Tuesday, February 19, 2008

ನಾನು ಸ್ವಾಮಿಯಾಗಿದ್ದು...

ಹಾಂ ಕನಸಿನಲ್ಲಿ ಸ್ವಾಮಿಯಾಗಿದ್ದಲ್ಲ!!! ನಿಜವಾಗ್ಲೂ ಆಗಿದ್ದೆ.

"ಮೊನ್ನೆ ಯಜ್ಞೇಶ್ ಸ್ವಾಮಿಗಳು ಮೈಲ್ ಮಾಡಿದ್ರು" ಅಂತ ಗೋಮಾತಾ ಶರ್ಮ ಅವ್ರು ಹೇಳ್ದಾಗ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳವರಿಗೆ ನಗು ತಡೆಯೋಕಾಗಿಲ್ವಂತೆ. ಆಗ ಅವ್ರು ಆತ ಸ್ವಾಮಿಯಲ್ಲ, ಅವ್ನಿಗೆ ಮದ್ವೆಯಾಗಿದೆ ಅಂತ ನಗ್ತಾ ಹೇಳಿದ್ರಂತೆ.

ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಇಂಜಿನೀಯರ್ಸ್ ಮೀಟಿಂಗ್ ಕೆಲವು ತಿಂಗಳುಗಳ ಹಿಂದೆ ನಡೆದಿತ್ತು. ಅದರ ಇನ್ನುಂದು ಮೀಟಿಂಗ್ ಇದ್ದಿದರಿಂದ ನಾನು ನನ್ನ ಆಫೀಸ್ ಮೈಲ್ ನಿಂದ ಎಲ್ಲರಿಗೂ ವಿಷಯ ತಿಳಿಸಿದ್ದೆ . ಆದ್ರೆ ಅಂದು ನನಗೆ ಅಲ್ಲಿಗೆ ಹೋಗೋಕೆ ಆಗಿರಲಿಲ್ಲ. ಆಗ ಗೋಮಾತಾ ಶರ್ಮ ಅವ್ರು ನನ್ನ ಹೆಸ್ರು ಹೇಳಿದ್ರಂತೆ.

ವಿಷಯ ಏನಪ್ಪ ಅಂದ್ರೆ, ಕಂಪನಿಯಲ್ಲಿ ಮೈಲ್ ಐಡಿ ಕೊಡುವಾಗ ಹೆಸ್ರು.ಅಪ್ಪನ ಹೆಸ್ರು ಅಥವಾ ಉರಿನ ಹೆಸ್ರು ಕೊಡೋದು ಸಹಜ. ನನ್ನ ಅಪ್ಪನ ಹೆಸ್ರು ನಾರಾಯಣಸ್ವಾಮಿ ಭಟ್ . ಆದ್ರೆ ನನ್ನ ರೆಕಾರ್ಡ್ಸ್ ನಲ್ಲಿ ಅದು ಬರೀ ನಾರಾಯಣಸ್ವಾಮಿಯಾಗಿತ್ತು. ನಾನು ಆಫೀಸಿಗೆ ಸೇರೋವಾಗ ಕಾಲಂ ನಲ್ಲಿ ನಾರಾಯಣಸ್ವಾಮಿ ಅಂತನೇ ಬರೆದಿದ್ದೆ. ಆದ್ರೆ ಮದ್ಯೆ ಎಲ್ಲೋ ಗ್ಯಾಪ್ ಇತ್ತು ಅನ್ಸತ್ತೆ. ಅದು yajnesh.swamy ಅಂತ ಆಗಿತ್ತು.

ಅದನ್ನ ಗೋಮಾತಾ ಶರ್ಮ ಅವ್ರು ಸರಿಯಾಗೇ ಹೇಳಿದ್ರು. ಆದ್ರೆ ಅಲ್ಲಿ ಇದ್ದವರಿಗೆ ಒಂದ್ಸಲ ಆಶ್ಚರ್ಯ ಆಯ್ತು. ಎಲ್ಲರಿಗೂ ನಾನು ಭಟ್ ಆಗಿದ್ದೆ. ಆದ್ರೆ ಅಂದು ಸ್ವಾಮಿಯಾಗಿದ್ದೆ.

"ನೀನು ಯಾವಾಗ ಸ್ವಾಮಿಯಾದೆ" ಅಂತ ಈಗ್ಲೂ ನನ್ನ ಫ್ರೆಂಡ್ಸ್ ಕೇಳ್ತ ಇರ್ತಾರೆ. ನಾನು ಸುಮ್ಮನೆ ನಕ್ಕುಬಿಡ್ತೀನಿ

2 comments:

Sushrutha Dodderi said...

ಪ್ರಿಯ ಯಜ್ಞೇಶಣ್ಣ,

ನಮಸ್ಕಾರ. ಹೇಗಿದ್ದೀ?

ನಿಂಗೂ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು


ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ಯಜ್ಞೇಶ್ (yajnesh) said...

ಆತ್ಮೀಯ ಸುಶ್ರುತ,

ಖಂಡಿತಾ ಬತ್ತಿ. ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು