Thursday, September 20, 2007

ಮತ್ತಿನ ಗಮ್ಮತ್ತು

Friend ಕಳಿಸಿದ್ದು. ತುಂಬಾ ಚೆನ್ನಾಗಿದೆ.

ಒಮ್ಮೆ ಓದಿದ್ರೆ ಅರ್ಥ ಆಗೊಲ್ಲ, ಮತ್ತೆ ಮತ್ತೆ ಓದಿ, ಆಗ ಅರ್ಥವಾಗಬಹುದು (?)

This one is really good...... The way he presented the mail impressed me.

Peg after Peg

I never take risk while drinking

When I come from office in the evening, wife is cooking
I can hear the noise of utensils in the kitchen
I stealthily enter the house
Take out the bottle from my black cupboard
Shivaji Maharaj is looking at me from the photo frame
But still no one is aware of it
Becoz I never take a risk

I take out the glass from the rack above the old sink
Quickly enjoy one peg
Wash the glass and again keep it on the rack
Of course I also keep the bottle inside my cupboard
Shivaji Maharaj is giving a smile

I peep into the kitchen
Wife is cutting potatoes
No one is aware of what I did
Becoz I never take a risk

I: Any news on Iyer's daughter's marriage
Wife: Nope, she doesn't seem to be that lucky. Still they are looking out for her

I again come out; there is a small noise of the black cupboard
But I don't make any sound while taking out the bottle
I take out the glass from the old rack above sink
Quickly enjoy one peg

Wash the bottle and keep it in the sink
Also keep the Black Glass in the cupboard
But still no one is aware of what I did
Becoz I never take a risk

I: But still I think Iyer's daughter's age is not that much
Wife: What are you saying? She is 28 yrs old... like an aged horse
I: (I forgot her age is 28) Oh Oh...

I again take out potatoes out from my black cupboard
But the cupboard's place has automatically changed
I take out the bottle from the rack and quickly enjoy one peg in the sink

Shivaji Maharaj laughs loudly
I keep the rack in the potatoes & wash Shivaji Maharaj's photo & keep it in the black cupboard

Wife is keeping the sink on the stove
But still no one is aware of what I did
Becoz I never take a risk

I: (getting angry) you call Mr. Iyer a horse? If you say that again, I will cut your tongue...!
Wife: Don't just blabber something, go out and sit quietly...

I take out the bottle from the potatoes
Go in the black cupboard and enjoy a peg
Wash the sink and keep it over the rack
Wife is giving a smile

Shivaji Maharaj is still cooking
But still no one is aware of what I did
Becoz I never take a risk

I: (laughing) So Iyer is marrying a horse!!
Wife: Hey go and sprinkle some water on your face...

I again go to the kitchen, and quietly sit on the rack
Stove is also on the rack
There is a small noise of bottles from the room outside

I peep and see that wife is enjoying a peg in the sink
But none of the horses are aware of what I did
Becoz Shivaji Maharaj never takes a risk

Iyer is still cooking
And I am looking at my wife from the photo and laughing
Becoz I never take what???

Sunday, September 9, 2007

ಕೊಡೈಕೆನಾಲ್ ಪ್ರವಾಸ

ಬದುಕಿನ ಜಂಜಾಟದಿಂದ ಬೇಸತ್ತಿದ್ದ ಮನಕ್ಕೆ ತಂಪೆರೆಯಬೇಕೆಂಬ ಹಂಬಲದಿಂದ ನಾನು ಜಯಶ್ರೀ ಬಹಳದಿನಗಳಿಂದ ಎಲ್ಲಾದರು ಹೊರಗೆ ಹೋಗಬೇಕೆಂದು ಪ್ಲಾನ್ ಮಾಡ್ತಾಬಂದು ಕೊನೆಗೆ ಅದಕ್ಕೆ ಮುಹೂರ್ತವಿಟ್ಟು ಆಗಸ್ಟ್ 31 ರಂದು ಕೊಡೈಕೆನಾಲ್ ಗೆ ಹೋಗೋದು ಅಂತ ತೀರ್ಮಾನ ಮಾಡಿದ್ವಿ. ಆಗಸ್ಟ್ 31 ರ ರಾತ್ರಿ ಬಸ್ಸಿನಲ್ಲಿ ಹೊರಟ ನಮ್ಮ ಪ್ರಯಾಣ ಕೊಡೈ ತಲುಪಿದ್ದು ಮರುದಿನ ಬೆಳೆಗ್ಗೆ 10:30ಕ್ಕೆ. ಮೊದಲೇ ಕಾಟೇಜ್ ಬುಕ್ ಮಾಡಿದ್ದರಿಂದ, ಅವರು ಕಾರ್ ನಲ್ಲಿ ನಮ್ಮನ್ನು ಕಾಟೇಜಿಗೇ ಕರ್ಕೊಂಡು ಹೋದ್ರು. "ಸ್ವಜ" ಇದು ಕಾಟೇಜ್ ಹೆಸ್ರು, ಕೊಡೈಕೆನಾಲ್ ನಿಂ 6 ಕಿ.ಮಿ ದೂರದಲ್ಲಿದೆ. ಒಮ್ಮೆ ಅಲ್ಲಿಂದ ಸಿಟಿಗೆ ಹೋಗಲು Rs. 150 ಚಾರ್ಜ್ ಕೊಡಬೇಕು. ಕಾಟೇಜ್ ಬಹಳ ಚೆನ್ನಾಗಿದೆ. ಕಾಡಿನ ಮದ್ಯೆ ಕಾಟೇಜ್ . ಅಕ್ಕಪಕ್ಕ ಯಾರೂ ಇಲ್ಲ. ಎದುರಿಗೆ ಸುಂದರ ಕೊಡೈ ಗುಡ್ಡಗಳು, ಅದನ್ನು ಬಾಚಿತಬ್ಬಿದ ಮಂಜು, ಅಲ್ಲಿ ಇಲ್ಲಿ ಒಮ್ಮೋಮ್ಮೆಮಂಜನ್ನು ಸರಿಸಿ ನಮಗೆ ದರ್ಶನವೀಯುವ ರಮಣೀಯ ದೃಶ್ಯಗಳು ನಮ್ಮ ಕಣ್ ತಣಿಸಿದವು. ಕಾಟೇಜಿನ ಒಳಗೆ/ಹೊರಗೆ ಇದ್ದ ಸಣ್ಣ ಸಣ್ಣ ಕ್ಯಾಕ್ಟಸ್ ಗಿಡಗಳು ಸೌಂದರ್ಯಕ್ಕೆ ಮೆರಗನ್ನು ನೀಡಿದ್ದವು.


ಮದ್ಯಾನದ ತನಕ ಅಲ್ಲೇ ಇದ್ದು ದಣಿವಾರಿಸಿಕೊಂಡ ಊಟ ಮಾಡಿ ಕೊಡೈ ಲೇಕ್ ನತ್ತ ನಮ್ಮ ಪ್ರಯಾಣ ಮುಂದುವರೆಯಿತು. ಅಲ್ಲಿ ಬೋಟಿನಲ್ಲಿ ಇಡೀ ಕೊಡೈ ಸರೋವರವನ್ನು ಸುತ್ತು ಹೊಡೆದಿದ್ದು ಆಯ್ತು. ಬೋಟಿನ ಡ್ರೈವರ್ ನಮ್ಮನ್ನು ಫಿಲ್ಮಿನಲ್ಲಿ ತೋರಿಸೋ ಹಾಗೆ ನಿಲ್ಲಿಸಿ ಫೋಟೋಗಳನ್ನು ತೆಗೆದ. ದಡದ ಹತ್ತಿರ ನಿಲ್ಲಿಸಿದ್ದ ಬೋಟನ್ನು ನಾನು ಡ್ರೈವ್ ಮಾಡುತ್ತಿದ್ದ ಫೋಟೋವು ಅದರರಲ್ಲಿ ಇತ್ತು. ಕೊಡೈಲೇಕ್ ನೋಡಿದ ನಂತರ ನಾವು ಹೋಗಿದ್ದು ಬ್ರ್ಯಾಂಟ್ ಪಾರ್ಕಿಗೆ. ಅಲ್ಲಿದ್ದ ಸುಂದರಪುಷ್ಪಗಳನ್ನು ನೋಡಿ ಒಮ್ಮೆ ಲೇಕ್ ನ ಸುತ್ತು ಹಾಕೋಣ ಅಂತ ಪಾದಯಾತ್ರೆ ಶುರುಮಾಡಿದ್ವಿ. ಎಷ್ಟು ದೂರ ಹೋದ್ರು ಅಲ್ಲಿ ಮತ್ತೆ ತಿರುವು ಮತ್ತೆ ನಡೆಯೋದು. ಸುಮಾರು 3 ಕಿ.ಮಿ ನಡೆದು ಜಯಶ್ರೀ ಹತ್ರ ಬೈಸ್ಕೊಂಡು ಟ್ಯಾಕ್ಸಿಗೆ ಫೋನಾಯಿಸಿದೆ. ಮತ್ತೆ ಕಾಟೇಜ್ ತಲುಪಿದ್ದು ಸಂಜೆ 6ಕ್ಕೆ. ಕಾಟೇಜಿನಲ್ಲಿ ಬರಿಗಾಲಲ್ಲಿ ಒಡಾಡೋಕೆ ಆಗ್ತಾಯಿರಲಿಲ್ಲ. ಅಷ್ಟು ತಣ್ಣಗಿತ್ತು. ಅಲ್ಲೇ ಇದ್ದ ಫೈರ್ ಡ್ರಮ್ಮಿಗೆ ಕಟ್ಟಿಗೆ ಹಾಕಿ ಬೆಂಕಿ ಹಚಿ ಹತ್ತು ನಿಮಿಷದಲ್ಲಿ ಇಡೀ ರೂಮು ಬೆಚ್ಚ್ಗಾಗಿದ್ದು.

ಮರುದಿನ ಒಂದು ಟ್ಯಾಕ್ಸಿಯನ್ನು ತಗೊಂಡು ಕೊಡೈಕೆನಾಲ್ ಸುತ್ತಿದ್ವಿ. ನೋಡಿದ ಸ್ಥಳಗಳು Coakers Walk, Pillar rock, Suicide point, Pine forest, Shanti view, Upperlake view, bryant park etc

ಒಂದು ದಿನದ ಇಂಡಿಕಾ ಬಾಡಿಗೆ 700+150 (ಸಿಟಿಯಿಂದ ನಾವಿದ್ದ ಸ್ಥಳಕ್ಕೆ ಬಾಡಿಗೆ). ಸಂಜೆ ಕೊಡೈನಲ್ಲಿ ಮಳೆ, ಕಾಟೇಜಿನಲ್ಲಿ ಕುಳಿತು ಮಳೆಯಲ್ಲಿ ತೊಯ್ಯುತ್ತಿದ್ದ ಕೊಡೈ ಬಹಳ ಸುಂದರವಾಗಿ ಕಾಣ್ತಾಯಿತ್ತು. ಕಿಟಕಿಯ ಪಕ್ಕ ನಿಂತು ನೋಡುತ್ತಿದಾಗ ನೆನಪಾಗಿದ್ದು ಬಾಲ್ಯದಲ್ಲಿ ಜಗಲಿಯಲ್ಲಿ ಕುಳಿತು ಮಳೆಯನ್ನು ನೋಡುತ್ತಿದ್ದ ದೃಶ್ಯ. ಮಳೆಗಾಲದಲ್ಲಿ ಉರಿಗೆ ಹೋಗದೆ ಏಷ್ಟೋ ವರ್ಷಗಳಾಯಿತು. ಅಲ್ಲಿ ಹೋಗಿ ಸಣ್ಣವನಿದ್ದಾಗ ತೊಯ್ಯುತ್ತಿದ್ದ ಹಾಗೆ/ಆಡುತ್ತಿದ್ದ ಹಾಗೆ ಮಾಡಬೇಕಿನಿಸುತ್ತಿದ್ದೆ.
ಮರುದಿನ ಕೊಡೈನಿಂದ ೪೦ ಕಿ.ಮಿ ದೂರದಲ್ಲಿರುವ Mannavanur Lake ಗೆ ಹೋಗಿ ಸಂಜೆ ವಾಪಾಸಾದೆವು. ಇಂಡಿಕಾ ಬಾಡಿಗೆ 1100. ಬರುವಾಗ ಕೊಡೈನಲ್ಲಿ ಹೆಸರುವಾಸಿಯಾದ ಚಾಕ್ಲೇಟುಗಳನ್ನು ಖರಿದಿಸಿ ಕಾಟೇಜಿಗೆ ಹೋಗಿ ಬಿಲ್ಲ್ ಸೆಟ್ಟಲ್ ಮಾಡಿ ಮತ್ತೆ ಕ.ರಾ.ರ.ಸಂ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದೆವು.

ಕಾಟೇಜಿನಲ್ಲಿ ನಾವಿದ್ದಿದ್ದು 2 ರಾತ್ರಿ+ 3 ಹಗಲು.
ಕಾಟೇಜಿನ ಬಿಲ್ಲ್ 6000+400 (ಊಟಕ್ಕೆ ೧೦೦)
ಟ್ಯಾಕ್ಸಿ 850+1100 ಎಲ್ಲ ಸೇರಿ 10K ಬೇಕು.

ನಿಮಗೆ ಆಸಕ್ತಿಯಿದ್ದರೆ "ಸ್ವಜ" ಸಂಪರ್ಕಿಸಬಹುದು.

Tuesday, September 4, 2007

ಕಾರ್ ಆಕ್ಸಿಡೆಂಟ್

ಬಹುದಿನಗಳಿಂದ ಕೊಡೈಕೆನಾಲ್ ಗೆ ಹೋಗಬೇಕೆಂದುಕೊಂಡಿದ್ದು ಅದಕ್ಕೆ ಮೊನ್ನೆ ಶುಕ್ರವಾರ ಮುಹೂರ್ತ ಬಂದಿತ್ತು. ಹೊರಡುವ ತಯಾರಿ ನಡೆಸಲು ಗುರುವಾರ ಆಫೀಸಿನಿಂದ ಬೇಗ ಹೊರಟಿದ್ದೆ. ಮನೆ ಆಫೀಸಿನಿಂದ ಬರೋಬ್ಬರಿ 30 ಕಿ.ಮಿ. ಮನೆ ವಿಜಯನಗರದಲ್ಲಾದರೆ, ಆಫೀಸು ಎಲೆಕ್ಟ್ರಾನಿಕ್ ಸಿಟಿ. ಆಫೀಸಿನ ಹತ್ತಿರ ಮನೆ ಮಾಡು ಅಂತ ಎಲ್ಲ ಹೇಳಿದ್ರು. ಆದರೆ ನನಗೆ ವಿಜಯನಗರ ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಕಳೆದ 15 ವರ್ಷಗಳಿಂದ ಆ ಏರಿಯಾ ಅಕ್ಕ ಪಕ್ಕ ಇದ್ದಿದ್ರಿಂದ ನನಗೆ ಅದು ಒಂದು ರೀತಿ ತವರೂರಾಗಿತ್ತು. ಹಾಗಾಗಿ ಆಫೀಸಿನ ಹತ್ರ ಮನೆ ಮಾಡೋ ಐಡಿಯಾ ಬಿಟ್ಟಿದ್ದೆ. ಇದ್ದಿದ್ದು 2 ಆಪ್ಟನ್. ಒಂದು ಆಫೀಸ್ ಬಸ್ ನಲ್ಲಿ ಹೋಗೋದು. ಆದರೆ ಬೆಳೆಗ್ಗೆ 5:30 ಕ್ಕೆ ಏದ್ದು ಸ್ನಾನ ಮಾಡಿ ಹೊರಡಬೇಕಿತ್ತು. ಬಸ್ ಏನಾದ್ರು ತಪ್ಪಿಹೋದ್ರೆ M.G.Road ಆಫೀಸಿಗೆ ಹೋಗಿ 10 ಘಂಟೆ ಶಟಲ್ ನಲ್ಲಿ ಹೋಗ್ಬೇಕು. ಸಂಜೆ 6:15ಕ್ಕೆ ಬಿಟ್ರೆ ಮನೆಗೆ ಬರೋದ್ರಲ್ಲಿ 8:30 ಆಗಿರ್ತಿತ್ತು. ಊಟ ಮಾಡಿ ಮಲಗಿದ್ರೆ ಸಾಕಪ್ಪ ಅನ್ನಿಸ್ತಿತ್ತು. ಜಯಶ್ರೀ ದಿನಾ ಸಂಜೆ ನನ್ನ ಹತ್ರ ಮಾತಾಡಲಿಕ್ಕೆ ಕಾಯ್ತಾಯಿದ್ರೆ ನನಗೆ ಮಲಗಿದ್ರೆ ಸಾಕಪ್ಪ ಅನ್ನಿಸ್ತಾಯಿತ್ತು. ಎಷ್ಟೋ ದಿನಾ ಅವಳು ಮಾತಾಡ್ತಾಯಿದ್ದಾಗ ನಾನು ನಿದ್ದೆ ಮಾಡ್ತಾಯಿದ್ದಿದ್ದು ಇದೆ. ಆಫೀಸ್ ಚೈಂಜ್ ಮಾಡೋದೇ ಒಳ್ಳೇದು ಅನ್ಸೋಕೆ ಶುರುವಾಯ್ತು. ಮೊದಲೆರಡು ಮೂರು ತಿಂಗಳು ಬಸ್ ನಲ್ಲಿ ಹೋದೆ.

ಕೊನೆಗೆ ಹೊಳೆದಿದ್ದು ಇನ್ನೊಂದು ಆಪ್ಟನ್. ಕಾರ್ ತಗೋಂಡು ಹೋಗೋದು ಅಂತ ಪ್ಲಾನ್ ಮಾಡಿದೆ. ಆದ್ರೆ ಹೊಸೂರು ರೋಡಿನ ಟ್ರಾಫಿಕ್ ನಲ್ಲಿ ದಿನಾ ಕಾರ್ ಹೊಡೆಯೋದು ಒಂದು ಸಾಹಸನೇ ಸೈ. ಪ್ರತಿ ಸೆಕೆಂಡಿಗೊಮ್ಮೆ ಗೇರ್ ಚೈಂಜ್ ಮಾಡ್ಬೇಕು. ಆಗ ನೆನಪಾಗಿದ್ದು ಹೊಸದಾಗಿ ಆದ ನೈಸ್ ಕಾರಿಡಾರ್. ಮೈಸೂರು ರೋಡಿಂದ ಎಲೆಕ್ಟ್ರಾನಿಕ್ ಸಿಟಿಗೆ ಬರೊತ್ತೆ ಅಂತ ಗೊತ್ತಾಯ್ತು. ಸರಿ ಅದೇ ರೋಡಿನಲ್ಲಿ ಹೋಗೋದು ಅಂತೇನೋ ತೀರ್ಮಾನ ಮಾಡಿದೆ. ಆದ್ರೆ ದೊರ ಕೇವಲ 45 ಕಿ.ಮಿ(?) ಅಂತ ಗೊತ್ತಾಯ್ತು. ಕಾರ್ ಗೆ ಗ್ಯಾಸ ಹಾಕಿಸಿದ್ದೆ. ಆದ್ರೂ 4500 ಮೇಲೆ ಖರ್ಚು ಬರತ್ತೆ ಅಂತ ಗೊತ್ತಾದ ಮೇಲೆ ಸ್ವಲ್ಪ ಯೋಚ್ನೆ ಪ್ರಾರಂಭ ಆಯ್ತು.ಕೊನೆಗೆ ೫ ಜನರನ್ನು ಹುಡುಕಿ ಎಲ್ಲ ಶೇರ್ ಮಾಡ್ಕೊಳ್ಳೋದು ಅಂತ ಆಯ್ತು. ಸೋ..ಮಾರ್ಚಿನಿಂದ ದಿನಾ 86 ಕಿ.ಮಿ ಡ್ರೈವ್ ಮಾಡ್ತೀನಿ.

ದಿನಾ ಬೆಳೆಗ್ಗೆ 8ಕ್ಕೆ ಮನೆ ಬಿಟ್ರೆ 9ಕ್ಕೆ ಆಫೀಸು ಸೇರ್ತಾಯಿದ್ವಿ. ಸಂಜೆ ಎಲ್ಲರನ್ನೂ ಹೊರಡಿಸಿಕೊಂಡು ಮನೆಗೆ ಬರೋದ್ರಲ್ಲಿ 8 ಆಗ್ತಿತ್ತು. ದೂರ ಜಾಸ್ತಿಯಾಗಿದ್ರೂ ಮಾನಸಿಕ ನೆಮ್ಮದಿಯಿತ್ತು. ಹೈವೇನಲ್ಲಿ ಟ್ರಾಫಿಕ್ ಇರೊಲ್ಲ. ಅರಾಮಾಗಿ 100+ ಕಿ.ಮಿ ಸ್ಪಿಡಿನಲ್ಲಿ ಬರಬಹುದು. ಇದೇ ನಮ್ಮ ದಿನಚರಿಯಾಗಿತ್ತು.

ಕೊಡೈಕೆನಾಲ್ ಗೆ ಹೊರಡೋ ತಯಾರಿಗೆ ಗುರುವಾರ ಬೇಗ ಹೊರಟಿದ್ದೆ. ಅಂದು ರವಿ, ಪ್ರಶಾಂತ್, ಕಲಾ ಬರಲಿಲ್ಲ. ಪಾವನ ಬಂದಿದ್ಲು. ಆಫೀಸನ್ನು 6:20ಕ್ಕೆ ಬಿಟ್ಟು ಮೈಸೂರು ರೋಡು ಸೇರಿದಾಗ 7:10 ಆಗಿತ್ತು. ಕೆಂಗೇರಿ ಹತ್ರ ಮುಂದಿದ್ದ ದೊಡ್ಡ ಲಾರಿ ನನ್ನ ಪ್ರೀತಿಯ ಕಾರಿಗೆ ಡಿಕ್ಕಿ ಹೊಡದೇ ಬಿಟ್ಟ. ನನ್ನ ಪಕ್ಕದ ಡೋರು ಜ್ಯಾಮೇಜ್ ಆಗಿತ್ತು. ಕಾರಿನ ಬಲಬಾಗದ ಟೈರಿನ ಮೇಲ್ಬಾಗ ಕಿತ್ತು ಹೋಗಿತ್ತು. ಲೈಟ್ ಕಿತ್ತು ಹೋಗಿತ್ತು.
ಆತ ಬರೀ ಕಾರಿಗೆ ಮಾತ್ರ ಡ್ಯಾಮೇಜ್ ಮಾಡಿರಲಿಲ್ಲ. ನನ್ನ ಹೃದಯಕ್ಕೆ ಮಾಡಿದ್ದ. ಕಾರಿಗೆ ಒಂದು ಸಣ್ಣ ಸ್ಕ್ರಾಚ್ ಆದ್ರೂ ಬೇಸರ ಮಾಡ್ಕೋತ್ತಾಯಿದ್ದ ನನಗೆ ಮನಸ್ಸಲ್ಲಿ ಅಳಿಯದ ಹಾಗೆ ದೊಡ್ದದಾದ ಗಾಯವಾಗಿತ್ತು. ತಕ್ಷಣ ಭಾಸ್ಕರ ಮಾವನಿಗೆ ಫೋನಾಯಿಸಿದೆ. ಮಾವನ ಫ್ರೆಂಡ್ಸ್ 6-7 ಜನ ವ್ಯಾನ್ ನಲ್ಲಿ ಬರ್ತಾರೆ ಅಂತ ಗೊತ್ತಾಯ್ತು. ನಂತ್ರ ಮಠಕ್ಕೆ ಫೋನಾಯಿಸಿದೆ. ಕ್ಷಣಾರ್ದದಲ್ಲಿ ವಿಷಯ ಗುರುಗಳಿಗೂ ತಲುಪಿತು. ನಿನಗೇನಾದ್ರು ಆಗಿದೆಯಾ ಅಂತ ಬಹಳ ಕರೆಗಳು ಬರಲು ಪ್ರಾರಂಭವಾಯ್ತು. ನನಗೆ ಎನೂ ಆಗಿರಲಿಲ್ಲ. ಮಾವನ ಫ್ರೆಂಡಂತೂ ನಾನು ರೌಡಿಗಳನ್ನು ಕರ್ಕೊಂಡು ಬರ್ತೀನಿ. ಅವ್ರು ನಿನಗೇನಾದ್ರು ಮಾಡಿದ್ರಾ ಅಂತ ಕೇಳ್ದ. ಮೊದಲು ಸ್ವಲ್ಪ ಹಾರಾಡಿದ ಲಾರಿ ಡ್ರೈವರ್ ಅವರು ಬಂದ ತಕ್ಷಣ ಸೈಲೆಂಟ್ ಆದ. ಇದಾದ ನಂತರ ಮಠದಿಂದ ಗಣಪತಿ ಚಿಕ್ಕಯ್ಯ ಮತ್ತು ಮಠದ ಕೆಲವರು ಬಂದ್ರು. ಗಣಪತಿ ಚಿಕ್ಕಯ್ಯ ಮಠದ ಸಮವಸ್ತ್ರದಲ್ಲಿದ್ದ. ಡೈವರ್ ಅವನನ್ನು ಸ್ವಾಮಿ ಎಂದು ಕರೆಯೋಕೆ ಪ್ರಾರಂಭಮಾಡಿದ. ಕೊನೆಗೆ ಮರುದಿನ ಅವರೆಲ್ಲ ಮಾರುತಿ ಶೋ ರೂಮ್ ಗೆ ಬರೋದು ಅಂತ ತಿರ್ಮಾನವಾಯ್ತು.


ಬೆಳಗ್ಗೆ ಅಲ್ಲಿ ಹೋಗಿ ಕಾದ್ರೆ ಅವ್ರು ನಾಪತ್ತೆ. ಸರಿ ಮಾಡೋಕೆ ಎಷ್ಟಾಗತ್ತೆ ಅಂತ ಕೇಳಿದ್ರೆ ಬರೋಬ್ಬರಿ 20000 ಬೇಕು ಅಂದ್ರು.ಕೊನೆಗೆ ಲಾರಿಯ ವಾನರ(ಓನರ್)ಹುಡ್ಕೊಂಡು ಹೋದಾಗ ಗೊತ್ತಾಗಿದ್ದು ಅದು ಬೇರೆಯವರ ಲಾರಿಯೆಂದು. ಮರುದಿನ ಬನ್ನಿ ಅಂತ ಹೇಳಿದ್ರು. ನನಗೆ ಕೊಡೈಕೆನಾಲ್ ಹೋಗಬೇಕಾಗಿದ್ರಿಂದ ಕಾರನ್ನು ಮಾವನ ಕೈಲಿ ಕೊಟ್ ಹೋದೆ. ಇಂದು ಬಂದಾಗ ಮಾವ ಹೇಳಿದ್ರು ಅವ್ರು 5 ಸಾವಿರ ಕೊಟ್ರು. ಇನ್ನು ಇನ್ಯೂರೆನ್ಸ್ ಅಥವಾ ಬೇರೇ ಗ್ಯಾರೇಜಿಗೆ ಕೊಡೋದಾ ಅಂತ ನೋಡ್ಬೇಕು.

ಇವತ್ತು ಅದೇ ಕಾರನ್ನು ತಗೊಂಡು ಆಫೀಸಿಗೆ ಬಂದೆ. ಕಾರನ್ನು ನೋಡಿದಾಗ ಒಮ್ಮೆ ಬೇಸರವಾಗತ್ತೆ.

Thursday, August 30, 2007

ತಿರುಕನೋರ್ವನೂರ ಮುಂದೆ

ಉಧ್ವವ.ಕಾಮ್ ನಲ್ಲಿ ಸಿಕ್ಕಿದ್ದು....

ತಿರುಕನ ಕನಸು
ಮುಪ್ಪಿನ ಷಡಕ್ಷರಿ

ತಿರುಕನೋರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿತ್ತಲೊಂದು ಕನಸ ಕಂಡನೆಂತೆನೆ
ಪುರದ ರಾಜ ಸತ್ತನವಗೆ
ವರಕುಮಾರರಿಲ್ಲದಿರಲು,
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು

ನಡೆದು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ವೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು

ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ
ಭಟ್ಟಿನಿಗಳ ಕೂಡಿ ನಲ್ಲ
ನಿಷ್ಟಸುಖದೊಳಿರಲವಂಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ

ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡಿತಿರಲು
ಲೀಲೆಯಿಂದ ಚಾತುರಂಗ ಬಲ ನೋಡುತ
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿ, ಸುತರುಗಳಿಗೆ
ಬಾಲೆಯರನು ನೋಡಿ ಮದುವೆ ಮಾಡಬೇಕೆಲೆ

ನೋಡಿ ಬನ್ನಿರೆನಲು ಜೀಯ
ನೋಡಿ ಬಂದವೆನಲು ಬೇಗ
ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ
ಗಾಡವಾಗೆ ಸಂಭ್ರಮಗಳು
ಮಾಡುತ್ತಿದ್ದ ಮದುವೆಗಳನು
ಕೂಡಿದಖಿಳ ರಾಯರೆಲ್ಲ ಮೆಚ್ಚುವಂದದಿ

ಧನದ ಮದವು ರಾಜ್ಯಮದವು
ತನುಜಮದವು ಯುವತಿಮದವು
ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ನೃಪರ ದಂಡು
ಮನೆಯ ಮುತ್ತಿದಂತೆಯಾಗೆ
ಕನಸ ಕಾಣುತಿರ್ದ ಹೆದರಿ ಕಣ್ಣ ತೆರೆದನು

Sunday, August 26, 2007

ಬಾಲ್ಯದಲ್ಲಿ ಇದ್ದ ಪಾಠ

ಬಾಲ್ಯದಲ್ಲಿ ಇದ್ದ ಪಾಠ...

ನೀವು ಕನ್ನಡ ಮಾಧ್ಯಮದಲ್ಲಿ ಓದಿದ್ರೆ, ಒಮ್ಮೆ ನಿಮಗೆ ಶಾಲೆಯ ನೆನಪಾಗಬಹುದು.

ಒಂದು ಎರಡು ಬಾಳೆಲಿ ಹರಡು,
ಮೂರು ನಾಲ್ಕು ಅನ್ನ ಹಾಕು,
ಐದು ಆರು ಬೇಳೆ ಸಾರು,
ಏಳು ಎಂಟು ಪಲ್ಯಕೆ ದಂಟು,
ಒಂಬತ್ತು ಹತ್ತು ಎಲೆ ಮುದಿರೆತ್ತು
ಒಂದರಿಂದ ಹತ್ತು ಹೀಗಿತ್ತು
ಊಟದ ಆಟವು ಮುಗಿದಿತ್ತು.

~~~~~~~~~~~~~~~~~~~~~~~~~

ಈತ ಈಶ, ಈತ ಗಣಪ.
ಈಶನ ಮಗ ಗಣಪ

ಗ ಣ ಪ
~~~~~~~~~~~~~~~~~~~~~~~~~

ಈಗ ಊಟದ ಸಮಯ
ಕನಕ ನೀನು ಬಾ
ಕಮಲ ನೀನು ಬಾ

ಕನಕಳ ಲಂಗ ಜಳ ಜಳ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ವಯಸ್ಸಾದ ಕಾರಣ (ದೇಹಕ್ಕೆ ಆದುದ್ದದ್ದಲ್ಲ. ಮನಸ್ಸಿಗೆ ವಯಸ್ಸಾಗಿದ್ದು) ಮರೆತು ಹೋಗಿದೆ. ತಪ್ಪಿದ್ದಲ್ಲಿ ತಿದ್ದಿ.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಗೆಳೆಯ ಸುಶ್ರುತ ದೊಡ್ಡೇರಿ ಹೇಳಿದ್ದು

ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
ನೀಲಿಯ ಬಾನಲಿ ತೇಲಲು ಸುಂದರ
ಬಾಲಂಗೋಚಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಟ್ಟದ ಗಾಳಿಪಟ.....


ಮತ್ತೆ,

ನನ್ನಯ ಬುಗರಿ
ಬಣ್ಣದ ಬುಗರಿ
ಗಿರಿಗಿರಿ ಸದ್ದನು ಮಾಡುವ ಬುಗರಿ.....

......ಕಾಮನಬಿಲ್ಲನು ಭೂಮಿಗೆ ಇಳಿಸಿ
ಗರಗರ ಸುತ್ತುವ ನನ್ನಯ ಬಗರಿ...

ಮುಂದೆ, ಮಧ್ಯೆ ಮಧ್ಯೆ ಮರ್ತ್ ಹೋಗಿದೆ.. :(

~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಶ್ಯಾಮಾ ಹೇಳಿದ್ದು

ಧರಣಿಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯನೆಂತು ಪೇಳ್ವೆನೊ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು

ಗೊಲ್ಲ ಕರೆದಾ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯಾಳು ತಾನಿದ್ದನು

ಪುಣ್ಯ ಕೋಟಿ ಎಂಬ ಹಸುವು
ತನ್ನ ಕಂದನ ನೆನೆದು ಕೊಂಡು
ಮುನ್ನ ಹಾಲನು ಕೊಡುವೆನೆನುತಾ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯಾಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆನೆಂದಿತು

ಸತ್ಯವೆ ನಮ್ಮ ತಾಯಿ ತಂದೆ
ಸತ್ಯವೆ ನಮ್ಮ ಬಂಧು ಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಕೊಂದು ತಿನ್ನುವೆನೆಂಬ ಹುಲಿಗೆ
ಚಂದದಿಂದ ಭಾಷೆಕೊಟ್ಟು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಅಮ್ಮ ನೀನು ಸಾಯಲೇಕೆ
ನಮ್ಮ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲು ಎಂದು
ಅಮ್ಮನಿಗೆ ಕರು ಹೇಳಿತು

ಆರ ಮೊಲೆಯನು ಕುಡಿಯಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಕೊಟ್ಟ ಭಾಷೆಯ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟ ಕಡೆಗಿದು ಖಂಡಿತಾ

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯಾಡಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನೂ

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ವೊದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನೂ

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನಾ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತಕೇಳಿ
ಕಣ್ಣನೀರನು ಸುರಿಸಿ ನೊಂದೂ
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನೂ

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನಾ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಪ್ರಭ ಹೇಳಿದ್ದು

ಆಮೆಯೊಂದು ಮರದ ಕೆಳಗೆ ಮನೆಯ ಮಾಡಿತು
ಹಕ್ಕಿಯಂತೆ ಹಾರಬೇಕು ಎಂದು ಬಯಸಿತು

ಹಕ್ಕಿ ಜೊತೆಗೆ ಸಂಗ ಮಾಡಿ ಆಸೆ ತಿಳಿಸಿತು
ಹಕ್ಕಿ ಹೇಳಿದಂತೆ ಆಮೆ ಕೇಳಲೊಪ್ಪಿತು

ಅತ್ತ ಇತ್ತ ಹಕ್ಕಿ ಎರಡು ಬಡಿಗೆ ಹಿಡಿದವು
ಆಮೆ ಅದಕೆ ಜೋತು ಬೀಳೆ ಹಾರಿ ಹೋದವು
.... ಆಮೆ ನೋಡಿ ಜನರು ನಕ್ಕರು
ನಕ್ಕ ಜನರ ಬೈಯಲೆಂದು ಆಮೆ ಬಾಯಿ ತೆರೆಯಿತು
ಮೇಲಿನಿಂದ ಕೆಳಗೆ ಬಿದ್ದು ಸತ್ತು ಹೋಯಿತು

~~~~~~~~~~~~~~~~
ಒಂದು ಕಾಡಿನ ಮಧ್ಯದೊಳಗೆ
ಎರಡು ಮರಗಳ ನಡುವೆ ಮಲಗಿ
ಮೂರು ಕರಡಿಗಳಾಡುತಿದ್ದವು
ನಾಲ್ಕು ಮರಿಗಳ ಸೇರಿಸಿ

ಐದು ಜನರು ಬೇಟೆಗಾರರು
ಆರು ಬಲೆಗಳ ಎಳೆದು ತಂದು
ಏಳು ಕರಡಿಗಳಿಡಿಯಲೆಂದು
ಎಂಟು ಎಂದರು ಹರುಷದೀ

ಒಂಬತ್ತು ಎಂದನು ಅವರಲೊಬ್ಬ
ಹತ್ತು ಎಂದನು ಬೇರೆಯವನು
ಎಣಿಸಿ ನೋಡಿದರೇಳೇ ಏಳು
ಇಲ್ಲಿಗೀ ಕತೆ ಮುಗಿಯಿತು

Monday, August 13, 2007

ವೃತ್ತಿ

ಹಿಂದೊಮ್ಮೆ ದನ ಕಾಯೋ ಮಂಜು ಬಗ್ಗೆ ಬ್ಲಾಗ್ ನಲ್ಲಿ ಬರೆದಿದ್ದೆ. ಅದನ್ನು ಸ್ವಲ್ಪ ವಿಸ್ತರಿಸಿ "ದಟ್ಸ್ ಕನ್ನಡ.ಕಾಮ್ ಗೆ ಕಳಿಸಿದ್ದೆ. ಅದಕ್ಕೆ "ವೃತ್ತಿ" ಅಂತ ಹೆಸರಿಟ್ಟೆ.

ಬಿಡುವಾದಾಗ ಒಮ್ಮೆ ಕಣ್ಣು ಹಾಯಿಸಿ.

http://thatskannada.oneindia.in/sahitya/kathe/270707vrutti_yajnesh.html


ಕ್ರಿಷ್ಣ ಮತ್ತು ದೆವ್ವ

ಅಮವಾಸ್ಯೆಯ ರಾತ್ರಿ 11:30, ಕ್ರಿಷ್ಣ ಮತ್ತು ಜುಟ್ಟು ಸೈಕಲ್ ಮೇಲೇರಿ ಮನೆಗೆ ಹೊಂಟಿದ್ದ. ಆ ಸೈಕಲ್ ಅವನ ಅಪ್ಪ ಶೀನಣ್ಣ ಸಣ್ಣಕಿದ್ದಾಗ ತಗಂಡಿದ್ದಾಗಿತು. ಅಪರೂಪಕ್ಕೊಮ್ಮೆ ಕೆಲಸ ನಿರ್ವಹಿಸುವ ಬ್ರೇಕು ಟೈರ್, ಪೆಡಲ್ ಬಿಟ್ಟರೆ ಉಳಿದುದಕ್ಕೆಲ್ಲ ಕ್ರಿಷ್ಣನ ಅಪ್ಪಂಗೆ ಆದಷ್ಟೇ ವಯಸ್ಸಾಗಿತ್ತು. ಮನೇಲಿ ಅಪ್ಪ ಅಮ್ಮ ಫಿಲ್ಮು ನೋಡಕೆ ಬಿಡ್ತ್ವಲ್ಲೆ ಹೇಳಿ ಕ್ರಿಷ್ಣ ಸುಬ್ಬಣ್ಣನ ಮನೆಗೆ ಹೋಗ್ತಿದ್ದ. ಅವತ್ತು ಬ್ಯಾಟರಿ ತಗಂಡು ಹೋಗಕೆ ಮರ್ತೇ ಹೋಗಿತ್ತು. ಫಿಲ್ಮ್ ಮುಗಿದ್ ತಕ್ಷಣ ಸುಬ್ಬಣ್ಣ ಲಾಟೀನು ಕೊಡ್ತಿ ಅಂದ್ರು ತಗಳದೇ ಕಪ್ಪಲ್ಲೇ ಇಬ್ರು ಹೊಂಟಿದ್ದ. ದಿನಾ ಒಡಾಡೋ ದಾರಿಯಾಗಿದ್ರಿಂದ ಸುಬ್ಬಣ್ಣನೂ ಸುಮ್ನಾನಾದ. ಸುಬ್ಬಣ್ಣನ ಮನೆ ಹತ್ರ ರಸ್ತೆ ಸ್ವಲ್ಪ ಏರು ಇದ್ದಿದ್ರಿಂದ ಸೈಕಲ್ ತಳ್ಕಿಂಡೇ ಹೋದ. ಚೂರು ಮುಂದೆ ಹೋದ ತಕ್ಷಣ ಇಳಿ ಇತ್ತು.ಶುರುನಲ್ಲೇ ಸಣ್ಣ ಮುರಿ. ಅದು ಬೇರೆ ಕಗ್ಗತ್ತಲು. ಕ್ರಿಷ್ಣಂಗೆ ಸುಬ್ಬಣ್ಣ ಹೊರಡಕಿದ್ರೆ "ಇವತ್ತು ಅಮವಾಸ್ಯೆ, ನಿಧಾನ ಹೋಗಿ" ಅಂತ ಹೇಳಿದ್ದು ನೆನಪಾತು. ಸ್ವಲ್ಪ ಹೆದ್ರಿಕೆ ಆತು. ಜೊತೆಗೆ ಜುಟ್ಟು ಇದ್ದಿದ್ರಿಂದ ಧೈರ್ಯ ತಗಂಡ. ಮುರಿ ಹತ್ರ ಇಬ್ರೂ ಸೈಕಲ್ ಹತ್ತಿ ಹೊಂಟ. ಕ್ರಿಷ್ಣ ಸೈಕಲ್ ಹೊಡಿತಾಯಿದ್ದ. ಹಿಂದೆ ಜುಟ್ಟು. ಮುರಿನಲ್ಲಿ ಇಳಿತಾಯಿದ್ದ ಹಂಗೆ ಸೈಕಲ್ ಬುಡ್ ಅಂತ ಎಂತಕೋ ಹೊಡತ್ತು. ಎಂತೋ ಒಡಿಹೋದ ಹಂಗೆ ಆತು. ಕ್ರಿಷ್ಣ "ಅಪ್ಪಯ್ಯಾ...ಅಪ್ಪಯ್ಯಾ" ಅಂತ ಸೈಕಲ ಬಿಟ್ಟು ಮನೆ ಕಡೆ ಓಡಕೆ ಶುರು ಮಾಡ್ದ. ಜುಟ್ಟು ಅವನ ಮನೆ ಕಡೆ ಓಡಿಹೋದ.

ಅಪ್ಪಯ್ಯಾ.. ಅಪ್ಪಯ್ಯಾ.. ಕೂಗಿದ್ದು ಇಡೀ ಊರಿಗೇ ಕೇಳ್ತು. ಮಲಗಿದ್ದ ಶೀನಣ್ಣ ಕನಸ್ಸಲ್ಲಿ ಯಾರೋ ಕೂಗಿದ ಅಂತ ಮಾಡ್ಕಿಂಡ. ಆದ್ರೆ ಕೂಗದು ಇನ್ನು ಜೋರಾಗಿ ಕೇಳ್ತಾಯಿತ್ತು. ಕ್ರಿಷ್ಣ ಮನೇ ಕಡೆ ಓಡಿ ಬರ್ತಾಯಿದ್ದಿದ್ದ. ಇದು ತನ್ನ ಮಗಂದೇ ದ್ವನಿ ಅಂತ ಶೀನಣ್ಣಂಗೆ ಗೊತ್ತಾಗಿ ಬ್ಯಾಟರಿನೂ ತಗಳದೇ ಎದ್ದು ರಸ್ತೆಕಡೆ ಓಡಿದ. ಕಪ್ಪು ಬೇರೆ. ಕ್ರಿಷ್ಣಂಗೆ ಯಾವುದರ ಪರಿವೇ ಇಲ್ಲೆ. ಓಡಿ ಬರ್ತಾಯಿದ್ದ ಅಪ್ಪಂಗೆ ಡಿಕ್ಕಿ ಹೊಡೆದು ಮತ್ತೆ ದೆವ್ವಕ್ಕೆ ಡಿಕ್ಕಿ ಹೊಡಿದಿ ಅಂತ ಇನ್ನೊಂದು ಕಡೆ ಓಡಕೆ ಶುರು ಮಾಡಿದ. ಬಿದ್ದು ಸುದಾರಿಸ್ಕಿಂಡು ಮತ್ತೆ ಶೀನಣ್ಣ ಕ್ರಿಷ್ಣನ ಹಿಂದೆ ಓಡಿ ಹೋಗಿ ಅಂತೂ ಅವನ ಹಿಡಿದು ಏಂತಾತು ಅಂತ ಕೇಳ್ದ. ಮುರಿ ಹತ್ರ ದೇವ್ವ ತಂಗೆ ಡಿಕ್ಕಿ ಹೊಡತ್ತು ಅಂತ ಕ್ರಿಷ್ಣ ಹೇಳಕಿದ್ರೆ ಸುಮಾರು ಹೊತ್ತಾತು.

ಶೀನಣ್ಣಂಗೆ ಅಲ್ಲಿಗೆ ಹೋಗಿ ಸೈಕಲ್ ತರಕೆ ಹೆದ್ರಿಕೆ. ಕ್ರಿಷ್ಣನ್ನ ಮನೆಗೆ ಕರ್ಕಂಡು ಹೋದ.ಜುಟ್ಟು ಅಲ್ಲಿಂದ ಕಾಲು ಕಿತ್ತವ ಮನೆ ತನಕ ಒಂದೇ ಉಸಿರಲ್ಲಿ ಓಡಿ ಹೋಗಿ ಮುಚ್ಚಿಹಾಕ್ಕಿಂಡು ಮಲಗಿದ್ದ. ಇತ್ಲಗೆ ಶೀನಣ್ಣಂಗೆ ಎಂತ ಮಾಡದು ಅಂತ ಗೊತ್ತಾಗಲ್ಲೆ. ಅಷ್ಟು ಹೊತ್ತಿಗೆ ಊರಗಿದ್ದವೆಲ್ಲ ಎದ್ದು ಶೀನಣ್ಣನ ಮನೆ ಕಡೆ ಓಡಿ ಬಂದ. ಬರ್ತಾ ಗಣಪತಣ್ಣ ರಸ್ತೆ ಮದ್ಯೆ ಇದ್ದ ಸೈಕಲ್ ತಗಂಡು ಬಂದ. ಅವ್ರಿಗೆ ದೆವ್ವ ಕಾಣದೇ ಇದ್ದಿದ್ದು ಕ್ರಿಷ್ಣಂಗೆ ಆಶ್ಚರ್ಯ ಆತು. ಬಂದವೆಲ್ಲ ಎಂತಾತು ಅಂತ ಕೇಳ್ದ. ಶೀನಣ್ಣ ಅವಕ್ಕೆ ಕ್ರಿಷ್ಣನ ಪುರಾಣ ಎಲ್ಲ ಹೇಳ್ದ. ಸೈಕಲ್ ಗೆ ದೆವ್ವ ಬಂದು ಹೊಡದ್ದು, ಕ್ರಿಷ್ಣ ಓಡಿ ಬಂದಿದ್ದು ಏಲ್ಲ ಕೇಳಿ ಬಂದವಕ್ಕೆಲ್ಲ ಸ್ವಲ್ಪ ಹೆದ್ರಿಕೆ ಆತು. ಆದ್ರೆ ಗಣಪತಣ್ಣ ಮಾತ್ರ ಜೋರಾಗಿ ನಗಾಡಕೆ ಶುರು ಮಾಡಿದ. ಎಂತಕೆ ಅಂತ ಎಲ್ಲ ಕೇಳ್ದ. "ಅದು ದೆವ್ವನೂ ಅಲ್ಲ ಎಂತೂ ಅಲ್ಲ, ನಮ್ಮನೆ ದನಗಳು. ಮೇಯಕ್ಕೆ ಹೋಗಿದ್ದ ದನಗಳು ಈಗ ಬಂದ. ಕೊಟ್ಟಿಗೆಲಿ ಕಟ್ಟ್ ಹಾಕಿಕ್ಕೆ ಬೈಂದಿ. ಒಂದು ದನದ ಕೋಡಗೆ ಸೈಕಲ್ ಸೀಟು ಸಿಗ್ತು. ಬರ್ತಾಯಿರಕಿದ್ರೆ ನಿಮ್ಮನೆ ಸೈಕಲ್ ಸಿಗ್ತು. ತಗಂಡ್ ಬಂದಿ" ಅಂದ. ಎಲ್ಲ ಕ್ರಿಷ್ಣಂಗೆ ಬೈತಾ ಮನೆಗೆ ಹೊಂಟ

Tuesday, July 24, 2007

ಬ್ಲಾಕ್.....

ಬ್ಲಾಕ್.....
ಯಾವ ಬ್ಲಾಕ್ ಇರಬಹುದು ಎನಿಸಬಹುದು. ಜಯನಗರ ಫಸ್ಟ್ ಬ್ಲಾಕೇ, ಮುನೇಶ್ವರ ಬ್ಲಾಕೇ ಅಥವಾ ರೋಡ್ ಬ್ಲಾಕೇ...

ಯಾವುದೂ ಅಲ್ಲ!!!
ನಮ್ಮ ಆಫೀಸಿನಲ್ಲಿ "ಬ್ಲಾಗ್ ಗಳೇ ಬ್ಲಾಕ್ ಆಗಿತ್ತು. 3 ದಿನದ ಹಿಂದೆ ಅಭ್ಯಾಸಬಲದಂತೆ ಬ್ಲಾಗ್ ನೋಡೋಕೆ ಹೋದ್ರೆ..ಅದೇ ಬ್ಲಾಕ್!!! ಬಹಳ ಬೇಸರವಾಯ್ತು. ಎಷ್ಟೋ ವರ್ಷಗಳ ನಂತರ ಬರಿಯೋಕೆ ಪ್ರಾರಂಭಮಾಡಿದ್ದ ನನಗೆ ಇದ್ದಕಿದ್ದ ಹಾಗೆ ಬ್ಲಾಗ್ ಬ್ಲಾಕ್ ಆಗಿದ್ದು ಒಂದು ರೀತಿ ಆಘಾತವಾಗಿತ್ತು.

ಇವತ್ತು ಎನಾದ್ರು ಬರತ್ತಾ ಅಂತ ನೋಡಿದೆ. ಬ್ಲಾಗ್ ಬರ್ತಾಯಿದೆ. ಮತ್ತೆ ಯಾವಾಗ ಬ್ಲಾಕ್ ಆಗತ್ತೆ ಅಂತ ಗೊತ್ತಿಲ್ಲ.

Friday, July 6, 2007

ಜುಲೈ 6

ಜುಲೈ 6, ನನ್ನ ಜೀವನದ ಓಂದು ಪ್ರಮುಖ ಘಟ್ಟ !!!

ಇಂದಿಗೆ ಬೆಂಗಳೂರಿಗೆ ಬಂದು 15 ವರ್ಷವಾಯ್ತು. ನಂಬೋಕೆ ಆಗ್ತಾಯಿಲ್ಲ. ವರ್ಷಗಳು ಹೇಳೋದು ಸೆಕೆಂಡಿನಂತೆ ಹೋಗ್ತಾಯಿದೆ. ಇಂದಿಗೂ ಹಳೆಯ ದಿನಗಳು ಕಣ್ಮುಂದೆ ಕಟ್ಟಿದ ಹಾಗೆ ಇದೆ. ಪ್ರಪಂಚವೆಂದರೆ ಏನೂ ಅರಿಯದೇ ಇದ್ದ ನನಗೆ ಬೆಂಗಳೂರಿಗೆ ಸೋದರಮಾವ ಕರೆದುಕೊಂಡು ಹೋಗ್ತೀನಿ ಅಂದಾಗ ಮನಸ್ಸಲ್ಲಿ ಬಹಳ ಸಂತೋಷವಾಗಿತ್ತು. ಬೆಂಗಳೂರಿನ ಬಗ್ಗೆ ಕೇಳಿದ್ದೆ, ಅದನ್ನು ನೋಡಬೇಕು ಅಂತ ಮನಸ್ಸಲ್ಲಿ ಇತ್ತು. ಅದಕ್ಕಿಂತ ಮೊದಲು 5 ನೇ ಕ್ಲಾಸಿನಲ್ಲಿ ಸಾಗರದಲ್ಲಿ ಸೋದರತ್ತೆಯ ಮನೆಯಲ್ಲಿ ಇದ್ದೆ. 7ನೇ ಕ್ಲಾಸಿನ ಅರ್ದಕ್ಕೆ ಮನೆಗೆ ಹೋಗಿದ್ದೆ. ಮೊದಲಿಂದಲೂ ಮನೆಯ ಪ್ರೀತಿ ಜಾಸ್ತಿ. ಅದಕ್ಕೆ ಕಿವಿ ನೋವು ಅಂತ ಕಾರಣ ಕೊಟ್ಟು ಅಲ್ಲಿಂದ ಮನೆಗೆ ಹೋಗಿದ್ದೆ. ಬೆಂಗಳೂರಿಗೆ ಹೋಗ್ತೀನಿ ಅಂದಾಗ, ಇವನು ನಾಲ್ಕು ದಿನಕ್ಕೆ ವಾಪಾಸ್ ಬರ್ತಾನೆ ಅಂತ ಎಷ್ಟೋ ಜನ ಭವಿಷ್ಯ ನುಡಿದಿದ್ದರು.

ಮಾವನ ಜೊತೆ ಬೆಂಗಳೂರಿನ ಸಣ್ಣ ಮನೆಯಲ್ಲಿ ವಾಸ. ಆಗ ಮಾವನಿಗೆ ಮದುವೆಯಾಗಿರಲಿಲ್ಲ. ಬಂದ ಒಂದು ವಾರ ಫುಲ್ ಖುಷಿ. ಏಲ್ಲಿ ನೋಡಿದರಲ್ಲಿ ಕಾರುಗಳು, ಚಿತ್ರವಿಚಿತ್ರ ಜನಗಳು, ಭಾಷೆ, ಸಂಸ್ಕೃತಿ..ಒಂದೇ.. ಎರಡೇ....ಆಮೇಲೆ ಮನೆ ಕಡೆ ನೆನಪು ಕಾಡೋಕೆ ಶುರುವಾಯ್ತು . ಓದೋದು ಬೇಡ ಏನೂ ಬೇಡ ಅಂತ ಅನಿಸೋಕೆ ಶುರುವಾಯ್ತು. ಊರಿಗೆ ಹೋದ್ರೆ ಏಲ್ಲ ನಗಾಡ್ತಾರೆ ಅಂತ ಭಯ ನನ್ನನ್ನು ಮನೆಗೆ ಹೋಗೋದನ್ನ ತಡೆಯುತ್ತಿತ್ತು. ಹಾಗಾದ್ರೆ ಏನ್ ಮಾಡೋದು, ನಾನ್ಯಾಕೆ ಓದಬೇಕು, ಮನೆಗೆ ಹೋದ್ರೆ ಏನಾಗತ್ತೆ ಅಂತ ನನ್ನಲ್ಲೆ ದ್ವಂದ್ವ ಶುರುವಾಯ್ತು. ಹೇಳೋಣ ಅಂದ್ರೆ ಯಾರು ಇರ್ಲಿಲ್ಲ. ಯಾರಲ್ಲೂ ಹೇಳೋಕಾಗದೆ ಸುಮ್ನೆ ಕಿಟಕಿಯಿಂದ ಹೊರಗೆ ನೋಡ್ತಾಯಿದ್ದೆ . ಸ್ಕೂಲಿನಲ್ಲಿ ಯಾರ ಹತ್ರನೂ ಈ ವಿಷಯದ ಬಗ್ಗೆ ಜಾಸ್ತಿ ಮಾತಾಡ್ತಯಿರಲಿಲ್ಲ. ಕೊನೆಗೆ ಬೆಂಗಳೂರಿನಲ್ಲಿ ಸಾದ್ಯವಾದಷ್ಟು ದಿನ ಇರೋದು ಅಂತ ಸುಮ್ಮನಾದೆ.

ಅವಾಗ ನನಗೆ ಹೊಳೆದಿದ್ದು ನೆಕ್ಷ್ಟ್ ಯಾವಾಗ ಊರಿಗೆ ಹೋಗೋದು ಅಂತ. ತಕ್ಷಣ ಮುಂದೆ ಯಾವ ಹಬ್ಬ ಬರತ್ತೆ ಅಂತ ನೋಡಿದೆ. ಚೌತಿ ಹತ್ತಿರವಿತ್ತು. ಎಷ್ಟು ದಿನವಿರಬಹುದು ಅಂತ ಲೆಕ್ಕ ಹಾಕಿದೆ. ಇನ್ನು 50 ದಿನದಲ್ಲಿ ಊರಿಗೆ ಹೋಗೋದು ಅಂತ ಮನಸ್ಸಲ್ಲಿ ಸಮಾದಾನ ತಂದ್ಕೊಂಡೆ. ಪ್ರತಿದಿನ ಲೆಕ್ಕ ಹಾಕೋದೆ ನನ್ನ ಕೆಲಸ. ಅವಾಗ ಒಂದೊಂದು ದಿನಾನು ವರ್ಷಗಳಂತೆ(ಆದರೆ ಇಂದು ಅದಲು ಬದಲು). ಚೌತಿ ಬಂದೇ ಬಿಡ್ತು. ಜೈಲಿನಿಂದ ಕೈದಿಯೊಬ್ಬ ಬಿಡುಗಡೆಯ ದಿನ ಕಾದ ಹಾಗಿತ್ತು ನನ್ನ ಪರಿಸ್ತಿತಿ. ಆದರೆ ಮಾವ ಚೌತಿಗೆ ಹೋಗೋದೂ ಬೇಡ ಅಂದ್ಬಿಟ್ರು. ಕೊನೆಗೆ ಅತ್ತು ಕರೆದು ಚೌತಿಗೆ ಮನೆಗೆ ಹೋದೆ.ಕ್ರಮೇಣ ಬೆಂಗಳೂರಿನ ವಾತಾವರಣಕ್ಕೆ ಹೊಂದ್ಕೊಂಡೆ. ಮನೆ ನೆನಪು ಕಡಿಮೆಯಾಗ್ತಾ ಬಂತು. ಆದರೆ ಮನೆಯಿಂದ ವಾಪಾಸು ಬಂದ ಮೇಲೆ 10 ದಿನ ಬಾರಿ ಕಷ್ಟವಾಗ್ತಾಯಿತ್ತು.

ಮೊದಲು ಬೆಂಗಳೂರಿನಲ್ಲಿರುವ ಎಷ್ಟೋ ದೇವರುಗಳ ಹೆಸರು ಕೇಳಿ ಆಶ್ಚರ್ಯವಾಗ್ತಾಯಿತ್ತು. ಅಣ್ಣಮ್ಮ ಅಂತ ನಾನು ಮೊದಲು ಕೇಳಿರಲಿಲ್ಲ. ಯಾರದ್ದೋ ಹೆಸರಿರಬಹುದು ಅಂದ್ಕೊಂಡಿದ್ದೆ. ಆಮೇಲೇ ಗೊತ್ತಾಗಿದ್ದು ದೇವರ ಹೆಸರು ಅಂತ. ಊರಲ್ಲಿ ಒಮ್ಮೆ ಊಟ ಮಾಡ್ತಾಯಿದ್ದಾಗ ಅಮ್ಮ ಅನ್ನ ಹಾಕೋಕೆ ಬಂದ್ಲು. ನಾನು ತಿನ್ನಕತ್ತಿ ತಡಿ ಅಂದೆ. ಅದಕ್ಕೆ ಅಮ್ಮ ಅದು ಎಂತದು ತಿನ್ಕತ್ತಿ, ಉಣ್ಕತ್ತಿ ಹೇಳು ಅಂದ್ಲು. ಊರಿನ ಎಷ್ಟೋ ಶಬ್ದಗಳು ಮರೆಯಾಗಿ ಹೋಗಿತ್ತು.

ಸ್ಕೂಲು, ಕಾಲೇಜು, ಕೆಲಸ, ಆಮೇಲೆ ಮದುವೆ ಹೀಗೆ ದಿನ ಬೇಗ ಕಳೆದುಹೋಯ್ತು. ಓದೋವಾಗ ವರ್ಷಕ್ಕೆ 2 ತಿಂಗಳು ಊರಲ್ಲಿ ಇರ್ತಾಯಿದ್ದೆ. ಕೆಲಸಕ್ಕೆ ಸೇರಿದ ಮೇಲೆ ಊರಿಗೆ ಹೋಗೋದೆ ಅಪರೂಪ. ಹೋದರೂ ಒಂದೆರಡು ದಿನ ಮಾತ್ರ ಇರೋದು. ಊರಿನ ಮಳೆಗಾಲ ನೋಡದೆ ಎಷ್ಟು ದಿನವಾಯ್ತು. ಈಗ ಊರಲ್ಲಿ ತುಂಬಾ ಮಳೆಯಂತೆ. ನಿನ್ನೆ ಮನೆಗೆ ಫೋನು ಮಾಡಿದ್ದೆ. ಕರೇಂಟಿಲ್ಲದೇ 15 ದಿನವಾಯ್ತಂತೆ. ಫೋನು ಕೆಲವೊಮ್ಮೆ ಸರಿ ಇರತ್ತಂತೆ. ಇಲ್ಲಿ 1 ನಿಮಿಷ ಕರೇಂಟಿಲ್ಲ ಅಂದ್ರೆ ನಮಗೆ ಕಳೆಯೋದು ಕಷ್ಟ. ಅಲ್ಲಿ ಬರೋಬ್ಬರಿ 15 ದಿನ ಕರೇಂಟಿಲ್ಲ.

ಲಾಟಿನು, ಚಿಮಣಿಯಲ್ಲಿ ಕಾಲ ಕಳೆಯೋದೆ ಒಂದು ರೀತಿ ಚಂದ. ಜೋರಾಗಿ ಹೊಯ್ಯುವ ಮಳೆಯ ಶಬ್ದ, ಸಂಜೆಯಾಗ್ತಾಯಿದ್ದ ಹಾಗೆ ಜೀರುಂಡೆಯ ಶಬ್ದ ಕೇಳೋಕೆ ಖುಷಿ.....

ಹಾಂ....ಈ 15 ವರ್ಷದಲ್ಲಿ ಸಾದಿಸಿದ್ದು ಎನು ಅಂತ ನನಗೇ ಗೋತ್ತಿಲ್ಲ.

Monday, June 11, 2007

ಮಣ್ಣಿನ ವಾಸನೆ

"ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು"

ಮಳೆಯನ್ನು ಏಷ್ಟು ಅದ್ಬುತವಾಗಿ ಚನ್ನವೀರ ಕಣವಿಯವರು ವರ್ಣಿಸಿದ್ದಾರೆ. ಮಲೆನಾಡಿನಲ್ಲಿ ಮಳೆಯ ಅಂದವೇ ಬೇರೆ. ಅದಕ್ಕೆ ಅದರದೇ ಆದ ಸಂಗೀತ, ಲಯ, ವೇಗವಿರತ್ತೆ. ಈ ಕವನವನ್ನು ಓದುತ್ತಾಯಿದ್ದರೆ ಊರಿಗೆ ಹೋಗಿ ಮಳೆಯಲ್ಲಿ ನೆನೆಯೋಣ ಅನ್ನಿಸತ್ತೆ. ಮಳೆಯನ್ನು ನೋಡುತ್ತಾ ಹೊಸಗನಸ ಕಾಣೋಣ ಅನ್ನಿಸತ್ತೆ. ಕ್ರಿಕೇಟ್ ನಲ್ಲಿ ನೀವು ಮೆಕ್ಷಿಕನ್ ಅಲೆಯನ್ನು ನೋಡಿರಬಹುದು. ಜನ ಹೋ ಏಂದು ಸರದಿಯ ಮೇಲೊಬ್ಬೊಬ್ಬರಾಗಿ ಏದ್ದು ನಿಲ್ಲುವುದು. ಆದರೆ ಅದು ಮಳೆಯ ಜೊತೆ ಗಾಳಿಯು ಲೀನವಾದಾಗ ಉಂಟಾಗುವ ಅಲೆಗೆ ಸರಿಸಾಟಿಯಲ್ಲ. ಮಳೆಯ ಅಲೆ ನೋಡಲು ಬಹಳ ಸುಂದರ.

ಅಮ್ಮ ಏಳು,ಬೆಳಗಾಯ್ತು ಅಂತ ಹೇಳಿದಾಗ ಎದ್ದು ಸೀದಾ ಹೊರಗೆ ಹೋಗ್ತಾಯಿದ್ದೆ. ಮಳೆಯನ್ನು ನೋಡ್ತಾ ಅಲ್ಲೇ ಕುಳಿತಿರುತ್ತಿದ್ದ ನನಗೆ ಅಮ್ಮ ಮತ್ತೆ ಕರೆದಾಗಲೇ ಎಚ್ಚರವಾಗ್ತಾಯಿದ್ದಿದ್ದು. ನಿದಾನ ಹೋಗು, ಸಂಕ ದಾಟೋವಾಗ ಹುಶಾರು, ಗದ್ದೆಯಲ್ಲಿ ಹೋಗೋವಾಗ ಹಾಳಿಯ ಮೇಲೇ ಹೋಗು, ನೀರಲ್ಲಿ ಆಟ ಆಡಬೇಡ, ಮಳೆಯಲ್ಲಿ ನೆನಿಬೇಡ, ಜ್ವರ ಬರತ್ತೆ ಅಂತೆಲ್ಲ ಅಮ್ಮ ಶಾಲೆಗೆ ಹೋಗೋವಾಗ ಹೇಳ್ತಾಯಿದ್ದಳು. ಎಲ್ಲದ್ದಕ್ಕೂ ತಲೆಯಾಡಿಸಿ ಹೋಗ್ತಾಯಿದ್ದೆ.

ನಮ್ಮ ಮನೆಯಿಂದ ಶಾಲೆ ಸುಮಾರು 2 ಕಿ.ಮಿ ಆಗ್ತಾಯಿತ್ತು. ಗದ್ದೆಯನ್ನು ಹಾದು ಹೋಗಬೇಕಿತ್ತು. ಕೆಲವು ಕಡೆ ನಾಟಿ ಮಾಡಿದ ಗದ್ದೆಗಳು. ಆ ಗದ್ದೆಯ ಹಾಳಿ ಹಾಳಾಗಬಾರದೆಂದು ಗದ್ದೆಯ ಮಣ್ಣನ್ನು ಹಾಳಿಯ ಮೇಲೆ ಹಾಕಿರುತ್ತಿದ್ದರು. ಎಷ್ಟೋ ದಿನ ಏಲ್ಲೋ ನೋಡುತ್ತಾ ಒಣಗಿರದ ಹಾಳಿಯನ್ನು ಮೆಟ್ಟಿ, ಕಾಲು ಕೆಸರು ಮಾಡಿಕೊಂಡು, ಕಾಲು ತೊಳಿಯಲಿಕ್ಕೆ ಹೊಳೆಗೆ ಹೋಗಿ, ಅಲ್ಲಿ ಆಟ ಆಡಿ ಬರ್ತಾಯಿದ್ದೆ.

ಇನ್ನು ನಾಟಿ ಮಾಡಿರದ ಗದ್ದೆಯೆಂದರೆ ನಮಗೆ ಬಹಳ ಇಷ್ಟ. ಎಲ್ಲರು ಒಟ್ಟಾಗಿ ಕಾಲಲ್ಲಿ ನೀರನ್ನು ತಳ್ಳಿದಾಗ ಉಂಟಾಗುವ ಸಣ್ಣ ಸಣ್ಣ ಅಲೆಗಳನ್ನು ನೋಡಿ ಕೇಕೆ ಹಾಕ್ತಾಯಿದ್ದೆವು. ಹಾಳಿಯ ಮೇಲೆ ಹೋಗ್ತಾಯಿರೋರ ಹತಿರ ಹೋಗಿ, ಜೋರಾಗಿ ಗದ್ದೆಗೆ ಹಾರಿ, ಅವರ ಮೇಲೆ ನೀರು ಹಾರಿಸಿ ಓಡಿಹೋಗೋದನ್ನ ನೆನೆಸಿಕೊಂಡರೆ ಈಗಲೂ ನಗು ಬರತ್ತೆ.

ನಿನ್ನೆ ನೈಸ್ ರಸ್ತೆಯಲ್ಲಿ ಹೋಗ್ತಾಯಿದ್ದೆ. ಸಣ್ಣದಾಗಿ ಮಳೆ ಬರ್ತಾಯಿತ್ತು. ಕಾರನ್ನು ನಿಲ್ಲಿಸಿ ಕೆಳಗಿಳಿದು ಮಳೆಯಲ್ಲಿ ನೆನೆದೆ. ಆಗ ಮಳೇಲಿ ನೆನಿಬೇಡ, ಜ್ವರ ಬರತ್ತೆ ಅಂತ ಅಮ್ಮ ಹೇಳಿದ ಹಾಗಾಯ್ತು. ತಿರುಗಿ ನೋಡಿದೆ, ಯಾರು ಇರಲಿಲ್ಲ. ಅಮ್ಮ ಇದ್ದಿದ್ದರೆ ನನಗೆ ನೆನಿಯೋಕೆ ಬಿಡ್ತಾಯಿರಲಿಲ್ಲ ಅನ್ನಿಸಿತು. ಅಮ್ಮನಿಗೂ ಮಳೆಯನ್ನು ನೋಡಿದಾಗ ಮಕ್ಕಳ ನೆನಪಾಗಿರಬೇಕು. ಕಾಲನ ಹೊಡೆತಕ್ಕೆ ಸಿಕ್ಕು ನಾವೆಲ್ಲ ಮನೆಬಿಟ್ಟು ಹೊರಗೆ ಬಂದಿದ್ದೇವೆ. ಮತ್ತೆ ಮನೆಗೆ ಹೋಗಲಿಕ್ಕುಆಗದು, ಇಲ್ಲಿ ಇರಲೂ ಆಗದು. ಒಂದು ರೀತಿ ತ್ರಿಶಂಕುವಿನ ರೀತಿಯಾಗಿದೆ. ನಮಗೆ ನಮ್ಮ ಸಂತೋಷಕ್ಕಿಂತ ಪರರು ನಮ್ಮ ಬಗ್ಗೆ ಏನನ್ನುವರೋ, ಊರಲ್ಲಿ ಇದ್ದರೆ ನಮಗಾರು ಗೌರವ ಕೊಡೊಲ್ಲ ಅನ್ನುವ ಏಂಬ ಅಳುಕು ಅನ್ನತ್ತೆ. ಈಗ ಅಭಿಮನ್ಯುವಿನ ರೀತಿಯಾಗಿದೆ. ಬಂದಿದ್ದಾಗಿದೆ, ಹೋಗಲು ತಿಳಿಯದು.

ಮನಸ್ಸು ಏಲ್ಲೋ ಹೋಗಿತ್ತು. ಮಣ್ಣಿನ ವಾಸನೆಯನ್ನು ಆಘ್ರಾಣಿಸುತ್ತಾ ಮತ್ತೆ ಕಾರು ಹತ್ತಿ ಹೊರಟೆ.

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ...

Thursday, June 7, 2007

ನೀನು ಬೈರಪ್ಪ ಅವರ ಆವರಣ ಓದಿದ್ಯಾ?

"ನೀನು ಬೈರಪ್ಪ ಅವರ ಆವರಣ ಓದಿದ್ಯಾ?" ಮಿಂಚಂತೆ ಬಂತು ಪ್ರಶ್ನೆ.

ಒಮ್ಮೆ ತಲೆಯೆತ್ತಿ ಅವನ ನೋಡಿದೆ. ಒಮ್ಮೆ ಅವನನ್ನು ಅವಲೋಕಿಸಿದೆ. ತಕ್ಷಣ ಗೊತ್ತಾಯ್ತು, ಇವನ ತಲೆಯಲ್ಲಿ ಏನು ಇಲ್ಲ. ಬರೀ ಸಗಣಿ ತುಂಬಿದೆ. ಇಂತಹ ಜನ ನಮ್ಮ ಸುತ್ತಮುತ್ತ ಇರ್ತಾರೆ. ನಾನು ಎನ್ನುವ ಅಹಂಕಾರ ಮೈಯೆಲ್ಲ ತುಂಬಿಕೊಂಡಿರ್ತಾರೆ. ಅಂತವರು ಬಹಳ ಡೈಂಜರ್. ಅಂತವರ ಸುದ್ದಿಗೆ ಹೋಗದೆ ಇರೋದೆ ವಾಸಿ.

ಅಂದು ನಾನು ಹೂಂ, ಓದಿದ್ದೇನೆ ಅಂದಿದ್ರೆ ಆತ ನನ್ನನ್ನು ಕವಿ/ಸಾಹಿತಿ/ಬುದ್ದಿಜೀವಿ ಅಂತ ಕನ್ಸಿಡರ್ ಮಾಡ್ತಾಯಿದ್ದ ಅನ್ಸತ್ತೆ (?). ಎಲ್ಲಿ ನಾನು ಇನ್ನು ಓದಿಲ್ಲ ಅಂದ ತಕ್ಷಣ, ನನ್ನ ಹತ್ರ ಇದೆ, ಕೊಡ್ತೀನಿ, ಓದು ಅಂತ ಉಪದೇಶ ಮಾಡಿದ. ನಕ್ಕು ಸುಮ್ಮನಾದೆ. ನಾನೂ ಪುಸ್ತಕ ಓದ್ತೇನೆ. ನನಗೆ ಬೈರಪ್ಪನವರ ಕಾದಂಬರಿ ಇಷ್ಟಆಗತ್ತೆ. ಆವರಣ ಇನ್ನು ಓದಿಲ್ಲ, ಓದಬೇಕು. ದಿನಾ ಎಲೆಕ್ಟ್ರಾನಿಕ್ ಸಿಟಿಯಿಂದ ಮನೆಗೆ ಕಾರ್ ಡ್ರೈವ್ ಮಾಡ್ಕೊಂಡು ಹೋಗೋದೇ ಒಂದು ಸಾಹಸ. ಕೆಲವೊಮ್ಮೆ ಮನೆಗೆ ಹೋಗಿ ಮಲಗಿದರೆ ಸಾಕು ಅಂತ ಅನ್ಸತ್ತೆ. ನಾನು ಯಾವಾಗ ಬರ್ತೀನಿ ಅಂತ ಹೆಂಡತಿ ಬಾಗಿಲ ಹತ್ರ ನಿತ್ಗೊಂಡು ಕಾಯ್ತಾಯಿರ್ತಾಳೆ. ಅವಳ ಹತ್ರ ನಾಲ್ಕು ಮಾತಾಡಿ ಊಟ ಮಾಡೋದ್ರಲ್ಲಿ ಘಂಟೆ 11 ಆಗಿರತ್ತೆ. ವೀಕೆಂಡ್ ನಲ್ಲಿ ಪುಸ್ತಕ ಓದ್ತೀನಿ ಅಂತ ಹೇಳೋಣ ಅನಿಸ್ತು. ಹೇಳೋದು ಬೇಡ "ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ " ಆಗತ್ತೆ ಅಂತ ಸುಮ್ಮನಾದೆ.

Wednesday, May 30, 2007

ಹೆಸರು...

ಹೆಸರು...

ಅದು ನಮ್ಮನ್ನು ಗುರುತಿಸೋಕೆ ಅಂತ ಇಟ್ಟಿರೋದು ಅಂತಿರಾ?. ಹೀಗೆ ಹೆಸರೇ ಇಲ್ಲ್ದೇ ಇದ್ರೆ ಚೆನ್ನಾಗೋರ್ತಾಯಿತ್ತು. ಯಾರು ಯಾರನ್ನು ಕರೆದ್ರು ಅಂತ ಗೊತ್ತಾಗ್ತಾಯಿರಲಿಲ್ಲ. ಈ ಹೆಸರು ಕಂಡುಹಿಡಿದವರು ಯಾರೋ ಏನೋ !!! ಎಲ್ಲ ವಿಚಿತ್ರ !!!

ಎಷ್ಟೋ ಜನ ತಮ್ಮ ಹೆಸರು ಚೆನ್ನಾಗಿಲ್ಲ ಅಂತ ಅಪ್ಪ, ಅಮ್ಮನ್ನ ಬೈತಾರೆ. ಪಾಪ, ಅವ್ರೇನು ಮಾಡ್ತಾರೆ. ತಮಗಿಷ್ಟದ್ದನ್ನು ಇಟ್ಟಿರಬಹುದು. ಜಾತಕದ ಪ್ರಕಾರ ಹೆಸರು ಇಟ್ಟಿರಬಹುದು. ದೇವರ ಹೆಸರಿಟ್ಟ್ತೀನಿ ಅಂತ ಹರಕೆ ಹೊತ್ತ್ಗೊಂಡು ಇಟ್ಟಿರಬಹುದು. ತಮ್ಮ ಮನೆಯ ಹಿರಿಯರ ಹೆಸರು ನೆನಪಿರಲಿ ಅಂತ ಅಜ್ಜ ನ ಹೆಸರು ಇಟ್ಟಿರಬಹುದು (ಅಪ್ಪನ ಹೆಸರು ಗಣೇಶ, ಮಗನ ಹೆಸರು ಗಣೇಶ !!!. ಆದರೆ ನನಗೆ ತಿಳಿದ ಹಾಗೆ ಅಜ್ಜಿ ಹೆಸರನ್ನು ಮೊಮ್ಮಗಳಿಗೆ ಇಟ್ಟಿದ್ದು ಕೇಳಿಲ್ಲ. ನಿಮಗೆ ಏನಾದ್ರು ಗೊತ್ತೆ ?)

ಮೊದ್ಲೆಲ್ಲಾ ಉದ್ದ ಉದ್ದ ಹೆಸ್ರು ಇರ್ತಾಯಿತ್ತು. ಈಗೇ ಎರಡೇ ಅಕ್ಷರ ಇರೋ ಹೆಸ್ರು ಜಾಸ್ತಿ. ಮುಂದೊಂದು ದಿನ ಒಂದೇ ಅಕ್ಷರ ಬರಬಹುದು.

ಇನ್ನು ಕೆಲವರು ಬುದ್ದಿ (?) ಬಂದಮೇಲೆ ಅಥವಾ ಎಲ್ಲರೂ ತಮ್ಮ ಹೆಸರು ಹೇಳ್ಲಿಕ್ಕೆ ಅನುಕೂಲ ಆಗ್ಲಿ ಅಂತ ಶಾರ್ಟ್
ಮಾಡ್ಕೋತಾರೆ. ಕ್ರಿಷ್ಣಪ್ಪ ಅಂತ ಇದ್ದವರು ಶಾರ್ಟ್ ಆಗಿ ಕ್ರಿಸ್ ಅಂತನೋ ಇಟ್ಕೋತಾರೆ. ಇನ್ನು ನನ್ನ ಫ್ರೆಂಡ್ ದರಣೇಂದ್ರ ಮೂರ್ತಿ ತೈವಾನ್ ನಲ್ಲಿದಾನೆ. ಪಾಪ ಅಲ್ಲಿಯವರಿಗೆ ಇವನ ಹೆಸರು ಉಚ್ಚಾರಣೆ ಮಾಡೋಕೆ ಒದ್ದಾಡ್ತಾಯಿದ್ರು ಅನ್ಸತ್ತೆ. ಈಗ ಡ್ಯಾನ್ ಅಂತ ಇಟ್ಕೊಂಡಿದಾನೆ. ಇರ್ಲಿ, ಅವರ ಮರ್ಜಿ ಅಲ್ವಾ?

ಈಗ ನನ್ನೆಸ್ರಿಗೆ ಬರೋಣ. ನನ್ನೆಸ್ರು ಒಂತರಾ ವಿಚಿತ್ರ. ಹುಡುಕಿದ್ರೆ ಏಲ್ಲೋ ಒಂದಿಬ್ಬರು ಸಿಗಬಹುದು. ಹುಟ್ಟಿದಾಗ ಇಟ್ಟಿದ್ದು ಮಹೇಶ (ಈಗಲೂ ನಮ್ಮೂರಿಗೆ ಹೋಗಿ ಯಜ್ಞೇಶ್ ಅಂದ್ರೆ ಇಲ್ಲಿ ಯಾರು ಇಲ್ಲ ಅಂತಾರೆ, ಹಾಗೆ ಆಫೀಸಿಗೆ ಬಂದು ಮಹೇಶ್ ಅಂದ್ರೆ ಸೇಮ್ ರಿಪ್ಲೈ.) 2 ವರ್ಷ ಆದ್ಮೇಲೆ ಯಜ್ಞೇಶ್ವರನಿಗೆ ಆಹುತಿಯಾಗೋಕೆ ಹೋಗಿ, ಹಿರಿಯವರು ಮಾಡಿದ ಅದೃಷ್ಟದ ಪಲವಾಗಿ ಮರುಜನ್ಮ ಪಡೆದು ಬಂದ್ ಮೇಲೆ ಯಜ್ಞೇಶ್ ಅಂತ ಹೆಸ್ರಿಟ್ರು.

ಒಬ್ಬೊಬ್ರು ಒಂದು ರೀತಿ ಕರಿತಾರೆ. ಬಂಗಾಳಿ ಫ್ರೆಂಡ್ ಒಬ್ಬ ಜಗಣೇಸ್ ಅಂತ ಕರಿತಾಯಿದ್ದ. ಕೊನೆಗೆ ಕೇಳಿದಾಗ ಬಂಗಾಲ ಭಾಷೆಯಲ್ಲಿ "ಯ" ಬದ್ಲು "ಜ" ಉಪಯೋಗಿಸ್ತಾರೆ. ಹಾಗೆ ಕರಿಬೇಡಪ್ಪ ಅಂದ ಮೇಲೆ ಯಗ್ನೇಸ್ ಅಂತ ಕರಿಯೋಕೆ ಶುರು ಮಾಡ್ದ. 100 ರಲ್ಲಿ 99 ಜನ ಯಗ್ನೇಸ್ ಅಂತ ಕರೀತಾರೆ. "ಜ್ಞ" ಮತ್ತು "ಗ್ನ" ನಡುವೆ ವ್ಯತ್ಯಾಸ ಇಲ್ಲದೇ ಇರೋರು ಒಂದು ಕಡೆಯಾದ್ರೆ, ನಾಲಿಗೆ ಹೊರಳದೇ ಹೇಳೋರು ಇನ್ನೊಂದು ಕಡೆ."ಗ್ನ" ಅಲ್ಲ ಅಂದ್ರೆ, "ಯಜನೇಶ್" ಅಂತಾರೆ. ಇನ್ನು ಯಾವ್ದಾದ್ರು ಕ್ರೆಡಿಟ್ ಕಾರ್ಡಿನವರು ಫೋನ್ ಮಾಡಿದ್ರೆ "may i speaking to ya ya ya.....ಅಂತ ಹೇಳಿ ಕೊನೆಗೆ narayana swamy (ನನ್ನ ಅಪ್ಪನ ಹೆಸ್ರು)ಅಂತಾರೆ. ಅವ್ರು ಏಲ್ಲಿ ಯಾ..ಯಾ.. ಅಂತ ಹೇಳಿದ್ರೋ..ತಕ್ಷಣ ನಾನೇ Yajnesh ಅಂತ ಹೇಳ್ತೀನಿ. ಹೆಸ್ರಲ್ಲೇನಿದೆ ಮಣ್ಣು ಅಂತಿರಾ??? ಜನ ನೆನಪಿಟ್ಕೊಳ್ಳೋದು ನಮ್ಮ ವ್ಯಕ್ತಿತ್ವದಿಂದ ಅಲ್ವಾ?

ನೀವು ಒಂದ್ಸಲ ನನ್ನ ಹೆಸ್ರು ಹೇಳೋಕೆ ನೋಡಿ.. ನೆನಪಿಡಿ "ಗ್ನ" ಅಲ್ಲ..."ಜ್ಞ"...

Wednesday, May 23, 2007

ಹುಚ್ಚು

ನಿನ್ನೆ ಒಂದು ಪುಸ್ತಕ ಓದ್ತಾಯಿದ್ದೆ. ಅದರಲ್ಲಿ ಹುಚ್ಚಿನ ಬಗ್ಗೆ ಒಂದು ಲೇಖನ ಬಂದಿತ್ತು. ಅದರ ಸಾರವನ್ನು ತೆಗೆದುಕೊಂಡು ಅದಕ್ಕೆ ಕೈ, ಕಾಲುಗಳನ್ನು ಸೇರಿಸಿ ಬರಿಯೋಣ ಅಂತ ಇದೀನಿ.

ಏನಿದು ಹುಚ್ಚು????

ವೈದ್ಯಶಾಸ್ತ್ರದ ಪ್ರಕಾರ "ಮನೋರೋಗ".

ಏ ಅವನಿಗೆ ಹುಚ್ಚು ಹಿಡಿದಿದೆ ಅನ್ಸತ್ತೆ ಅಂದರೆ ಅವನನ್ನು ನಿಮ್ಯಾನ್ಸ್ ಅಥವಾ ಕಂಕನಾಡಿಗೆ ಸೇರಿಸ್ಬೇಕೇನೋ ಅನ್ನೋರು, ಏನಾದ್ರು ಎಡವಟ್ಟು ಮಾತಾಡಿದ್ರೆ ಹುಚ್ಚರ ರೀತಿ ಮಾತಾಡಬೇಡ ಅನ್ನೋರು, ಏನಾದರು ಜಾಸ್ತಿ ಯೋಚನೆ ಮಾಡ್ತಾಯಿದ್ದರೆ, ಇವಳಿಗೆ/ಇವನಿಗೆ ಏನೋ ಆಗಿದೆ, ಹೀಗೆ ಬಿಟ್ಟರೆ ಹುಚ್ಚು ಹಿಡಿಯೋ ಚಾನ್ಸ್ ಇರತ್ತೆ ಅನ್ನೋರು, ಅವನಿಗೆ ಹುಡುಗಿ ಕೈ ಕೊಟ್ಟಿದ್ದರಿಂದ ಹುಚ್ಚರ ತರ ವರ್ತಿಸಿತಾಯಿದಾನೆ ಅನ್ನೋ ಜನಗಳು ಇರ್ತಾರೆ.
ಇವೆಲ್ಲ ಮನೋರೋಗಕ್ಕೆ ಸಂಬಂದಪಟ್ಟಿರೋದು.

ಏಲ್ಲ ಪರಿದಿಯನ್ನು ದಾಟಿ, ಇತಿ ಮಿತಿಯನ್ನು ದಾಟಿದ ಅಂಟಿಗೂ ಹುಚ್ಚು ಎನ್ನುತ್ತಾರೆ. ಈ ಪ್ರಪಂಚದಲ್ಲಿ ಬಹಳ ರೀತಿಯ ಹುಚ್ಚರನ್ನೂ, ಹುಚ್ಚುತನಗಳನ್ನು ನಾವು ಕಾಣಬಹುದು.ಹಣದ ಅತಿಯಾಸೆ ಇರೋರು, ಜೀವನ ಪೂರ್ತಿ ಕಷ್ಟಗಳನ್ನೆಲ್ಲಾ ಅನುಭವಿಸಿಯಾದರೂ ಹಣ ಗಳಿಸಬೇಕು ಅಂತ ಇರ್ತಾರೆ. ಹೆಚ್ಚು ಹಣಗಳಿಸಬೇಕು ಅಂತ ಹಣದ ಹಿಂದೆ ಹೋಗೋರನ್ನು ನಾವು ಈಗ ಹೆಚ್ಚು ಕಾಣ್ತೇವೆ. ಅದು ಅತಿಯಾದರೆ ಅಡ್ಡಬಂದವರನ್ನು ಮುಗಿಸಿಯಾದರೂ ಹಣ ಗಳಿಸಬೇಕು ಅನ್ನೋದು ಅವರ ಉದ್ದೇಶವಾಗಿರತ್ತೆ. ಅಂತವರಿಗೆ ಏಷ್ಟು ಸಂಬಳ ಬಂದರೂ ತೃಪ್ತಿಯಿರೋದಿಲ್ಲ. ಅವನಿಗೆ ನನಗಿಂತ ಜಾಸ್ತಿ ಬರತ್ತೆ. ನಾನು ಅವನಷ್ಟು ಸಂಬಳ ಪಡೀಬೇಕು ಅಂತ ವಾಮಮಾರ್ಗನ್ನಾದರು ಬಳಸಿ ಹಣದ ಹಿಂದೆ ಓಡ ಹುಚ್ಚರನ್ನು ನಾವು ಕಾಣ್ತೇವೆ.

ಇನ್ನು ಕೆಲವರು ಇರ್ತಾರೆ, ಒಬ್ಬರನ್ನೊಬ್ಬರು ಪ್ರೀತಿಸಿ, ಅವರನ್ನು ಪಡೆಯಲು ತಮ್ಮನ್ನು ಹೆತ್ತು, ಹೊತ್ತು ಬೆಳಿಸಿದ ತಂದೆ ತಾಯಿಗಳನ್ನು ಬಿಟ್ಟಾದರು ಸರಿ, ಅವಳನ್ನು/ಅವನ್ನನ್ನು ಪಡೆಯಲೇ ಬೇಕು ಅನ್ನುವ ಹುಚ್ಚುತನವನ್ನು ನಾವು ಕಾಣ್ತೇವೆ. ಆಗ ಅವರಿಗೆ ಯಾರ ತಿಳುವಳಿಕೆ, ಬುದ್ದಿಮಾತುಗಳು ಅವರಿಗೆ ರುಚಿಸೋಲ್ಲ. ತಮ್ಮ ಗುರಿ ಅವಳನ್ನು/ಅವನನ್ನು ಪಡೆಯೋದು ಅಂತ ಇರತ್ತೆ. ಕೊನೆಗೆ ಒಬ್ಬರನ್ನೊಬ್ಬರು ಸಿಗದೇ ಇದ್ದರೆ, ಜೀವವನ್ನಾದರು ಕಳೆದುಕೊಂಡು ಬಿಡಬೇಕೆನ್ನುವ ಹುಚ್ಚತನವದು.

ತಾನು ದೊಡ್ದ ಮನುಷ್ಯನಾಗಬೇಕು ಅನ್ನೋ ಹುಚ್ಚು ಇರೋರಿಗೆ, ಇತರರನ್ನು ತುಳಿದರೂ ಪರವಾಗಿಲ್ಲ, ತಮ್ಮ ಕೀರ್ತಿ ಹೆಚ್ಚಾಗಬೇಕು ಅನ್ನೋದಿರತ್ತೆ. ಇನ್ನು ಕೆಲವರಿಗೆ ರಾಜಕೀಯದ ಹುಚ್ಚು. ಕೆಲವರಿಗೆ ಸಿನಿಮಾದ ಹುಚ್ಚು. ಸಿನಿಮಾ ನಟಿ/ನಟನ ಹುಚ್ಚು.ಕೆಲ ಲಫಂಗರಿಗೆ ಹುಡುಗಿಯರ ಹುಚ್ಚು. ತಮ್ಮ ಬ್ಲಾಗನ್ನು ಹೆಚ್ಚು ಜನ ನೋಡಬೇಕು, ಕಮೆಂಟ್ಸ್ ಮಾಡಬೇಕು ಅನ್ನೋ ಹುಚ್ಚು. ಯಾರು ಕಮೆಂಟ್ಸ್ ಮಾಡದೇ ಇದ್ದರೆ ತಾವೆ Anonymous ನಿಂದ ಮಾಡೋ ಹುಚ್ಚು. ಇದು ಹುಚ್ಚತನಕೆ ಸೇರ್ಪಡೇಯಾದ ಹೊಸ ಹುಚ್ಚು. ಹುಚ್ಚಿನ ಬಗ್ಗೆ ಬರೆಯುತ್ತಾ ಹೋದರೆ ಹನುಮಂತನ ಬಾಲದ ತರ ಆಗಬಹುದು.

ಯಾವುದೋ ಫಿಲ್ಮ್ ನಲ್ಲಿ ಕೇಳಿದ ಹಾಡು ನೆನಪಾಗ್ತಾಯಿದೆ.

"ಹುಚ್ಚರ ಸಂತೆ, ಹುಚ್ಚರ ಸಂತೆ,
ಈ ಭೂಮಿ ಮೇಲೆ ಇರೋರೆಲ್ಲ ಹುಚ್ಚರು ಕಣೋ..."


ಒಟ್ಟಿನಲ್ಲಿ ಹುಚ್ಚಿನ ಬಗ್ಗೆ ಜಾಸ್ತಿ ಯೋಚನೆ ಮಾಡಿದರೆ ನಮಗೆ ಹುಚ್ಚ ಎನ್ನಬಹುದು.


ನಾಳಿನ ಭವಿಷ್ಯದ ಬಗ್ಗೆ ಯಾವಾಗಲು ಚಿಂತಿಸುತ್ತ, ಇರುವ ಪ್ರತಿಕ್ಷಣವನ್ನು ಅನುಭವಿಸಲಾರದವನು ಎಷ್ಟು ಶ್ರೀಮಂತನಾದರೇನು, ಏಷ್ಟು ಬುದ್ದಿವಂತನಾದರೇನು, ಅವನು ಹುಚ್ಚನೇ.

Friday, May 18, 2007

ಬಿಸಿ ಬಿಸಿ ಸುದ್ದಿಗಳು (?)

ಬೆಳಗ್ಗೆ ಎದ್ದವನೆ ಹೊರಗೆ ಬಂದು ಪೇಪರ್ ಗೆ ತಡಕಾಡಿದೆ. ಇವತ್ತು ಎಂದಿನಂತೆ ಪೇಪರ್ ಲೇಟು. ತತ್. ಯಾವಾಗ್ಲು ಇವರ ಹಣೇಬರಹನೇ ಇಷ್ಟು ಅಂತ ಬೈಕೋತ್ತಾ ಪೇಪರಿಗಾಗಿ ಕಾದೆ. ಶಬರಿ ರಾಮನಿಗೆ ಕಾದಂತೆ. ಕೊನೆಗೂ ಪೇಪರಿನವನು ಬಂದ. ನನ್ನ ಕಂಡೊಡನೇ ಸೈಕಲ್ನಲ್ಲಿ ಹೋಗ್ತಾ ಮುಖದ ಮೇಲೆ ಪೇಪರ್ ಏಸೆದ. ಒಳ್ಳೇ ಬಾಣದ ತರ ನನ್ನತ್ತ ನುಗ್ಗಿ ಬಂತು. ಹೇಗೋ ತಪ್ಪಿಸಿಕೊಂಡೆ. ಬೈಯೋಣ ಅಂತ ಬಾಯಿ ತೆರೆಯೋಕಿಂತ ಮುಂಚೆ ಅವನು ಮಂಗ ಮಾಯ. ವೇಗವಾಗಿ ಬಂದ ಪೇಪರ್ರು, ಗೋಡೆಗೆ ಹೊಡೆದು ನ್ಯೂಟನ್ಸ್ ಥರ್ಡ ಲಾ ದಂತೆ ಮತ್ತೆ ಕೆಳಗೆ ಬಿತ್ತು. ಮೊದಲ ಮಹಡಿಯಿಂದ ಕೆಳಗಿಳಿದು ಬೆಳಗ್ಗೆ ಬೆಳಗ್ಗೆ ಬೈತಾ ಹೋಗಿ ಪೇಪರ್ ತಂದೆ.

ಪೇಪರ್ ನಲ್ಲಿ ಏನ್ ಮಣ್ಣು ಇರಲ್ಲ ಅಂತ ಗೊತ್ತಿದ್ರು, ಬೆಳಗ್ಗೆ ಎದ್ದ ತಕ್ಷಣ ಪೇಪರ್ ಓದದೆ ಹೋದ್ರೆ ಮನಸ್ಸಿಗೆ ಸಮಾಧಾನನೇ ಇರಲ್ಲ ನೋಡಿ. ಅಂತೂ ಪೇಪರ್ ತಂದು ಬಿಡಿಸಿ ನೋಡ್ದೆ. ಅದೇ ಹಳಸು ವಿಷಯಗಳು, ಉಳ್ಳಾಲ ಎಲೆಕ್ಷನ್ನು... ಅಬ್ಬಾ... ಅದರ ಮದ್ಯ ದೊಡ್ಡ ಪೋಸ್ಟರ್ರು.. ನಮ್ಮ ಮಣ್ಣಿನ ಮಗ ದೇವೇಗೌಡರ ಹುಟ್ಟಿದ ಹಬ್ಬ. ಅವರ ಅಭಿಮಾನಿ(?)ದೇವರುಗಳ ಹಾರೈಕೆ. ಯಪ್ಪೋ.. ಅಂತ ಬೇರೆ ಪುಟ ನೋಡೋಣ ಅಂತ ತಿರುಗಿಸಿದರೆ ಅದ್ರಲ್ಲೂ ಇದೇ ವಿಷಯ..."ಮಂಗ್ಯಾನ್ ಮಕ್ಳು ಎಲ್ಲ್ ನೋಡಿದ್ರೂ ಫೋಟೋ ಹಾಕ್ಕ್ಯಂತಾರ್ರೀ..." ಅಂತ ಕಾಳಣ್ಣ ಹಿಂದೆ ಬರೆದಿದ್ದ ನೆನಪಾಗಿ ನಕ್ಕೆ.

ದೇವೇಗೌಡ್ರು ಅಂದ ತಕ್ಷಣ ನನಗೆ ಹಳೇ ಕಂಪನಿಯ ಒಂದು ಘಟನೆ ನೆನಪಾಯ್ತು. ನಮ್ಮ ಹಳೇ ಕಂಪನಿಯಲ್ಲಿ ಯಾರದ್ದೇ ಹುಟ್ಟಿದ ಹಬ್ಬ ಆದ್ರೂ ರಿಸೆಪ್ಷನ್ ನಲ್ಲಿ ಹಾಕ್ತಾಯಿದ್ರು. ಒಮ್ಮೆ ನನ್ನ ಹತ್ತಿರ ಒಬ್ಬ ಫ್ರೆಶರ್ರು ಬಂದು ಈ ಕಂಪನಿಯಲ್ಲಿ ಯಾರಾದ್ರು ರಾಜಕಾರಣಿಗಳು ಬೋರ್ಡಿನಲ್ಲಿದಾರಾ ಅಂದ. ಯಾಕಪ್ಪ ನಿನಗೆ ಆ ಡೌಟು ಬಂತು ಅಂತ ಕೇಳಿದೆ. ಅಲ್ಲಾ ಮೊನ್ನೆ ನಾನು ಕೆಲ್ಸಕ್ಕೆ ಸೇರಿದಾಗ ರಿಸೆಪ್ಷನ್ ನಲ್ಲಿ "ಹ್ಯಾಪಿ ಬರ್ಥ್ ಡೇ ದೇವೇಗೌಡ" ಅಂತ ಹಾಕಿದ್ರು ಅಂದ .. ಅವನ್ನ ಕೇಳ್ದೆ "ಊರಿಗೆ ಒಬ್ಬಳೇ ಪದ್ಮಾವತಿನಾ". ಅವ್ನಿಗೆ ಅರ್ಥ ಆಗಿಲ್ಲ. ಪ್ಯಾಟೆನಲ್ಲಿ ಓದ್ದೋನು. ಅದೆಲ್ಲ ಏಲ್ಲಿ ಅರ್ಥ ಆಗ್ಬೇಕು. ಕಣ್ಣು ಬಿಟ್ಕಂಡು ನಿಂತ. ಇಲ್ಲೂ ಒಬ್ಬ ದೇವೇಗೌಡ್ರು ಇದಾರಪ್ಪ. ಅವರು ರಾಜಕಾರಣಿ ಅಲ್ಲ. ಸಿಸ್ಟಮ್ ಅಡ್ಮಿನ್ನು ಅಂದೆ. ಅವನು ಸೇರಿದ್ದ ದಿನ ಸಿಸ್ಟಮ್ ಅಡ್ಮಿನ್ನು ದೇವೇಗೌಡ್ರ ಬರ್ಥ್ ಡೇ. ಪಾಪ ಹೊಸಬನಿಗೆ ಅದು ಏಲ್ಲ ಗೊತ್ತಾಗ್ಬೇಕು.

ಈಗ ವರ್ತಮಾನಕ್ಕೆ ಬರೋಣ. ಪೇಪರ್ರಿನಲ್ಲಿ ಅಷ್ಟೇನು ಹೊಸ ವಿಷಯ ಇರ್ಲಿಲ್ಲ. ನಿತ್ಯಕರ್ಮ ಮುಗಿಸಿ ಹೊಟ್ಟೆಪಾಡಿಗೋಸ್ಕರ ಕೆಲ್ಸ ಮಾಡ್ಬೇಕಲ್ಲ. ಕಾರ್ ತಗಂಡು ಹೊರಟೆ. ಮದ್ಯ ನನ್ನ ಫ್ರೆಂಡಿನ ಹತ್ರ ಇವತ್ತು ದೇವೇಗೌಡ್ರ ಹುಟ್ಟಿದ ಹಬ್ಬ ಕಣೋ ಅಂದೆ.ಅದಕ್ಕೆ ಅವನು "ಓ ನಮ್ಮ ನೆಲ್ಸನ್ ಮಂಡೇಲಾದಾ" ಅಂದ. ನಂಗೆ ಅರ್ಥ ಆಗ್ಲಿಲ್ಲ. ಅದಕ್ಕೆ ಅವನು ಹೇಳ್ದ..

"ನೆಲ+ಸನ್+ಮಂಡೆ+ಇಲ್ಲ"

ವಿ.ಸೂಃ ಇದು ನನ್ನ ವಯಕ್ತಿಕ ಅನಿಸಿಕೆ ಅಲ್ಲ... ನನ್ನ ಸ್ನೇಹಿತನದು..

Tuesday, May 15, 2007

ಗೋ ಶಕೆ

ವಿಶ್ವ ಗೋ ಸಮ್ಮೇಳನ ಮುಗಿದಿದೆ. ಕ್ರಿಸ್ತ ಶಕೆ ಮುಗಿದು ಗೋ ಶಕೆ ಪ್ರಾರಂಭವಾಗಿದೆ ಅನ್ನಬಹುದು. ಇಲ್ಲಿಯ ತನಕ ಗೋ ಏನ್ನುವುದು ಬರೀ ಹಾಲು ಕೊಡುವ ಯಂತ್ರ ಎಂದರಿತಿದ್ದ ಆಧುನಿಕ ಸಮಾಜ(?) ಗೋವಿನ ಬಗ್ಗೆ ಅಲ್ಪಸಲ್ಪ ಅರಿತಿರುವುದು ಗೋ ಶಕೆಯ ಪ್ರಾರಂಭ ಅನ್ನಬಹುದು.ಹಾಲು ಕೊಡದ ಹಸುಗಳನ್ನು ಕಸಾಯಿ ಖಾನೆಗೆ ಮಾರುವ ಮುನ್ನ ಜನ ಸ್ವಲ್ಪ ಯೋಚಿಸುವಂತಾಗಿದೆ.

ಹಿಂದೆಲ್ಲಾ ಗೋ ಅಂದರೆ ಪೂಜ್ಯ ಭಾವನೆಯಿತ್ತು. ಕಾಲಕ್ರಮೇಣ ಜನರಲ್ಲಿ ಅದು ಮರೆಯಾಯ್ತು. ಇಂದಿಗೂ ಹಳ್ಳಿಗಳಲ್ಲಿ ಗೋವನ್ನು ಪೂಜಿಸುತ್ತಾರೆ. ಯಾವುದಾದರು ಕಾರ್ಯಕ್ರಮದಲ್ಲಿ ಊಟಕ್ಕೆ ಮುನ್ನ "ಗೋ ಗ್ರಾಸ" ಕೊಡುವುದನ್ನು ನೀವು ನೋಡಿರಬಹುದು. ಗಂಟೀ ಪೂಜೆ (ಗೋ ಪೂಜೆ) ಹಬ್ಬ ನಿಮಗೆ ಗೊತ್ತಿರಬಹುದು. ಕೆಲವು ಕಡೆ ದೀಪಾವಳಿಯ ದಿನ ಮಾಡ್ತಾರೆ. ಗೋವನ್ನು ತೊಳೆದು ಅವಕ್ಕೆ ಶೃಂಗಾರ ಮಾಡಿ ಪೂಜಿಸಿ ಅವನ್ನು ಗುಡ್ಡಕ್ಕೆ ಕರೆದುಕೊಂಡು ಹೋಗ್ತಾರೆ. ಅಲ್ಲಿ ಹುಮ್ಮಸ್ಸು ಇರುವ ಯುವಕರು ಗೋವಿನ ಸರವನ್ನು ಕೀಳುವ ಪದ್ದತಿ ಇದೆ. ಗೋವನ್ನು ಅಟ್ಟಿಸಿಕೊಂಡು ಹೋಗಿ ಸರ (ಅಡಕೆ ಸರ, ಚೆಂಡು ಹೂವಿನ ಸರ...) ಕೀಳುತ್ತಾರೆ. ಸಿಗದೇ ಇದ್ದರೆ ಗೋ ಓಡುವಾಗ ಬಿದ್ದ ಸರವನ್ನು ಯಾರು ನೋಡದ ಹಾಗೆ ಎತ್ತಿಕೊಂಡು ತಾವೇ ಕಿತ್ತ ಹಾಗೆ ಬಂದು ಫೋಸು ಕೊಡುವವರೂ ಇದ್ದಾರೆ. ಇನ್ನು ಕೆಲವರು ಇದರ ಉಸಾಬರಿ ಬೇಡ, ಹಬ್ಬಕ್ಕೆ ಹಾಕಿದ ಹೊಸ(?) ಬಟ್ಟೆ ಹಾಳಾದೀತು ಎಂದು ಸುಮ್ಮನಿರುತ್ತಾರೆ.
ಆದರೆ ಕಾಲನ ಹೊಡೆತಕ್ಕೆ ಸಿಕ್ಕು ಈಗ ಹಬ್ಬ ಹರಿದಿನಗಳನ್ನು ಅರ್ಥರಹಿತವಾಗಿ ಆಚರಿಸುತ್ತಿದ್ದಾರೆ. ಯಾರಿಗೂ ಹಬ್ಬದ ಬಗ್ಗೆ ಸರಿಯಾದ ಮಾಹಿತಿಯಿರೋದಿಲ್ಲ. ಎಲ್ಲರೂ ದುಡ್ಡಿನ ಬೆನ್ನ ಹಿಂದೆ ಬಿದ್ದು ಹಳ್ಳಿಯನ್ನು ತೊರೆದು ಪಟ್ಟಣಗಳತ್ತ ದಾವಿಸುತ್ತಿದ್ದಾರೆ. ಒಂದು ರೀತಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಊರಲ್ಲೋ, ಅಪ್ಪ ಅಮ್ಮ ಮಕ್ಕಳಿಲ್ಲದ ಮೇಲೆ ಏನ ಹಬ್ಬ ಮಾಡೋದು ಅಂತ ಕಾಟಾಚಾರಕ್ಕೆ ಹಬ್ಬ ಮಾಡೋ ಪರಿಸ್ಥಿತಿ ಬಂದಿದೆ.

ಇನ್ನೊಂದು ಕಡೆ ಕೆಲವು ಮಠಗಳು ನಮ್ಮ ಸಂಸ್ಕೃತಿಯನ್ನು ಉಳಿಸಲು ಶಕ್ತಿ ಮೀರಿ ಪ್ರಯತ್ನ ಮಾಡ್ತಾಯಿವೆ. ಇದರಲ್ಲಿ ಇತ್ತೀಚೆಗೆ ಕೇಳಿ ಬರ್ತಾಯಿತರೋ ಹೆಸರು "ಶ್ರೀ ರಾಮಚಂದ್ರಪುರ ಮಠ". ಗೋವನ್ನು ಬರೀ ಧೈವಿಕ ದೃಷ್ಟಿಯಿಂದ ನೋಡದೆ ವೈಜ್ಙಾನಿಕ ದೃಷ್ಟಿಯಿಂದಲೂ ನೋಡಿ, ಗೋವಿನಿಂದ ಏನು ಉಪಯೋಗವಾಗ್ತಾಯಿದೆ ಅಂತ ಏಲ್ಲರಿಗೂ ಮನವರಿಕೆ ಮಾಡಿಕೊಟ್ಟಿದೆ ಈ ಮಠ. ನಿಮಗೆ ತಿಳಿದಿರಲಿ.. ಗೋವಿನ ಬಗ್ಗೆ ಅತಿ ಹೆಚ್ಚು ಪೇಟೆಂಟ್ ಪಡೆದಿರೋ ದೇಶ ಅಮೇರಿಕ.

ನಾವೀಗ ವೈಜ್ಙಾನಿಕ ಯುಗದಲ್ಲಿದ್ದೇವೆ. ವೆಬ್ ಸೈಟ್,ಈ-ಮೈಲ್, ಎಲ್ಲ ಜೀವನದ ಅವಿಭಾಜ್ಯ ಅಂಗವಾಗ್ತಾಯಿದೆ. ಒಬ್ಬ ಇಂಜಿನಿಯರ್ ಒಂದು ದಿನ ಆಫೀಸಿನಲ್ಲಿ ಇಂಟರ್ನೆಟ್ ಇಲ್ಲ ಅಂದ್ರೆ ವಿಲ ವಿಲ ಒದ್ದಾಡ್ತಾಯಿರ್ತಾನೆ. ಮುಂದೊಂದು ದಿನ ಪ್ರತಿಯೊಬ್ಬನು ತನ್ನದೇ ಆದ ವೆಬ್ ಸೈಟ್ ಹೊಂದಿ ಅದರಲ್ಲಿ ತನ್ನ ಏಲ್ಲಾ ಮಾಹಿತಿಯನ್ನು ಕೊಡೋ ಪರಿಸ್ಥಿತಿ ಬರಬಹುದು. ನಿಮ್ಮ ವಿಳಾಸ ಕೊಡ್ತೀರಾ, ನಿಮ್ಮ ಫೋನ್ ನಂಬರ್ ಕೊಡ್ತೀರಾ ಅಂತ ಕೇಳಿದರೆ ನನ್ನ ವೆಬ್ ಸೈಟ್ ನೋಡಿ ಅಂತ ಅನ್ನಬಹುದು.

ಏನಿದು ಗೋವಿಗೂ ವೆಬ್ ಸೈಟ್ ಗೂ ಏನು ಸಂಭಂದ ಅನ್ನಬಹುದು. ಸಂಭಂದ ಇದೆ... ವಿಶ್ವ ಗೋ ಸಮ್ಮೇಳನದ ವಿಷಯವನ್ನು ಜಗತ್ತಿಗೆ ಅತಿ ಶೀಘ್ರವಾಗಿ ತಲುಪಿಸಲು ರಾಮಚಂದ್ರಪುರ ಮಠವೂ ಸಹ ವೆಬ್ ಸೈಟ್ ಹೊಂದಿದೆ. ನನಗೆ ವಿಶ್ವ ಗೋ ಸಮ್ಮೇಳನದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಬೇಕು ಅಂತ ಅನಿಸಿದರೂ ಕೆಲಸದ ಒತ್ತಡದಿಂದ ಕೊನೆಯ ಕೆಲವು ದಿನಗಳಲ್ಲಿ ಅದರಲ್ಲಿ ಭಾಗಿಯಾಗಿದ್ದೆ. ಮಠಕ್ಕೆ ಹೋಗಿ ಅಲ್ಲಿ ಕೆಲಸ ಮಾಡಲು ಆಗದೇ ಇದ್ದರೂ ಎನಾದರು ಸೇವೆ ಮಾಡಬೇಕು ಅಂತ ಮನಸ್ಸಲ್ಲಿ ಇತ್ತು. ಆಗ ನನಗೆ ಹೊಳೆದಿದ್ದು ವೆಬ್ ಸೈಟ್.

ತಕ್ಷಣ ಅದನ್ನು ಕೈಗೆತ್ತಿಕೊಂಡು ಮುಗಿಸಿದೆ. ನಿಮಗೆ ಬಿಡುವಾದಾಗ http://www.vishwagou.org ಒಮ್ಮೆ ನೋಡಿ. ಡಿಸೈನ್ ಮಾಡಿದೆ. ಆದರೆ ಅದನ್ನು ಮೈಂಟೈನ್ ಮಾಡೋದು ಕಷ್ಟವಾಗ್ತಾಯಿತ್ತು. ಸರಿಯಾದ ಮಾಹಿತಿ ಪಡೆಯೋದು ಎಲ್ಲ ಬಹಳ ಕಷ್ಟದ ಕೆಲಸ. ಅದನ್ನು ವಹಿಸಿಕೊಂಡಿದ್ದು "ಋಷಿ ಸಿಸ್ಟೆಂಮ್ಸ್ ". ನಾನು ಡಿಸೈನ್ ಮಾಡಿಕೊಟ್ಟಿದ್ದೆ. ಅವರು ಅದನ್ನು ಅದನ್ನು ಮೈಂಟೈನ್ ಮಾಡ್ತಾಯಿದಾರೆ.

ಪ್ರತಿಯೊಬ್ಬನಿಗೂ ತಾವು ತಮ್ಮ ದೇಶಕ್ಕೆ, ರಾಜ್ಯಕ್ಕೆ, ಸಮಾಜಕ್ಕೆ, ಊರಿಗೆ ಎನಾದ್ರು ಸಹಾಯ ಮಾಡಬೇಕು ಅಂತ ಇರತ್ತೆ. ಆದರೆ ಅವಕಾಶ ಇರೊಲ್ಲ. ಅವಕಾಶವನ್ನು ನಾವು ಸೃಷ್ಠಿಮಾಡ್ಕೋಬೇಕು. ನೀವು ಮನೆಯಲ್ಲಿ ಗೋವನ್ನು ಕಟ್ಟಿ, ಸಾಕಿ ಅಂತ ಮಠ ಹೇಳ್ತಾಯಿಲ್ಲ. ನಿಮ್ಮ ಕೈಲಿ ಏನಾಗತ್ತೋ ಅದನ್ನು ಮಾಡಿ ಅನ್ನತ್ತೆ. ನಿಮಗೆ ಏನಾದ್ರು ಮಾಡಬೇಕು ಅಂತ ಅನಿಸಿದರೆ ನೀವು ಮಠವನ್ನು ಸಂಪರ್ಕಿಸಬಹುದು ಅಥವಾ ನನ್ನನ್ನು ಸಂಪರ್ಕಿಸಿ. ಅದನ್ನು ಮಠಕ್ಕೆ ತಿಳಿಸುವ ಕೆಲಸವನ್ನು ಮಾಡುತ್ತೇನೆ.

Sunday, May 13, 2007

ಗತಕಾಲದ ಡೈರಿಯ ನೆನಪುಗಳು

"ಈಗ ಕೃಷ್ಣ ಭಟ್ಟರ ಮನೆಗೆ ಹೋಗಿ ಬಂದೆ, ಅಲ್ಲಿ ಕಾಫಿ ಕೊಟ್ಟಿದ್ದರು"

ಏನಿದು ಅಂತ ಅನಿಸಬಹುದು.. ಇದು ನಾನು ಒಂದಾನೊಂದು ಕಾಲದಲ್ಲಿ ಇದ್ದಕಿದ್ದ ಹಾಗೆ ಡೈರಿ ಬರೀಬೇಕು ಅಂತ ಅನಿಸಿ ಬರೆದಿದ್ದು. ಡೈರಿ ಹೇಗೆ ಬರೀಬೇಕು ಅಂಥ ಗೊತ್ತಿರ್ಲಿಲ್ಲ. ಬೆಳಗ್ಗೆ ಪ್ರಾರಂಭ ಮಾಡಿದೆ. "7 ಘಂಟೆಗೆ ಎದ್ದೆ, ತಿಂಡಿ ತಿಂದೆ" (ಇದು ಸುಳ್ಳು!!! ಅಮ್ಮ ಏಳು, ಬೆಳಗಾತು ಅಂತ ಸುಮಾರು ಸಲ ಹೇಳಿದ ಮೇಲೆ ನಾನು ಎದ್ದಿದ್ದು. ಅದೂ 9 ಘಂಟೆಗೆ. ಡೈರಿನಲ್ಲಿ ಹಾಗೆ ಬರೆದರೆ ನನ್ನ ಮರ್ಯಾದೆಗೆ(!) ಕುಂದಾಗತ್ತೆ ಅಂತ 7ಕ್ಕೆ ಏದ್ದೆ ಅಂದಿದ್ದೆ). ಆಮೇಲೆ ಬರೀಲಿಕ್ಕೆ ಏನೂ ವಿಷ್ಯ ಇರಲಿಲ್ಲ. ಅದಕ್ಕೆ ಕೃಷ್ಣ ಭಟ್ಟರ ಮನೆಗೆ ಹೋದೆ. ಬಂದ ತಕ್ಷಣ ಡೈರಿ ಕಂಟಿನ್ಯೂ ಮಾಡಿದೆ, "ಈಗ ಕೃಷ್ಣ ಭಟ್ಟರ ಮನೆಗೆ ಹೋಗಿ ಬಂದೆ, ಅಲ್ಲಿ ಕಾಫಿ ಕೊಟ್ಟಿದ್ದರು". ಬಹಳ ಅಮೂಲ್ಯಯವಾದ ವಿಷಯಗಳನ್ನು(?) ಯಾರಾದರು ಕದ್ದು ಓದಬಹುದೆಂಬ ಭಯದಿಂದ ಡೈರಿಯ ಮೊದಲು ಪುಟದಲ್ಲಿ "ಆತ್ಮೀಯ ಓದುಗ, ಅಪ್ಪಣೆಯಿಲ್ಲದೇ ಓದುವುದು ಮರ್ಯಾದಸ್ತರ ಲಕ್ಷಣವಲ್ಲ" ಎಂದು ಬರೆದಿದ್ದೆ. ಮೊದಲ ಪುಟ ನೋಡದೇ ಅಥವಾ ನೋಡಿಯೂ ಡೈರಿಯನ್ನು ಓದಿದರೆ ಅಂತ "ಸೀಕ್ರೇಟ್ ಭಾಷೆಯನ್ನು" ಭಾವಯ್ಯನಿಂದ ಕಲಿತು ಡೈರಿಯನ್ನು ಮುಂದುವರೆಸಿದೆ.ಈಗಲೂ ಆ "ಸೀಕ್ರೇಟ್ ಭಾಷೆ" ಅರ್ದಂರ್ದ ನೆನಪಿದೆ..

"ಅಕೌಕಘೌ ಘನಚ್ಸೈವ ಚಟೌತಪೌ ನಮಜ್ಜಡೇ...."

"ಅ" ಕಾರಕ್ಕೆ "ಕ" ಕಾರ... ಏನೋ ನೆನಪು..ಇದು ಕೆಲವು ದಿನ ಮಾತ್ರ ಮುಂದುವರೆಯಿತು. ಆಮೇಲೆ ಡೈರಿಯ ಸುದ್ದಿಗೇ ಹೋಗಿರಲಿಲ್ಲ.

ಆಮೇಲೆ ವಿದ್ಯಾಭ್ಯಾಸಕ್ಕೆ ಚಿಕ್ಕ ವಯಸ್ಸಿನಲ್ಲೇ ಬೆಂದಕಾಳೂರಿಗೆ ಬಂದೆ. ಮಾವನ ಮನೆಯಲ್ಲಿದ್ದೆ. ಮನೆಯ ನೆನಪು ಕಾಡಿದಾಗಲೆಲ್ಲಾ ಡೈರಿಯನ್ನು ಬರೆಯಲು ಪ್ರಾರಂಭ ಮಾಡಿದೆ. ಆಗ ಅದು ಹಿಂದಿನಗಿಂತ ಸ್ವಲ್ಪ ಉತ್ತಮವಾಗಿತ್ತು ಅನ್ನಬಹುದು. ಅದರಲ್ಲಿ ಊಟ ಮಾಡಿದೆ, ತಿಂಡಿ ತಿಂದೆ ಎಂದೆಲ್ಲಾ ಬರೆಯಲಿಲ್ಲ. ಆದರೆ ಮನೆಯ ಬಗ್ಗೆ ಬರಿತಾಯಿದ್ದೆ. ಮುಂದೆ ಯಾವಾಗ ಊರಿಗೆ ಹೋಗೋದು, ಎಷ್ಟು ದಿನವಿದೆ ಎಂಬುದು ಅದರಲ್ಲಿ ಕಾಯಂ ಆಗಿತ್ತು. ಇನ್ನು ದೀಪಾವಳಿಗೆ ೪೫ ದಿನ ಇದೆ. ಮರುದಿನದ ಡೈರಿಯಲ್ಲಿ.. ೪೪ ದಿನವಿದೆ. ಆಗ ದಿನ ಏನ್ನೋದು ಶತಮಾನದ ರೀತಿಯಾಗಿತ್ತು. ಈಗ ಓದಿದ್ರೆ ನಗು ಬರತ್ತೆ.

ಸೀಕ್ರೇಟ್ ಭಾಷೆ ಬರೆಯುವುದು ಕಷ್ಟವಾದ ಕಾರಣ ಕನ್ನಡದಲ್ಲೇ ಬರೆಯಲು ಅಣಿಯಿಟ್ಟೆ. ಮುಂದೆ ಏಲ್ಲೋ ಒಂದು ದಿನ ಅದು ಅತ್ತೆಗೆ ಸಿಕ್ಕಿ ಅದನ್ನು ಏಲ್ಲರ ಮುಂದೆ ಓದಿ, ಅವರ ಜೋತೆ ಅನಿವಾರ್ಯವಾಗಿ ನಾನು ನಕ್ಕು ಮತ್ತೆ ಡೈರಿಗೆ ತಿಲಾಂಜಲಿಯಿಟ್ಟೆ.

ಆಮೇಲೆ ಕಾಲೇಜು, ಡೈರಿ ಬರಿಲಿಲ್ಲ, ಕವನ ಬರೀಲಿಕ್ಕೆ ಪ್ರಾರಂಭ ಮಾಡಿದೆ. ಬರೆದಿದ್ದು ಕೆಲವೇ ಕವನಗಳಾದ್ರು ಅದರಲ್ಲಿ ಒಂದು ನನಗೆ "ಅಂತರಕಾಲೇಜು ಕವನ ಸ್ಪರ್ಧೆ"ಯಲ್ಲಿ ಬಹುಮಾನವನ್ನು ತಂದುಕೊಡ್ತು. ಒಟ್ಟು 385 ಕಾಲೇಜಿನ ವಿಧ್ಯಾರ್ಥಿಗಳು ಬಾಗವಹಿಸಿದ್ದರು. ಅದರಲ್ಲಿ 20 ಜನರ ಕವನಕ್ಕೆ ಪ್ರಶಸ್ತಿ ಬಂದಿತ್ತು. ಆ 20 ಜನರ ಕವನವನ್ನು ಒಟ್ಟುಗೂಡಿಸಿ ಒಂದು ಪುಸ್ತಕವನ್ನು ಹೊರತಂದಿದ್ದರು. ನನ್ನ ಕವನದಲ್ಲಿ ಬರುವ "ಬೆಂಕಿ ನೀಲಿಯ ಹೂವು" ಏನ್ನುವುದನ್ನು ಆ ಪುಸ್ತಕಕ್ಕೆ ಹೆಸರಿಟ್ಟಿದ್ದರು. ನ್ಯಾಷನಲ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಬಿ.ಸಿ.ರಾಮಚಂದ್ರ ಶರ್ಮರಿಂದ ಬಹುಮಾನ ಪಡೆದಾಗ ಬಹಳ ಸಂತೋಷವಾಗಿತ್ತು.

ನಂತರ ಕೆಲಸದ ಬೇಟೆ, ಅಮೇಲೆ ಕೆಲಸ....ಹಾಗಾಗಿ ಬರೆಯೋದೇ ಬಿಟ್ಟು ಹೋಗಿತ್ತು. ಏನಾದ್ರು ಬರೀಬೇಕು ಅಂತ ಅನ್ನಿಸ್ತಾಯಿತ್ತು. ಆದರೆ ಕಾಲ ಕೂಡಿಬಂದಿರಲಿಲ್ಲ.

7 ವರ್ಷಗಳಿಂದ ಕೆಲಸ ಮಾಡಿ ಬೇಸತ್ತಿದ್ದ ಮನಸ್ಸಿಗೆ ಜಸ್ಟ್ ಫಾರ್ ಎ ಚೈಂಜ್ ಅಂತ ಬ್ಲಾಗ್ ಬರಿಯೋಕೆ ಪ್ರಾರಂಭ ಮಾಡಿದೀನಿ. ಜನ ಓದಲೀ, ಹೊಗಳಲಿ ಅನ್ನುವ ಆಸೆಯಿಲ್ಲ. ನನಗನಿಸಿದ್ದನ್ನು ಬರೀತೀನಿ.

ಈಗಲೂ ಕೆಲವು ಹಳೇ ಡೈರಿಗಳು ಮನೆಯಲ್ಲಿ ಮೇಲೆ ಇಟ್ಟಿದ್ದೇನೆ. ಏಲ್ಲೋ ಅಪರೂಪಕ್ಕೆ ಅದನ್ನ ಓದ್ತಾಯಿರ್ತಿನಿ. ಹಳೆಯ ನೆನಪು ನುಗ್ಗಿ ಬರತ್ತೆ.

Thursday, May 3, 2007

ವಿಶ್ವ ಗೋ ಸಮ್ಮೇಳನ

ಏತ್ತ ನೋಡಿದರತ್ತ ಜನ ಸಾಗರ, ಏಲ್ಲವೂ ಶಿಸ್ತುಮಯ, ಗಲಾಟೆ, ಗೌಜುಗಳಿರಲಿಲ್ಲ, ಏಲ್ಲರಲ್ಲೂ ಮುಂದೆ ಏನಿರಬಹುದೆಂಬ ಕುತೂಹಲ, ಬಾಯಾರಿಕೆಯ ತಣಿಯಲು ಮದ್ಯ ಮದ್ಯ ಇದ್ದ ಪಾನೀಯ ಕೌಂಟರ್ ಗಳು, ಅಮೃತಧಾರ ಗೋಲೋಕ, ಕಾಮಧೇನು ತುಲಾಭಾರ, ಮರುಜನ್ಮಪಡೆದ ಏಷ್ಟೋ ಹಸುಗಳು (ಕಸಾಯಿಖಾನೆಗೆ ಹೋಗ್ತಾಯಿದ್ದ ಹಸುಗಳು ಕಟುಕರಿಂದ ಪಾರಾಗಿ ಬಂದವು), ಸತತ ೨೪ ಘಂಟೆ ನಡೆಯುತ್ತಿದ್ದ ಭಜನೆ ಮತ್ತು ವೇಣು ನಿನಾದ, ಹರಿದು ಬರುತ್ತಿರುವ ಭಕ್ತರ ಕಾಣಿಕೆಗಳನ್ನು ಜೋಡಿಸಿಟ್ಟ ಸುವಸ್ತು ಸಂಗ್ರಹಾಲಯ...ಒಂದೇ.. ಎರಡೇ.... ಇದು "ವಿಶ್ವ ಗೋ ಸಮ್ಮೇಳನದ" ಕೆಲವು ಅನುಭವಗಳು...

9 ದಿನಗಳಲ್ಲಿ ಸುಮಾರು 12-13 ಲಕ್ಷಕ್ಕೂ ಜನ ಪ್ರವಾಹದಂತೆ ಹರಿದು ಬಂದಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿಯೇ ಇಷ್ಟು ಜನ ಸೇರಿದ್ದು ಬಹುಶಃ ಇದೇ ಮೊದಲು ಅನ್ಸತ್ತೆ. ಶಿಸ್ತು ಬದ್ದ ಕಾರ್ಯಕರ್ತರುಗಳ ದೊಡ್ಡ ದಂಡೇ ಅಲ್ಲಿತ್ತು.ಏಲ್ಲರಲ್ಲೂ ಒಂದು ರೀತಿಯ ಉತ್ಸಾಹ ಮನೆ ಮಾಡಿತ್ತು.

ಹಿಂದೊಂದು ಕಾಲವಿತ್ತು. ಪ್ರತೀವರ್ಷ ರಾಮನವಮಿಗೆ ರಥೆ ಎಳೆಯಲ್ಲಿಕ್ಕೆ ಜನರನ್ನು ಕರೆಸ್ತಾಯಿದ್ರು. ಯಾಕೆಂದ್ರೆ ಮಠ ಅಧೋಗತಿಯಲ್ಲಿತ್ತು ಅಂತ ಹೇಳ್ತಾರೆ. ಆದರೆ ಈಗ ಮಠದ ಚಿತ್ರಣವೇ ಬದಲಾಗಿದೆ. ಮೊದಲು ಬರೀ ಹವ್ಯಕರ ಶ್ರದ್ಧಾಕೇಂದ್ರವಾಗಿದ್ದ ಶ್ರೀ ಮಠ ಇಂದು ಜಾತಿಬೇದವಿಲ್ಲದೆ ಜನರನ್ನು ಸೆಳಿತಾಯಿದೆ. ಇದರ ಕೇಂದ್ರಬಿಂದು ಶೀ ರಾಘವೇಶ್ವರ ಭಾರತೀ ಮಹಸ್ವಾಮಿಗಳು. ತಮ್ಮ 19 ನೇ ವಯಸ್ಸಿನಲ್ಲಿ ಅಂದರೆ ಏಪ್ರಿಲ್ 94 ರಂದು ಸಂನ್ಯಾಸ ತೆಗೆದುಕೊಂಡ ಶ್ರೀಗಳವರು ಮಠದ ಅಧಿಕಾರ ವಹಿಸಿಕೊಂಡಿದ್ದು ಕೆಲವೇ ವರ್ಷಗಳ ಹಿಂದೆ.

ಈ ದೊಡ್ಡ ಕಾರ್ಯಕ್ರಮಕ್ಕೆ ನಾನೊಂದು ಚಿಕ್ಕ ಅಳಿಲು ಸೇವೆಯಾಗಿ http://vishwagou.org ವೆಬ್ ಸೈಟ್ ಡಿಸೈನ್ ಮಾಡಿದೆ.

Thursday, April 19, 2007

ಹಿರಿಯರಲ್ಲಿ ಭಕ್ತಿ ಭಾವ ತುಂಬಿರಬೇಕು....

ಮುದ್ದು ಮಾತು ಕೇಳಿ,
ಓ ಮುದ್ದು ಮಕ್ಕಳೇ,
ಜಾಣರಾಗಿ ಬಾಳೀ ನನ್ನ ಹೊನ್ನ ಹೂಗಳೇ,
ಮಾತಲ್ಲೀ ಹಿತವಿರಲೇಬೇಕು,
ನಿಮ್ಮ ನಡೆಯಲ್ಲೀ ಹಿತವಿರಲೇಬೇಕು,
ನೀವು ಏಲ್ಲೇ ಇರಲೀ, ನಾಳೆ ಹೇಗೇ ಇರಲೀ,
ಜನ ಮೆಚ್ಚುವಂತೆ ನೀವಿರಬೇಕು.

ಬಹಳ ಸರಳ, ಅಷ್ಟೇ ಅರ್ಥಗರ್ಬಿತವಾಗಿದೆ.

ತನಗೊಂದು ಮಗುವಾಗತ್ತೇ ಅಂತ ಗೊತ್ತಾದ ತಕ್ಷಣ, ತಂದೆ, ತಾಯಿ ಕನಸು ಕಾಣ್ಲಿಕ್ಕೆ ಪ್ರಾರಂಭ ಮಾಡ್ತಾರೆ. ನನ್ನ ಮಗ / ಮಗಳನ್ನು ಹಾಗೆ ಮಾಡ್ಬೇಕು, ಹೀಗೆ ಮಾಡ್ಬೇಕು ಅಂತ ಏನೇನೋ ಕನಸು ಕಂಡಿರ್ತಾರೆ. ತಾವು ಜೀವನದಲ್ಲಿ ಸಾಧಿಸಿದ್ದಕ್ಕಿಂತ ಹೆಚ್ಚು ತಮ್ಮ ಮಕ್ಕಳು ಸಾಧಿಸಬೇಕು, ತಮಗಿಂತ ಒಳ್ಳೆ ಜೀವನ ನಡೆಸ್ಬೇಕು, ಸಮಾಜದಲ್ಲಿ ಓಳ್ಳೆ ಗೌರವ ತಗೋಬೇಕು, ತಮ್ಮ ಇಳಿಗಾಲದಲ್ಲಿ ಆಸರೆಯಾಗಿರ್ತಾರೆ .... etc.

ಆದರೆ ಏಷ್ಟೋ ತಂದೆ ತಾಯಿಗಳ ಕನಸು ಬರೀ ಕನಸಾಗೇ ಇರತ್ತೆ. ನನಸಾಗೋದೆ ಇಲ್ಲ. ಮಕ್ಕಳು ಬೆಳೆದ ಹಾಗೆ ತಮ್ಮ ತಂದೆ ತಾಯಿಯಲ್ಲಿ ತಪ್ಪು ಹುಡುಕೋಕೆ ಪ್ರಾರಂಭ ಮಾಡ್ತಾರೆ. ಅದ್ರಲ್ಲೂ ಹೆಂಡತಿ ಮಾತು ಕೇಳಿ ಹೆತ್ತಪ್ಪ, ಹೆತ್ತಮ್ಮನ ಕಡೆಗಣಿಸೋರೆ ಜಾಸ್ತಿ. ಮದುವೆಯಾದ ಮೇಲೆ ತಮ್ಮ ಮಕ್ಕಳ ಬಗ್ಗೆ ಕನಸು ಕಾಣ್ತಾಯಿರ್ತಾರೆ. ವಯಸ್ಸಾದ ಅಪ್ಪ ಅಮ್ಮರನ್ನು ಕಡೆಗಣಿಸಿರುತ್ತಾರೆ. ನಾಳೆ ನಮ್ಮ ಮಕ್ಕಳು ಸಹ ನಮ್ಮ ಹಾಗೆ ಆಗ್ತಾರೆ ಅಂತ ಆದರೆ ಅವರಿಗೆ ಗೊತ್ತಾಗೋದೇ ಇಲ್ಲ. ಆದರೆ ತಮಗೆ ವಯಸ್ಸಾದಾಗ ಅವರಿಗೆ ತಮ್ಮ ತಂದೆ ತಾಯಿ ಅನುಭವಿಸಿದ ನೋವು ನೆನಪಾಗೊಲ್ಲ. ತಮ್ಮ ಮಕ್ಕಳ ಬಗ್ಗೆ ಕೋಪಯಿರತ್ತೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು.

ಹೆತ್ತು, ಹೊತ್ತು, ಪ್ರೀತಿಯನ್ನು ಧಾರೆಯೆರೆದ ಅಪ್ಪ ಅಮ್ಮ ಕೊನೆಗೆ ವೃದ್ದಾಶ್ರಮದಲ್ಲಿ ತಮ್ಮ ಬಗ್ಗೆ ತಾವು ಹಳಿದುಕೊಳ್ತಾಯಿರ್ತಾರೆ.

ನಾನು ಕಾಲೇಜ್ ನಲ್ಲಿ ಓದೋವಾಗ ಒಂದು ಫೋಟೋಗ್ರಾಫಿ ಅಸೈನ್ಮೆಂಟ್ ಗೋಸ್ಕರ ಕಾಲೇಜ್ ಪಕ್ಕದ್ದಲ್ಲೇ ಇದ್ದ ವೃದ್ದಾಶ್ರಮಕ್ಕೆ ಹೋಗಿದ್ದೆ. ಅಲ್ಲಿ ಒಬ್ಬ ಅಜ್ಜಿಯ ಫೋಟೋ ತಗೋವಾಗ ಆ ಅಜ್ಜಿ, ವೃದ್ದಾಶ್ರಮ ನೋಡ್ಕೊಳ್ಳೋನ ಹತ್ರ "ಏನಪ್ಪ,ಬೆಳಗ್ಗೆಯಿಂದ ತಿಂಡಿ ಕೊಟ್ಟಿಲ್ಲ, ಯಾವಾಗ ಕೊಡ್ತೀಯಾ" ಅಂತ ಅಂದ್ಲು. ಆಗ ಸಮಯ 12:30 ದಾಟಿತ್ತು. ನನಗೆ ಅಪರಾದಿ ಭಾವನೆ ಕಾಡ್ತಾಯಿತ್ತು.

ನಾಳೆ ನಮಗೂ ವಯಸ್ಸಾಗತ್ತೆ, ನಮ್ಮ ಮಕ್ಕಳು ನಮ್ಮನ್ನು ಕಡೆಗಣಿಸಬಹುದು... ಆವಾಗ ನಾನು ನನ್ನ ತಂದೆ ತಾಯಿಯರನ್ನು ಚೆನ್ನಾಗಿ ನೋಡ್ಕೊಂಡಿಲ್ಲ ಅಂತ ಪಶ್ಚಾತ್ತಾಪಪಡೋದಕ್ಕಿಂತ ಈಗಲೇ ಏಚ್ಚೆತ್ತು ತಂದೆ ತಾಯಿಯರನ್ನು ಚೆನ್ನಾಗಿ ನೋಡ್ಕೊಳ್ಳೋದು ಓಳ್ಳೇದು ಅಲ್ವಾ?

ಹಾಗಾದರೆ ಇದಕ್ಕೆ ಪರಿಹಾರ ಇಲ್ವಾ ಅಂತ ಅನಿಸಬಹುದು. ಬೆಳೆಯುವ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಭಾರತೀಯತೆ ಅಂದ್ರೆ ಏನು? ಏಲ್ಲವನ್ನು ಸರಿಯಾದ ರೀತಿಯಲ್ಲಿ ಹೇಳಿದರೆ ಇದನ್ನು ತಡೆಗಟ್ಟಬಹುದು ಅನ್ಸತ್ತೆ.

ಮೇಲಿನ ಹಾಡಲ್ಲಿ ಇನ್ನೊಂದು ವಾಕ್ಯ ಬರತ್ತೆ " ಹಿರಿಯರಲ್ಲಿ ಭಕ್ತಿ ಭಾವ ತುಂಬಿರಬೇಕು...."

Wednesday, April 18, 2007

ನಿವೃತ್ತಿ

ಎಂ.ಪಿ. ಪ್ರಕಾಶ್ ನಿವೃತ್ತಿ ವಿಷಯ ಕೇಳಿ ಒಂದು ರೀತಿ ಬೇಸರ ಹಾಗು ಆನಂದವಾಯ್ತು.
ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಅಂದ್ರೆ ಜನರಿಗೆ ಅಸಹ್ಯ ಭಾವನೆ ಬಂದಿದೆ. ಸಂಸತ್ತು,ವಿಧಾನಸಭೆಗಳಲ್ಲಿ ನಡೆಯುವ ಚರ್ಚೆ ನೋಡಿದರೇ ಅಥವಾ ಕೇಳಿದರೆ ಗೊತ್ತಾಗತ್ತೆ ಅವರ ಬಗ್ಗೆ, ಅವರ ಯೋಗ್ಯತೆ ಬಗ್ಗೆ. ಆಡಳಿತ ಪಕ್ಷದ ಹುಳುಕನ್ನು ಕಂಡು ಹಿಡಿಯಲು ವಿರೋದ ಪಕ್ಷದವರು ಹಗಲಿರುಳು ಪ್ರಯತ್ನಿಸಿದರೇ, ಅದನ್ನು ತೇಪೆ ಹಾಕಲು ಆಡಳಿತ ಪಕ್ಷ ಒದ್ದಾಡುತ್ತಿರುತ್ತದೆ. ಯಾವ ಪಕ್ಷ ಅಧಿಕಾರಕ್ಕೆ ಬಂದ್ರು ಇದೇ ಗತಿ. ಹೀಗೆ ಅಗ್ತಾ ಇದ್ರೆ ನಮ್ಮ ದೇಶ ಏಲ್ಲಿ ಮುಂದುವರಿಯತ್ತೆ. ತಮಗಿಷ್ಟ ಬಂದ ಹಾಗೆ ಸಾರ್ವಜನಿಕರ ದುಡ್ದು ಪೋಲು ಮಾಡೋದು, ಜಾತಿ ರಾಜಕಾರಣ ಮಾಡೋದು...ಅಬ್ಬ..ಒಂದೇ... ಏರಡೇ.. ಯಾರದ್ದೋ ದುಡ್ಡು... ಏಲ್ಲಮ್ಮನ ಜಾತ್ರೆ


ಇಲ್ಲಿ ವ್ಯಕ್ತಿತ್ವದ ಆದಾರದ ಮೇಲೆ ಸಚಿವ ಸ್ಥಾನವಿಲ್ಲ, ಜಾತಿವಾರು ಆಧಾರದ ಮೇಲಿದೆ.ಇಷ್ಟೆಲ್ಲಾ ಆದ್ರೂ ಜನ ಅವರನ್ನ ಕೇಳೋಲ್ಲ. ಯಾಕೆ ಅವರ ಉಸಾಬರಿ ಅಂತ ಸುಮ್ನೆ ಇರ್ತಾರೆ. ತಾವಾಯ್ತು, ತಮ್ಮ ಕೆಲಸವಾಯ್ತು. ಇದರ ನಡುವೆ ಅಲ್ಲೋ ಇಲ್ಲೋ ಒಂದೆರಡು ರಾಜಕಾರಣಿಗಳು ಸಮರ್ಥರಿರುತ್ತಾರೆ. ಅಂತಹರಲ್ಲಿ ಏಂ.ಪಿ.ಪ್ರಕಾಶ್ ಕೂಡ ಒಬ್ಬರು. ನಾನೇನು ರಾಜಕೀಯ ವಿಶ್ಲೇಕನಲ್ಲ. ಪತ್ರಿಕೆಗಳಿಂದ, ಹಾಗು ಅವರ ನಡ ನುಡಿಯಿಂದ ನನಗನಿಸಿದ್ದು. ಅದಕ್ಕೆ ಹೇಳಿದ್ದು ಅವರು ರಾಜಕಾರಣದಿಂದ ನಿವೃತ್ತರಾಗೋದು ಬೇಸರದ ವಿಷಯ.

ಇನ್ನು ಸಂತೋಷ ಯಾಕೇ ಅಂತ ಕೇಳಬಹುದು. ಅವರು ಬರೀ ರಾಜಕಾರಣಿ ಆಗಿರಲಿಲ್ಲ. ಅವರೊಲ್ಲೊಬ್ಬ ಕವಿಯಿದ್ದ. ಅವರಿಗೆ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಒಲವಿತ್ತು. ನಿವೃತ್ತಿಯ ನಂತರ ಅವರು ಹೆಚ್ಚಾಗಿ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಅದರಿಂದ ನಮ್ಮ ಸಾಹಿತ್ಯ ಲೋಕಕ್ಕೆ ಒಳಿತಲ್ಲವೇ.

ಇವೆರಡನ್ನು ತುಲನೆ ಮಾಡಿದರೆ, ಅವರು ರಾಜಕೀಯದಲ್ಲಿದ್ದರೆ ಒಳ್ಳೇದು ಅನ್ಸತ್ತೆ ಅಲ್ವೇ? ಹೊಲಸೆದ್ದ ರಾಜಕಾರಣಕ್ಕೆ ಏಂ.ಪಿ.ಪ್ರಕಾಶ್ ಅಂತವರು ಬೇಕು.

Monday, April 16, 2007

ಬಿಡು ಗೆಳೆಯ

ಬಿಡು ಗೆಳೆಯ ನನ್ನನ್ನು
ಬಾಂದಳದ ಬಿಳಿ ಮೋಡದಂತೆ
ಒಂಟಿಯಾಗಲು ಬಿಡು ನನ್ನ
ನಿಂತೆ ನಿಂತಿರುವ ಬಾಹುಬಲಿಯಂತೆ

ಮಾನಸವೆ ಹೆಪ್ಪುಗಟ್ಟಿದೆ
ನಿಂತ ಜೀವದ ತುಂಬ
ನಕ್ಷತ್ರ ನಿಂತು ಬಿಟ್ಟಿದೆ
ಕಡಲ ನಾಭಿಯ ತುಂಬ

ಏನು ಮಾಡಲಿ ಹೇಳು ಗೆಳೆಯ
ಚಿಲ್ಲರೆಯಾಡುವ ಮಾತಿಗೆ
ಕಾಯುತಿದೆ ಇರುಳು ಅರಳುವ ಗ್ರಹಣ
ಬೆಂಕಿ ನೀಲಿಯ ಹೂವಿಗೆ

ನಂಬುವುದು ಹೇಗೆ
ಕಿತ್ತು ತಿನ್ನುವ ಮಾಗಿಗೆ
ನಂಬದಿರುವುದು ಹೇಗೆ
ಮರದ ಮೇಲಿನ ಕಾಯಿಗೆ

1999ನೇ ಸಾಲಿನಲ್ಲಿ ನಡೆದ "ಅಂತರ ಕಾಲೇಜ್ ಕವನ ಸ್ಪರ್ದೆ"ಯಲ್ಲಿ ಪ್ರಶಸ್ತಿ ಗಳಿಸಿದ ಕವನ

Tuesday, March 27, 2007

ಏಷ್ಟು ವಿಸ್ಮಯ ಅಲ್ವಾ ಈ ಜಗತ್ತು !!!

ಏಂದಿನಂತೆ ತಿಂಡಿಗೆಂದು ಹೋಟೆಲ್ ಕಡೆ ಹೆಜ್ಜೆ ಹಾಕ್ತಾಯಿದ್ದೆ. ಹಾಗೆ ಹೋಗೋವಾಗ ಆತ ಕಾಣಿಸ್ತಾನಾ ಅಂತ ನೋಡಿದೆ. ಆತ ಅಲ್ಲಿ ಇರಲಿಲ್ಲ. ಓಂದು ವಾರದಿಂದ ಆತ ಅಲ್ಲಿ ಇರಲಿಲ್ಲ. ಅವನ ಬಗ್ಗೆ ಮರುಕವುಂಟಾಯ್ತು.ಆತ ಏಲ್ಲಿರಬಹುದು ? ಎನ್ ಮಾಡ್ತಾಯಿರಬಹುದು? ಅಂತ ಮನಸ್ಸಲ್ಲಿ ಗೊಂದಲವುಂಟಾಯ್ತು. ಪಕ್ಕದಲ್ಲಿದ್ದ ಗೆಳೆಯನ ಹತ್ರ ಕೇಳ್ದೆ ಆತ ಏಲ್ಲಿರಬಹುದು ಅಂತ. ಅದ್ಕೆ ಯಾಕೆ ಅವನ ಬಗ್ಗೆ ತಲೆ ಕೆಡಿಸ್ಕೋತೀಯಾ, ಸತ್ತು ಹೋಗಿರಬೇಕು ಅಂದ. ಯಾಕೋ ಬೇಜಾರಯ್ತು. ದಿನಾ ತಿಂಡಿ ತಿನ್ನೋವಾಗ ಆತ ಅಲ್ಲೇ ಹೋಟೆಲ್ ಪಕ್ಕ ಇರ್ತಾಯಿದ್ದ. ಅಲ್ಲಿಗೆ ಬರೋರ್ ಹತ್ರ ಬಿಕ್ಷೆ ಬೇಡಿ ಬಂದ ದುಡ್ದಿಂದ ಟೀ ಕುಡಿತಾಯಿದ್ದ. ಬಹುಶಃ ಅದೇ ಅವನ ತಿಂಡಿಯಿರಬಹುದು!

ಆದರೆ ಅವನ ಓಂದು ಗುಣ ನನಗೇ ಬಹಳ ಹಿಡಿಸ್ತು. ಆತ ಬಿಕ್ಷೆ ನೀಡದಿದ್ದರೆ ಏನೂ ಹೇಳದೇ ಸುಮ್ಮನೆ ಮುಂದೆ ಹೋಗ್ತಾಯಿದ್ದ. ಕೆಲವೊಮ್ಮೆ ಯಾರೋ ಅರ್ದ ಕುಡಿದುಬಿಟ್ಟ ಕಾಫಿ/ಟೀ ಕುಡಿತಾಯಿದ್ದ. ಚೀ!!! ಅಂತ ನಿಮಗನಿಸಿರಬಹುದು. ಆದರೆ ಅವನಿಗೆ ಏಂಜಲಿಗಿಂತ ಓಂದು ಹೊತ್ತಿನ ಆಹಾರ ಮುಖ್ಯ. ನಾವು ಹೋಟೆಲ್ ಗಳಿಗೆ ಹೋಗ್ತೇವೆ. ಏಷ್ಟೋ ಕಡೆ ಪಾತ್ರೆ ತೊಳೀಲಿಕ್ಕ ಇರೋದು ೨ ಬಕೇಟ್ಟುಗಳು. ಅದನ್ನೇ ನಾವು ಕ್ಲೀನ್ ಅಂತ ತಿಳಿದು ತಿನ್ನ್ತೇವೆ. ಆದರೆ ಅವನಿಗೆ ಅದು ಅನಿವಾರ್ಯ. "ಕಾಲಾಯ ತಸ್ಮೈ ನಮಃ" ಅಲ್ವಾ?....

ಏಷ್ಟೋ ಸಲ ಅವನ ಮಾತಾಡಿಸಬೇಕು, ನಿಂದು ಯಾವೂರು, ನಿನ್ನವರು ಯಾರು ಇಲ್ವಾ, ನೀನ್ಯಾಕೆ ಬಿಕ್ಷೆ ಬೇಡ್ತೀಯ ಅಂತ. ಆದರೆ ಆತ ಅಂಟಿಕೊಂಡರೆ ಕಷ್ಟ ಅಂತ ಭಯ. ಸುಮಾರು ೧ ವರ್ಷದಿಂದ ಆತನನ್ನು ಗಮನಿಸ್ತಾ ಇದ್ದೆ. ಇತ್ತೀಚೆಗೆ ಬಹಳ ಸೋತು ಹೋಗಿದ್ದ. ಮೊದಲಿದ್ದ ಉತ್ಸಾಹ ಇರಲಿಲ್ಲ. ಜೀವನದ ಸಂದ್ಯಾಕಾಲದಲ್ಲಿದ್ದ. ಕೋಲು ಹಿಡಿದು ನಡೆದಾಡ್ತಾ ಇದ್ದ. ಅಲ್ಲೇ ಹೋಟೆಲ್ ಪಕ್ಕ ಮಲಗ್ತಾ ಇದ್ದ. ಅದೇ ಅವನ ಅರಮನೆ. ಒಂದು ವಾರದ ಹಿಂದೆ ಆತ ಮಲಗಿದ್ದನ್ನು ನೋಡಿದ್ದೆ. ಈಗ ಇಲ್ಲ. ಅವನು ಮಲಗುತ್ತಿದ್ದ ಜಾಗದಲ್ಲಿ ಏನೂ ಇಲ್ಲ. ಬಹುಶಃ ಈ ಲೋಕ ಬಿಟ್ಟು ಹೋಗಿರಬೇಕು. ಅವನು ಹೋದಾಗ ಯಾರೂ ಅಳಲಿಲ್ಲ.

ಏಷ್ಟು ವಿಸ್ಮಯ ಅಲ್ವಾ ಈ ಜಗತ್ತು. ಇನ್ನೊಂದು ಕ್ಷಣದಲ್ಲಿ ಏನಾಗತ್ತೆ ಅಂತ ಅರಿವಿರುವುದಿಲ್ಲ. ಇಲ್ಲಿ ಯಾರಿಗೆ ಯಾರೂ ಇಲ್ಲ. ನಾಳೆ ನಮಗೆ ಆತನಿಗಾದ ಹಾಗೆ ಆಗಬಹುದು.

ಏನು ಜೀವನಾರ್ಥ? ಏನು ಪ್ರಪಂಚಾರ್ಥ?
ಏನು ಜೀವ ಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದು ಏನಾನುಮುಂಟೆ? ಅದೇನು?
ಜ್ಞಾನ ಪ್ರಮಾಣವೇಂ? - ಮಂಕುತಿಮ್ಮ

Wednesday, March 21, 2007

ಹುಡುಕಾಟನೋ ಅಥವಾ ಹುಡುಗಾಟನೋ

ಏನ್ ಬರೀಬೇಕು ಅಂತ ಗೊತ್ತಾಗ್ತಾ ಇಲ್ಲ. ಹುಡುಕ್ತಾ ಇದೀನಿ.

ಹುಡುಕಾಟನೋ ಅಥವಾ ಹುಡುಗಾಟನೋ ಅಂತ ಕೇಳ್ಬೇಡಿ.

ನಮ್ಮ ಜೀವನವೇ ಓಂದು ರೀತಿ ಹುಡುಕಾಟ ಅಲ್ವಾ? ಕೆಲವರಿಗೆ ಗುರಿ ಇರತ್ತೆ, ಕೆಲವರಿಗೆ ಇರಲ್ಲ. ಸುಮ್ಮನೇ ಹುಡುಕ್ತಾ ಇರ್ತಾರೆ. ಇಂಟರ್ ವ್ಯೂನಲ್ಲಿ ನಲ್ಲಿ ಕೇಳಿದ ಹಾಗೆ ಯಾರಾದ್ರು ಬಂದು ನಿಮ್ಮ ಜೀವನದ ಗುರಿ ಎನು ಅಂತ ಕೇಳಿದ್ರೆ ಯಾರ ಹತ್ರನೂ ಸರಿಯಾದ ಉತ್ತರ ಇರಲ್ಲ.

ನಮ್ಮೂರಲ್ಲಿ ದನಕಾಯೋ ಮಂಜು ಅಂತ ಓಬ್ಬ ಇದ್ದ. ಅವನಿಗೆ ಮಕ್ಕಳು ಇರ್ಲಿಲ್ಲ. ದಿನ ಬೆಳಗಾದ್ರೆ ಏಲ್ಲರ ಮನೆ ದನ ಹೊಡೇದುಕೊಂಡು ಗುಡ್ಡಕ್ಕೆ ಹೋಗ್ತಾ ಇದ್ದ. ಹೋಗೋವಾಗ ಮದ್ಯಾನ್ನಕ್ಕೆ ಬುತ್ತಿ ತಗೊಂಡು ಹೋಗಿ ಸೂರ್ಯ ಮುಳುಗೋ ಹೊತ್ತಿಗೆ ವಾಪಾಸ್ ಬರ್ತಾ ಇದ್ದ. ನಾವು ಅವಾಗ ಸಣ್ಣವರು. ಅಲ್ಲಿ ಮಂಜು ಏನ್ ಮಾಡ್ತಾನೆ ಅಂತ ಅಮ್ಮನ ಹತ್ರ ಕೇಳಿದ್ದೆ. ಅಲ್ಲಿ ದನ ಕಾಯ್ತಾನೆ ಅಂದಿದ್ಲು. ನಾವು ಸರಿಯಾಗಿ ಓದದೆ ಹೋದ್ರೆ ನೀನು ದನಕಾಯೋಕೆ ಹೋಗು ಅಂತಿದ್ಲು. ದನ ಕಾಯೋದು ಅಂದ್ರೆ ಜನ ನಗ್ತಾರೆ ಅಂತ ಆಗ ನನಗನಿಸ್ತಾ ಇತ್ತು.

ಈಗ e-ಕೆಲಸ, ಈ ಡೆಡ್ ಲೈನು, ಈ ಟ್ರಾಫಿಕ್ಕು ಏಲ್ಲಾ ನೋಡಿದ್ರೆ ದನ ಕಾಯೋದೇ ವಾಸಿ ಅನ್ಸತ್ತೆ. ಅಲ್ಲಿ ಹೋಗಿ ದನ ಮೇಯಸ್ಲಿಕ್ಕೆ ಬಿಟ್ಟು, ಕಥೆ, ಕವನ, ಪ್ರಕೃತಿ ಏಲ್ಲಾ ನೋಡ್ಕೊಂಡು ಇರೋದೇ ವಾಸಿ ಅಲ್ವಾ?ಇಲ್ಲಿ ಕತ್ತೆ ದುಡಿದ ಹಾಗೆ ದುಡಿದು, ತಿಂಗಳ ಕೊನೇ ಯಾವಾಗ ಬರತ್ತೆ ಅಂತ ಕಾದು, ಬಂದ ದುಡ್ದನ್ನು ಮೂರೇ ದಿನದಲ್ಲಿ ಮುಕ್ಕಿ ಮತ್ತೆ ತಿಂಗಳ ಕೊನೆಗೇ ಕಾಯ್ಬೇಕು. ಇಷ್ಟೆಲ್ಲಾ ಮಾಡೋದು ಯಾಕೆ? ಹೊಟ್ಟೆಗಾಗೀ ಗೇಣು ಬಟ್ಟೆಗಾಗಿ ಅಲ್ವಾ?

ಸುಖ, ಸಂತೋಷ, ನೆಮ್ಮದಿ ಏಲ್ಲಾ ನಮ್ಮೊಳಗೇ ಇರತ್ತೆ ಅಲ್ವಾ ?

ಕಾಲನ ಹೊಡೆತಕ್ಕೆ ಸಿಕ್ಕು ಈಗ ದನಕಾಯೋ ಕೆಲಸನೂ ಮಾಯವಾಗಿ ಹೋಗಿದೆ. ಮನೆಯಲ್ಲಿ ದನ ಸಾಕೋದು ಕಷ್ಟ, ಅದರ ನಿರ್ವಹಣೆ ಕಷ್ಟ ಅಂತ ಏಲ್ಲಾ ಸಬೂಬು ಕೊಟ್ಟು ಜನ ಅನಾದಿ ಕಾಲದಿಂದ ಬಂದ ಜೀವನದ ಅವಿಭಾಜ್ಯ ಅಂಗವಾದ ಕೊಟ್ಟಿಗೆಯನ್ನು ಏತ್ತಂಗಡಿ ಮಾಡಿದಾರೆ. ಈಗ ದನಕಾಯೋ ಮಂಜುನೂ ಇಲ್ಲ, ದನಕಾಯೋ ಕೆಲ್ಸನೂ ಇಲ್ಲ. ಅವನು ಸತ್ತ ಕೆಲವು ವರ್ಷದ ನಂತರ ಅವನ ಹೆಂಡತಿ ಮಂಜಿಯೂ ಅವನ ದಾರಿ ಹಿಡಿದ್ಲು. ರಸ್ತೆ ಬದಿ ಅವನ ಮುರಕಲು ಗುಡಿಸಲು, ಅರ್ದಬಿದ್ದ ಗೋಡೆಗಳು ನಮ್ಮನ್ನು ನೋಡಿ ಯಾವದೂ ಶಾಶ್ವತ ಅಲ್ಲ ಅಂತ ಅಣಕಿಸ್ತಾ ಇದ್ದ ಹಾಗೆ ಅನ್ನಿಸತ್ತೆ.

ಮೊದ್ಲು ಏನ್ ಬರೀಬೇಕು ಅಂತ ಗೊತ್ತಾಗ್ಲಿಲ್ಲ. ಆದ್ರೆ ಬರೀತಾ ಹೋದ ಹಾಗೆ ವಿಷಯಗಳು ನೆನಪಾಗ್ತಾ ಬಂತು.

Thursday, March 15, 2007

ಮಾಮರವೆಲ್ಲೋ ಕೋಗಿಲೆ ಎಲ್ಲೋ

ಸೂರ್ಯನು ಎಲ್ಲೋ ತಾವರೆ ಎಲ್ಲೋ
ಕಾಣಲು ಕಾತರ ಕಾರಣವೇನೋ
ಚಂದಿರನೆಲ್ಲೋ ನೈದಿಲೆ ಎಲ್ಲೋ
ನೋಡಲು ಅರಳುವ ಸಡಗರವೇನೋ
ಎಲ್ಲೇ ಇರಲೀ ಹೇಗೇ ಇರಲೀ
ಕಾಣುವ ಆಸೆ ಏತಕೋ ಏನೋ....

ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ..

ಏಷ್ಟು ಅದ್ಬುತವಾದ ಸಾಹಿತ್ಯ ಅಲ್ವಾ? ಇನ್ನು ಇನ್ನು ಕೇಳೋಣ ಅಂತ ಅನ್ನಿಸತ್ತೆ.ಬಹುಶಃ ಚಿತ್ರಗೀತೆಗಳಿಗೇನಾದರೂ ಜ್ಙಾನಪೀಠ ಕೊಡೋದಿದ್ರೆ ಚಿ.ಉದಯಶಂಕರ ಅವರಿಗೆ ಸಲ್ಲಬೇಕಾಗಿತ್ತು.ಇತ್ತೀಚಿನ ದಿನಗಳಲ್ಲಿ ಈ ರೀತಿ ಸಾಹಿತ್ಯ ಮರೆಯಾಗಿ ಹೋಗಿದೆ ಅಂತ ಅನ್ನಿಸ್ತಾಯಿದೆ. ಏಲ್ಲೋ ಅಪರೂಪಕ್ಕೆ ಓಂದೆರಡು ಕಾಣಸಿಗುತ್ತವೆ. ಅದೇನಾದ್ರು ಹಿಟ್ ಆದ್ರೆ ಅದರ ಹಾಗೆ ಸಾಹಿತ್ಯಗಳಿರುವ ಮತ್ತೊಂದಿಷ್ಟು ಹಾಡುಗಳು ಬರತ್ವೆ. "ಸರ್ವಂ ಕಾಪಿಮಯ"

ಏಲ್ಲಿಗೇ ಪಯಣಾ.....ಯಾವುದೋ ದಾರಿ ...ಏಕಾಂಗಿ ಸಂಚಾರಿ ...

ಇದು ಮೊನ್ನೆ ನಮ್ಮ ಕುಟುಂಬದ ನಾವಿಕನಾದ ಪ್ರೀತಿಯ ಅಜ್ಜನ ಚಿತೆಗೆ ಅಗ್ನಿಸ್ಪರ್ಷ ಮಾಡಿದಾಗ ನೆನಪಾಗಿದ್ದು. ಈಗ ಅಜ್ಜ ಏಲ್ಲಿರಬಹುದು,ಏನ್ ಮಾಡ್ತಾಯಿರಬಹುದು ಏಂಬೆಲ್ಲಾ ತರ್ಕಗಳು ಮನಸ್ಸಲ್ಲಿ ಬಂತು. ಮನುಷ್ಯ ವಿಜ್ಙಾನದಲ್ಲಿ ಏಷ್ಟೇ ಸಾಧನೆ ಮಾಡಿದರೂ ಇದುವರೆಗೂ ಯಾರಿಗೂ ಹುಟ್ಟು ಸಾವುಗಳ ಬಗ್ಗೆಯಾಗಲಿ, ಸತ್ತ ಮೇಲೆ ಮನುಷ್ಯ ಏಲ್ಲಿಗೆ ಹೋಗ್ತಾನೆ? ಹುಟ್ಟೊಕ್ಕಿಂತ ಮುಂಚೆ ಏಲ್ಲಿದ್ದ ಏನ್ನುವುದು ತಿಳಿದಿಲ್ಲ.



ಬೆಂಗಳೂರಿನಿಂದ ಊರಿಗೆ ಹೋದಾಗ ಮನೆಯಲ್ಲಿ ಸ್ಮಷಾನ ಮೌನ. ಅಜ್ಜನ ದೇಹ ಚಾವಡಿಯಲ್ಲಿತ್ತು. ಅರ್ದ ಮುಚ್ಚಿದ ಕಣ್ಣುಗಳು, ಬರೀ ಮೂಳೆಗಳ ದೇಹ, ಅರ್ದ ತೆರೆದ ಬಾಯಿ, ಜೀವನದ ದಾರಿ ದಿಕ್ಕಾಗಿದ್ದ ಗಂಡನ ಕಳೆದುಕೊಂಡ,ಅತ್ತೂ ಅತ್ತೂ ಇನ್ನು ಕಣ್ಣಲ್ಲಿ ನೀರಿಲ್ಲದೆ ಅಜ್ಜನ ಪಕ್ಕ ಕುಳಿತಿದ್ದ ದೊಡ್ಡಮ್ಮ(ಅಜ್ಜಿ)..ಇದೆಲ್ಲ ಇನ್ನೂ ಕಣ್ಮುಂದೆ ಬರುತ್ತೆ. ನಂತರ ಅಜ್ಜನ ದೇಹವನ್ನು ಅಂಗಳದಲ್ಲಿಟ್ಟು, ಕೆಲವು ಧಾರ್ಮಿಕ ಕ್ರಿಯೆಯ ನಂತರ ದೇಹವನ್ನು ಗುಡ್ಡಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಮತ್ತೆ ಕೆಲವು ಧಾರ್ಮಿಕ ಕ್ರಿಯಗಳು.ಅಜ್ಜನ ಸುತ್ತ ಬಟ್ಟೆಯಿಂದ ಗಾಳಿ ಬೀಸಿದಾಗ ಓಮ್ಮೆ ಆಶ್ಚರ್ಯವಾಯ್ತು. ಅದರ ಅರ್ಥ ತಿಳಿದಾಗ ಮನಸ್ಸು ಏಲ್ಲೊ ಹರಿದಾಡುತ್ತಿತ್ತು. ನಿನ್ನ ಮುಂದಿನ ಪಯಣವು ಸುಖಕರವಾಗಿರಲಿ, ತಂಪಾದ ಗಾಳಿ ಬೀಸಲಿ ಏಂದು. ಅಜ್ಜನ ಚಿತೆ ಸಂಪೂರ್ಣ ಉರಿದು ಹೋಗುವ ತನಕ ಅಲ್ಲೇ ಇದ್ದೆ. ಚಿತೆ ಉರಿದ ಹಾಗೇ ನನ್ನ ಮನಸ್ಸೂ ಸಹ ಶೂನ್ಯದತ್ತ ಹೊಯ್ತು. ಮನಸ್ಸಲ್ಲಿ ಹೇಳಲಾಗದ ವೇದನೆ. ಅಜ್ಜ ಇನ್ನೂ ಇದ್ದಾನೇ ಅಂತ ಏಲ್ಲೊ ಹೇಳುವ ಓಳಮನಸ್ಸು...

ಏಲ್ಲಿಗೇ ಪಯಣಾ.....ಯಾವುದೋ ದಾರಿ ...ಏಕಾಂಗಿ ಸಂಚಾರಿ ...