರಮ್ಮಿಗೆ ಕಟ್ಟಿಗೆ ಹಾಕಿ ಬೆಂಕಿ ಹಚಿ ಹತ್ತು ನಿಮಿಷದಲ್ಲಿ ಇಡೀ ರೂಮು ಬೆಚ್ಚ್ಗಾಗಿದ್ದು.

ಮರುದಿನ ಒಂದು ಟ್ಯಾಕ್ಸಿಯನ್ನು ತಗೊಂಡು ಕೊಡೈಕೆನಾಲ್ ಸುತ್ತಿದ್ವಿ. ನೋಡಿದ ಸ್ಥಳಗಳು Coakers Walk, Pillar rock, Suicide point, Pine forest, Shanti view, Upperlake view, bryant park etc

ಒಂದು ದಿನದ ಇಂಡಿಕಾ ಬಾಡಿಗೆ 700+150 (ಸಿಟಿಯಿಂದ ನಾವಿದ್ದ ಸ್ಥಳಕ್ಕೆ ಬಾಡಿಗೆ). ಸಂಜೆ ಕೊಡೈನಲ್ಲಿ ಮಳೆ, ಕಾಟೇಜಿನಲ್ಲಿ ಕುಳಿತು ಮಳೆಯಲ್ಲಿ ತೊಯ್ಯುತ್ತಿದ್ದ ಕೊಡೈ ಬಹಳ ಸುಂದರವಾಗಿ ಕಾಣ್ತಾಯಿತ್ತು. ಕಿಟಕಿಯ ಪಕ್ಕ ನಿಂತು ನೋಡುತ್ತಿದಾಗ ನೆನಪಾಗಿದ್ದು ಬಾಲ್ಯದಲ್ಲಿ ಜಗಲಿಯಲ್ಲಿ ಕುಳಿತು ಮಳೆಯನ್ನು ನೋಡುತ್ತಿದ್ದ ದೃಶ್ಯ. ಮಳೆಗಾಲದಲ್ಲಿ ಉರಿಗೆ ಹೋಗದೆ ಏಷ್ಟೋ ವರ್ಷಗಳಾಯಿತು. ಅಲ್ಲಿ ಹೋಗಿ ಸಣ್ಣವನಿದ್ದಾಗ ತೊಯ್ಯುತ್ತಿದ್ದ ಹಾಗೆ/ಆಡುತ್ತಿದ್ದ ಹಾಗೆ ಮಾಡಬೇಕಿನಿಸುತ್ತಿದ್ದೆ.
ಮರುದಿನ ಕೊಡೈನಿಂದ ೪೦ ಕಿ.ಮಿ ದೂರದಲ್ಲಿರುವ Mannavanur Lake ಗೆ ಹೋಗಿ ಸಂಜೆ ವಾಪಾಸಾದೆವು. ಇಂಡಿಕಾ ಬಾಡಿಗೆ 1100. ಬರುವಾಗ ಕೊಡೈನಲ್ಲಿ ಹೆಸರುವಾಸಿಯಾದ ಚಾಕ್ಲೇಟುಗಳನ್ನು ಖರಿದಿಸಿ ಕಾಟೇಜಿಗೆ ಹೋಗಿ ಬಿಲ್ಲ್ ಸೆಟ್ಟಲ್ ಮಾಡಿ ಮತ್ತೆ ಕ.ರಾ.ರ.ಸಂ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದೆವು.

ಕಾಟೇಜಿನಲ್ಲಿ ನಾವಿದ್ದಿದ್ದು 2 ರಾತ್ರಿ+ 3 ಹಗಲು.
ಕಾಟೇಜಿನ ಬಿಲ್ಲ್ 6000+400 (ಊಟಕ್ಕೆ ೧೦೦)
ಟ್ಯಾಕ್ಸಿ 850+1100 ಎಲ್ಲ ಸೇರಿ 10K ಬೇಕು.

ನಿಮಗೆ ಆಸಕ್ತಿಯಿದ್ದರೆ "ಸ್ವಜ" ಸಂಪರ್ಕಿಸಬಹುದು.

Tuesday, September 4, 2007

ಕಾರ್ ಆಕ್ಸಿಡೆಂಟ್

ಬಹುದಿನಗಳಿಂದ ಕೊಡೈಕೆನಾಲ್ ಗೆ ಹೋಗಬೇಕೆಂದುಕೊಂಡಿದ್ದು ಅದಕ್ಕೆ ಮೊನ್ನೆ ಶುಕ್ರವಾರ ಮುಹೂರ್ತ ಬಂದಿತ್ತು. ಹೊರಡುವ ತಯಾರಿ ನಡೆಸಲು ಗುರುವಾರ ಆಫೀಸಿನಿಂದ ಬೇಗ ಹೊರಟಿದ್ದೆ. ಮನೆ ಆಫೀಸಿನಿಂದ ಬರೋಬ್ಬರಿ 30 ಕಿ.ಮಿ. ಮನೆ ವಿಜಯನಗರದಲ್ಲಾದರೆ, ಆಫೀಸು ಎಲೆಕ್ಟ್ರಾನಿಕ್ ಸಿಟಿ. ಆಫೀಸಿನ ಹತ್ತಿರ ಮನೆ ಮಾಡು ಅಂತ ಎಲ್ಲ ಹೇಳಿದ್ರು. ಆದರೆ ನನಗೆ ವಿಜಯನಗರ ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಕಳೆದ 15 ವರ್ಷಗಳಿಂದ ಆ ಏರಿಯಾ ಅಕ್ಕ ಪಕ್ಕ ಇದ್ದಿದ್ರಿಂದ ನನಗೆ ಅದು ಒಂದು ರೀತಿ ತವರೂರಾಗಿತ್ತು. ಹಾಗಾಗಿ ಆಫೀಸಿನ ಹತ್ರ ಮನೆ ಮಾಡೋ ಐಡಿಯಾ ಬಿಟ್ಟಿದ್ದೆ. ಇದ್ದಿದ್ದು 2 ಆಪ್ಟನ್. ಒಂದು ಆಫೀಸ್ ಬಸ್ ನಲ್ಲಿ ಹೋಗೋದು. ಆದರೆ ಬೆಳೆಗ್ಗೆ 5:30 ಕ್ಕೆ ಏದ್ದು ಸ್ನಾನ ಮಾಡಿ ಹೊರಡಬೇಕಿತ್ತು. ಬಸ್ ಏನಾದ್ರು ತಪ್ಪಿಹೋದ್ರೆ M.G.Road ಆಫೀಸಿಗೆ ಹೋಗಿ 10 ಘಂಟೆ ಶಟಲ್ ನಲ್ಲಿ ಹೋಗ್ಬೇಕು. ಸಂಜೆ 6:15ಕ್ಕೆ ಬಿಟ್ರೆ ಮನೆಗೆ ಬರೋದ್ರಲ್ಲಿ 8:30 ಆಗಿರ್ತಿತ್ತು. ಊಟ ಮಾಡಿ ಮಲಗಿದ್ರೆ ಸಾಕಪ್ಪ ಅನ್ನಿಸ್ತಿತ್ತು. ಜಯಶ್ರೀ ದಿನಾ ಸಂಜೆ ನನ್ನ ಹತ್ರ ಮಾತಾಡಲಿಕ್ಕೆ ಕಾಯ್ತಾಯಿದ್ರೆ ನನಗೆ ಮಲಗಿದ್ರೆ ಸಾಕಪ್ಪ ಅನ್ನಿಸ್ತಾಯಿತ್ತು. ಎಷ್ಟೋ ದಿನಾ ಅವಳು ಮಾತಾಡ್ತಾಯಿದ್ದಾಗ ನಾನು ನಿದ್ದೆ ಮಾಡ್ತಾಯಿದ್ದಿದ್ದು ಇದೆ. ಆಫೀಸ್ ಚೈಂಜ್ ಮಾಡೋದೇ ಒಳ್ಳೇದು ಅನ್ಸೋಕೆ ಶುರುವಾಯ್ತು. ಮೊದಲೆರಡು ಮೂರು ತಿಂಗಳು ಬಸ್ ನಲ್ಲಿ ಹೋದೆ.

ಕೊನೆಗೆ ಹೊಳೆದಿದ್ದು ಇನ್ನೊಂದು ಆಪ್ಟನ್. ಕಾರ್ ತಗೋಂಡು ಹೋಗೋದು ಅಂತ ಪ್ಲಾನ್ ಮಾಡಿದೆ. ಆದ್ರೆ ಹೊಸೂರು ರೋಡಿನ ಟ್ರಾಫಿಕ್ ನಲ್ಲಿ ದಿನಾ ಕಾರ್ ಹೊಡೆಯೋದು ಒಂದು ಸಾಹಸನೇ ಸೈ. ಪ್ರತಿ ಸೆಕೆಂಡಿಗೊಮ್ಮೆ ಗೇರ್ ಚೈಂಜ್ ಮಾಡ್ಬೇಕು. ಆಗ ನೆನಪಾಗಿದ್ದು ಹೊಸದಾಗಿ ಆದ ನೈಸ್ ಕಾರಿಡಾರ್. ಮೈಸೂರು ರೋಡಿಂದ ಎಲೆಕ್ಟ್ರಾನಿಕ್ ಸಿಟಿಗೆ ಬರೊತ್ತೆ ಅಂತ ಗೊತ್ತಾಯ್ತು. ಸರಿ ಅದೇ ರೋಡಿನಲ್ಲಿ ಹೋಗೋದು ಅಂತೇನೋ ತೀರ್ಮಾನ ಮಾಡಿದೆ. ಆದ್ರೆ ದೊರ ಕೇವಲ 45 ಕಿ.ಮಿ(?) ಅಂತ ಗೊತ್ತಾಯ್ತು. ಕಾರ್ ಗೆ ಗ್ಯಾಸ ಹಾಕಿಸಿದ್ದೆ. ಆದ್ರೂ 4500 ಮೇಲೆ ಖರ್ಚು ಬರತ್ತೆ ಅಂತ ಗೊತ್ತಾದ ಮೇಲೆ ಸ್ವಲ್ಪ ಯೋಚ್ನೆ ಪ್ರಾರಂಭ ಆಯ್ತು.ಕೊನೆಗೆ ೫ ಜನರನ್ನು ಹುಡುಕಿ ಎಲ್ಲ ಶೇರ್ ಮಾಡ್ಕೊಳ್ಳೋದು ಅಂತ ಆಯ್ತು. ಸೋ..ಮಾರ್ಚಿನಿಂದ ದಿನಾ 86 ಕಿ.ಮಿ ಡ್ರೈವ್ ಮಾಡ್ತೀನಿ.

ದಿನಾ ಬೆಳೆಗ್ಗೆ 8ಕ್ಕೆ ಮನೆ ಬಿಟ್ರೆ 9ಕ್ಕೆ ಆಫೀಸು ಸೇರ್ತಾಯಿದ್ವಿ. ಸಂಜೆ ಎಲ್ಲರನ್ನೂ ಹೊರಡಿಸಿಕೊಂಡು ಮನೆಗೆ ಬರೋದ್ರಲ್ಲಿ 8 ಆಗ್ತಿತ್ತು. ದೂರ ಜಾಸ್ತಿಯಾಗಿದ್ರೂ ಮಾನಸಿಕ ನೆಮ್ಮದಿಯಿತ್ತು. ಹೈವೇನಲ್ಲಿ ಟ್ರಾಫಿಕ್ ಇರೊಲ್ಲ. ಅರಾಮಾಗಿ 100+ ಕಿ.ಮಿ ಸ್ಪಿಡಿನಲ್ಲಿ ಬರಬಹುದು. ಇದೇ ನಮ್ಮ ದಿನಚರಿಯಾಗಿತ್ತು.

ಕೊಡೈಕೆನಾಲ್ ಗೆ ಹೊರಡೋ ತಯಾರಿಗೆ ಗುರುವಾರ ಬೇಗ ಹೊರಟಿದ್ದೆ. ಅಂದು ರವಿ, ಪ್ರಶಾಂತ್, ಕಲಾ ಬರಲಿಲ್ಲ. ಪಾವನ ಬಂದಿದ್ಲು. ಆಫೀಸನ್ನು 6:20ಕ್ಕೆ ಬಿಟ್ಟು ಮೈಸೂರು ರೋಡು ಸೇರಿದಾಗ 7:10 ಆಗಿತ್ತು. ಕೆಂಗೇರಿ ಹತ್ರ ಮುಂದಿದ್ದ ದೊಡ್ಡ ಲಾರಿ ನನ್ನ ಪ್ರೀತಿಯ ಕಾರಿಗೆ ಡಿಕ್ಕಿ ಹೊಡದೇ ಬಿಟ್ಟ. ನನ್ನ ಪಕ್ಕದ ಡೋರು ಜ್ಯಾಮೇಜ್ ಆಗಿತ್ತು. ಕಾರಿನ ಬಲಬಾಗದ ಟೈರಿನ ಮೇಲ್ಬಾಗ ಕಿತ್ತು ಹೋಗಿತ್ತು. ಲೈಟ್ ಕಿತ್ತು ಹೋಗಿತ್ತು.
ಆತ ಬರೀ ಕಾರಿಗೆ ಮಾತ್ರ ಡ್ಯಾಮೇಜ್ ಮಾಡಿರಲಿಲ್ಲ. ನನ್ನ ಹೃದಯಕ್ಕೆ ಮಾಡಿದ್ದ. ಕಾರಿಗೆ ಒಂದು ಸಣ್ಣ ಸ್ಕ್ರಾಚ್ ಆದ್ರೂ ಬೇಸರ ಮಾಡ್ಕೋತ್ತಾಯಿದ್ದ ನನಗೆ ಮನಸ್ಸಲ್ಲಿ ಅಳಿಯದ ಹಾಗೆ ದೊಡ್ದದಾದ ಗಾಯವಾಗಿತ್ತು. ತಕ್ಷಣ ಭಾಸ್ಕರ ಮಾವನಿಗೆ ಫೋನಾಯಿಸಿದೆ. ಮಾವನ ಫ್ರೆಂಡ್ಸ್ 6-7 ಜನ ವ್ಯಾನ್ ನಲ್ಲಿ ಬರ್ತಾರೆ ಅಂತ ಗೊತ್ತಾಯ್ತು. ನಂತ್ರ ಮಠಕ್ಕೆ ಫೋನಾಯಿಸಿದೆ. ಕ್ಷಣಾರ್ದದಲ್ಲಿ ವಿಷಯ ಗುರುಗಳಿಗೂ ತಲುಪಿತು. ನಿನಗೇನಾದ್ರು ಆಗಿದೆಯಾ ಅಂತ ಬಹಳ ಕರೆಗಳು ಬರಲು ಪ್ರಾರಂಭವಾಯ್ತು. ನನಗೆ ಎನೂ ಆಗಿರಲಿಲ್ಲ. ಮಾವನ ಫ್ರೆಂಡಂತೂ ನಾನು ರೌಡಿಗಳನ್ನು ಕರ್ಕೊಂಡು ಬರ್ತೀನಿ. ಅವ್ರು ನಿನಗೇನಾದ್ರು ಮಾಡಿದ್ರಾ ಅಂತ ಕೇಳ್ದ. ಮೊದಲು ಸ್ವಲ್ಪ ಹಾರಾಡಿದ ಲಾರಿ ಡ್ರೈವರ್ ಅವರು ಬಂದ ತಕ್ಷಣ ಸೈಲೆಂಟ್ ಆದ. ಇದಾದ ನಂತರ ಮಠದಿಂದ ಗಣಪತಿ ಚಿಕ್ಕಯ್ಯ ಮತ್ತು ಮಠದ ಕೆಲವರು ಬಂದ್ರು. ಗಣಪತಿ ಚಿಕ್ಕಯ್ಯ ಮಠದ ಸಮವಸ್ತ್ರದಲ್ಲಿದ್ದ. ಡೈವರ್ ಅವನನ್ನು ಸ್ವಾಮಿ ಎಂದು ಕರೆಯೋಕೆ ಪ್ರಾರಂಭಮಾಡಿದ. ಕೊನೆಗೆ ಮರುದಿನ ಅವರೆಲ್ಲ ಮಾರುತಿ ಶೋ ರೂಮ್ ಗೆ ಬರೋದು ಅಂತ ತಿರ್ಮಾನವಾಯ್ತು.


ಬೆಳಗ್ಗೆ ಅಲ್ಲಿ ಹೋಗಿ ಕಾದ್ರೆ ಅವ್ರು ನಾಪತ್ತೆ. ಸರಿ ಮಾಡೋಕೆ ಎಷ್ಟಾಗತ್ತೆ ಅಂತ ಕೇಳಿದ್ರೆ ಬರೋಬ್ಬರಿ 20000 ಬೇಕು ಅಂದ್ರು.ಕೊನೆಗೆ ಲಾರಿಯ ವಾನರ(ಓನರ್)ಹುಡ್ಕೊಂಡು ಹೋದಾಗ ಗೊತ್ತಾಗಿದ್ದು ಅದು ಬೇರೆಯವರ ಲಾರಿಯೆಂದು. ಮರುದಿನ ಬನ್ನಿ ಅಂತ ಹೇಳಿದ್ರು. ನನಗೆ ಕೊಡೈಕೆನಾಲ್ ಹೋಗಬೇಕಾಗಿದ್ರಿಂದ ಕಾರನ್ನು ಮಾವನ ಕೈಲಿ ಕೊಟ್ ಹೋದೆ. ಇಂದು ಬಂದಾಗ ಮಾವ ಹೇಳಿದ್ರು ಅವ್ರು 5 ಸಾವಿರ ಕೊಟ್ರು. ಇನ್ನು ಇನ್ಯೂರೆನ್ಸ್ ಅಥವಾ ಬೇರೇ ಗ್ಯಾರೇಜಿಗೆ ಕೊಡೋದಾ ಅಂತ ನೋಡ್ಬೇಕು.

ಇವತ್ತು ಅದೇ ಕಾರನ್ನು ತಗೊಂಡು ಆಫೀಸಿಗೆ ಬಂದೆ. ಕಾರನ್ನು ನೋಡಿದಾಗ ಒಮ್ಮೆ ಬೇಸರವಾಗತ್ತೆ.